AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟು ಬಿಡದ ಸತೀಶ್ ಜಾರಕಿಹೊಳಿ: ಹಿಂದೂ ಪದದ ಅರ್ಥ ಸೋತವರು, ಗುಲಾಮರು, ಡಕಾಯಿತರು ಎಂಬ ದಾಖಲೆ ಬಿಡುಗಡೆ

ಮಡಿವಂತ ಬ್ರಾಹ್ಮಣರು ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳಲು ಹೇಸಿಕೊಳ್ಳುತ್ತಾರೆ. ದ್ರಾವಿಡರ ಶಿವನನ್ನು ವೇದಗಳ ರುದ್ರನಿಗೆ ಸಮೀಕರಿಸಿದ ಆರ್ಯರು ಜನಿವಾರ ತೊಡಿಸಿದರು ಎಂಬ ವಿವರವನ್ನು ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ.

ಪಟ್ಟು ಬಿಡದ ಸತೀಶ್ ಜಾರಕಿಹೊಳಿ: ಹಿಂದೂ ಪದದ ಅರ್ಥ ಸೋತವರು, ಗುಲಾಮರು, ಡಕಾಯಿತರು ಎಂಬ ದಾಖಲೆ ಬಿಡುಗಡೆ
ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ. (ಒಳಚಿತ್ರದಲ್ಲಿ ಅವರು ಬಿಡುಗಡೆ ಮಾಡಿರುವ ಸ್ಕ್ರೀನ್​ಶಾಟ್​)
TV9 Web
| Edited By: |

Updated on:Nov 08, 2022 | 3:44 PM

Share

ಬೆಳಗಾವಿ: ಹಿಂದೂ ಶಬ್ದಕ್ಕೆ ಇರುವ ಅರ್ಥ ಸೋತವರು ಅಥವಾ ಗುಲಾಮರು ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು. ವಿಕಿಪೀಡಿಯಾ ಮತ್ತು ಕೋರಾ (Quora) ಆನ್​ಲೈನ್ ​ ವೇದಿಕೆಗಳಲ್ಲಿರುವ ವಿವರಗಳ ಜೊತೆಗೆ ‘ಬಸವ ಭಾರತ’ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್.ಪಾಟೀಲ್ ಬರೆದ ಲೇಖನವನ್ನೂ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. ‘ನನ್ನ ಹೇಳಿಕೆಯ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚೆಯಾಗುತ್ತಿಲ್ಲ’ ಎಂದು ವಿಷಾದಿಸಿದರು. ‘ನೀವು ಹಿಂದೂ ಧರ್ಮಕ್ಕೆ ಸೇರಿದವರೇ’ ಎಂಬ ಪ್ರಶ್ನೆಗೆ ಉತ್ತರಿಸುವಾಗ, ‘ನಾನು ಭಾರತೀಯ’ ಎಂದು ಹೇಳಿದರು.

ತಮ್ಮ ಹೇಳಿಕೆಯ ಕುರಿತು ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನೇ ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು. ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

‘ಹಿಂದೂ ಎಂದರೆ ಹಾದಿಗಳ್ಳ’

ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿರುವ ಕೋರಾ ಸ್ರೀನ್​ಶಾಟ್​​ನಲ್ಲಿ ಇರುವ ವಿವರದ ಕನ್ನಡದ ಅನುವಾದ ಹೀಗಿದೆ. ‘(ಹಿಂದೂ ಎನ್ನುವುದು) ಪರ್ಷಿಯನ್ ಪದ. ಅದರ ಅರ್ಥ ಸೋತವರು ಅಥವಾ ಗುಲಾಮರು. 1964ರಲ್ಲಿ ಲಖನೌ ನಗರದಲ್ಲಿ ಪ್ರಕಟವಾಗಿರುವ ‘ಲುಘೆತ್-ಎ-ಕಿಶ್​ವಾರಿ’ ಪರ್ಷಿಯನ್ ನಿಘಂಟಿನ ಪ್ರಕಾರ ಹಿಂದೂ ಎನ್ನುವ ಪದಕ್ಕೆ ಕಳ್ಳ, ಡಕಾಯಿತ, ಗುಲಾಮ, ಹಾದಿಗಳ್ಳ ಎಂಬ ಅರ್ಥಗಳಿವೆ’. ಈ ಸ್ಕ್ರೀನ್​ಶಾಟ್ ಜೊತೆಗೆ ಅದರ ವಿವರವನ್ನೂ ಸತೀಶ್ ಜಾರಕಿಹೊಳಿ ತಮ್ಮ ಮಾಧ್ಯಮಗೋಷ್ಠಿಯಲ್ಲಿ ನೀಡಿದರು.

