AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi News: ಉಚಿತ ವಿದ್ಯುತ್ ಸಿಗುವ ನಿರೀಕ್ಷೆಯಲ್ಲಿದ್ದವರಿಗೆ ಬಂತು ದುಪ್ಪಟ್ಟು ಬಿಲ್; ಬೆಳಗಾವಿ ಜನರಿಗೆ ಶಾಕ್

ವಿದ್ಯುತ್ ಬಿಲ್ ಕಂಡು ಕಕ್ಕಾಬಿಕ್ಕಿಯಾದ ಗ್ರಾಹಕರು, ನಿಮ್ಮ ಸರ್ಕಾರಕ್ಕೆ ಬೆಂಕಿ ಹಚ್ಚಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ‌ ನಡೆಸಿದ್ದಾರೆ.

Belagavi News: ಉಚಿತ ವಿದ್ಯುತ್ ಸಿಗುವ ನಿರೀಕ್ಷೆಯಲ್ಲಿದ್ದವರಿಗೆ ಬಂತು ದುಪ್ಪಟ್ಟು ಬಿಲ್; ಬೆಳಗಾವಿ ಜನರಿಗೆ ಶಾಕ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jun 07, 2023 | 3:39 PM

Share

ಬೆಳಗಾವಿ: ಉಚಿತ ವಿದ್ಯುತ್ ಸಿಗಲಿದೆ ಎಂಬ ನಿರೀಕ್ಷೆಲ್ಲಿದ್ದ ನಮಗೆ ಸರ್ಕಾರ ದುಪ್ಪಟ್ಟು ವಿದ್ಯುತ್ ಬಿಲ್ (Electricity Bill) ನೀಡುವ ಮೂಲಕ ಶಾಕ್ ಕೊಟ್ಟಿದೆ ಎಂದು ಬೆಳಗಾವಿ (Belagavi) ನಿವಾಸಿಗಳು ದೂರಿದ್ದಾರೆ. ಯುನಿಟ್ ಲೆಕ್ಕದಲ್ಲಿ ಹೆಳಚ್ಚಳ ಮಾಡಿ ದರ ಹೆಚ್ಚಿಸಲಾಗಿದೆ. ಮೇ ತಿಂಗಳಲ್ಲಿ ಪಾವತಿಸಿದ ಬಿಲ್‌ಗಿಂತ ಈ ಬಾರಿ ದುಪ್ಪಟ್ಟು ಬಿಲ್‌ ಬಂದಿದೆ. ಈ ಹಿಂದೆ ಗರಿಷ್ಠ 400 ರೂ. ವರೆಗೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದವರ ಮನೆಗೆ ಈ ಬಾರಿ 1000 ರೂ. ವರೆಗೆ ಬಿಲ್ ಬಂದಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ವಿದ್ಯುತ್ ಬಿಲ್ ಕಂಡು ಕಕ್ಕಾಬಿಕ್ಕಿಯಾದ ಗ್ರಾಹಕರು, ನಿಮ್ಮ ಸರ್ಕಾರಕ್ಕೆ ಬೆಂಕಿ ಹಚ್ಚಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ‌ ನಡೆಸಿದ್ದಾರೆ.

ನಿಮ್ಮ ಗ್ಯಾರಂಟಿ ಎನೂ ಬೇಡಾ. ಬೆಲೆ ಏರಿಕೆಯನ್ನು ಕಡಿಮೆ ಮಾಡಿದ್ರೇ ಸಾಕು. ಐದು ಕೆಜಿ ಅಕ್ಕಿ ಕೊಟ್ಟು ಮೊದಲಿದ್ದ ದರ ಮಾಡಿದ್ರೇ ಸಾಕು. ಇನ್ನೂರು ಯುನಿಟ್ ಫ್ರೀ ಅಂತಾ ಹೇಳಿ ಈಗ ಯುನಿಟ್ ಲೆಕ್ಕದಲ್ಲಿ ಹೆಚ್ಚಿಗೆ ಮಾಡಿ ಬಿಲ್ ಕಟ್ಟಿಸಿಕೊಳ್ತಿದ್ದೀರಿ. ಬಿಲ್ ಕಟ್ಟದಿದ್ರೇ ಕರೆಂಟ್ ಕಟ್ ಮಾಡ್ತೇವಿ ಅಂತೀರಿ‌. ವೋಟ್ ಹಾಕಿ ಗೆಲ್ಲಿಸಿಕೊಂಡು ಬಂದಿದ್ದಕ್ಕೆ ಈ ರೀತಿ ಮಾಡೋದು ಸರಿಯಲ್ಲ. ಎನೇ ಆದ್ರೂ ನಾವು ಬಿಲ್ ಕಟ್ಟುವುದಿಲ್ಲ ಅಂತಾ ಮಹಿಳೆಯರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಇದೆ‌ ಎಂದು ಕನಕಲಕ್ಷ್ಮಿ ಎಂಬವರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಉಚಿತ ಗ್ಯಾರಂಟಿ ಚುನಾವಣಾ ಗಿಮಿಕ್ ಅಷ್ಟೇ ಎಂದ ಸಚಿವ ಚೆಲುವರಾಯಸ್ವಾಮಿ; ಇನ್ನೂ ಏನೇನಂದ್ರು? ವಿಡಿಯೋ ನೋಡಿ

ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ನಮಗೆ ಕರೆಂಟ್ ಶಾಕ್ ನೀಡಿದೆ ಅಂತ ಬಿಕ್ಕಿ ಬಿಕ್ಕ ಅತ್ತ ಮಹಿಳೆ, ಚುನಾವಣೆ ವೇಳೆ ಎಲ್ಲರಿಗೂ ಫ್ರೀ ಅಂದಿದ್ದರು. ಈಗ ಸಾವಿರ ಸಾವಿರ ಬಿಲ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡವರನ್ನು ಹೀಗೆ ಸಾಯಿಸುವ ಬದಲು ಗುಂಡು ಹೊಡೆದು ಸಾಯಿಸಲಿ ಎಂದು ತಕ್ಕಣ್ಣ ಬಂಡಾ ಎಂಬವರು ಕಿಡಿಕಾರಿದ್ದಾರೆ. ಉಚಿತ ವಿದ್ಯುತ್ ಘೋಷಣೆ ಬಳಿಕವೇ ಬಡ ಕುಟುಂಬಗಳಿಂದ ಸಾವಿರ ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಬಿಲ್ ಇಷ್ಟೊಂದು ಯಾಕೆ ಅಂತ ಪ್ರಶ್ನೆ ಮಾಡಿದ್ರೆ ನಮಗೆ ಗೋತ್ತಿಲ್ಲ ಸರ್ಕಾರಕ್ಕೆ ಕೇಳಿ ಅಂತಿದ್ದಾರೆ ಹೆಸ್ಕಾಂ ಸಿಬ್ಬಂದಿ ಎಂದು ಅವರು ದೂರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್