‘ಸಾಮಾಜಿಕ ಮಾಧ್ಯಮ’ ರೀತಿಯಲ್ಲಿ ಕಾರ್ಯನಿರ್ವಹಿಸುವ ಆದರೆ ‘ಸಂವಾದ ತಾಣ’ ಎಂದು ಕರೆಸಿಕೊಳ್ಳುವ ‘ಕೋರಾ’ ವೇದಿಕೆಯಲ್ಲಿರುವ ಪ್ರಶ್ನೋತ್ತರ ಸಂವಾದದ ಗೂಗಲ್​ಸರ್ಚ್ ರಿಸಲ್ಟ್​ನ​ ಸ್ಕ್ರೀನ್​ಶಾಟ್ ಒಂದನ್ನು ದಾಖಲೆ ಎಂದು ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ಆದರೆ ಕೋರಾ ತಾಣದಲ್ಲಿ ಯಾರು ಬೇಕಾದರೂ ಯಾವ ಪ್ರಶ್ನೆಯನ್ನು ಬೇಕಾದರೂ ಕೇಳಲು ಹಾಗೂ ಉತ್ತರಿಸಲು ಅವಕಾಶವಿದೆ. ಈ ಸಂವಾದವನ್ನು ಅಧಿಕೃತ ದಾಖಲೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ.

‘ಹಿಂದೂಗಳ ನಿಷ್ಠೆ ಇಂದಿಗೂ ಮಧ್ಯಪ್ರಾಚ್ಯಕ್ಕೆ’

ಸತೀಶ್ ಜಾರಕಿಹೊಳಿ ಅವರು ‘ಬಸವ ಭಾರತ’ ಪಾಕ್ಷಿತ ಪತ್ರಿಕೆಯಲ್ಲಿ ಪ್ರಕಟವಾಗಿರುವ ‘ಹಿಂದೂ ಎಂದರೆ ನಿಜವಾಗಿಯೂ ಯಾರು?’ ಎಂಬ ಲೇಖನದ ಜೆರಾಕ್ಸ್ ಪ್ರತಿಗಳನ್ನು ಮಾಧ್ಯಮಗೋಷ್ಠಿಯಲ್ಲಿ ವಿತರಿಸಿದರು. ಆದರೆ ಈ ಪ್ರತಿಗಳಲ್ಲಿ ಎಲ್ಲಿಯೂ ಅದು ನಿರ್ದಿಷ್ಟವಾಗಿ ಇಂಥದ್ದ ಪತ್ರಿಕೆಯ ಪುಟ ಎಂಬ ಉಲ್ಲೇಖ ಇಲ್ಲ. ವಿಜಯಪುರದ ಡಾ ಜೆ.ಎಸ್.ಪಾಟೀಲ ಅವರ ಬರಹ ಈ ಪುಟದಲ್ಲಿದೆ. ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ಮುಖ್ಯ ಅಂಶಗಳು ಇವು.

  1. ಬ್ರಾಹ್ಮಣ ಧರ್ಮೀಯರು ವಿದೇಶಗಳಿಂದ ಬಂದ ದಾಳಿಕೋರರನ್ನು ಕ್ಷತ್ರಿಯ ಎಂಬ ಹೆಸರಿಟ್ಟು ಚಾತುರ್ವಣ್ಯ ಧರ್ಮವನ್ನು ಅಸ್ತಿತ್ವಕ್ಕೆ ತಂದರು. ಇವರಿಗೆ ಹೊಂದಾಣಿಕೆಯಾಗದ ಮೂಲ ಬುಡಕಟ್ಟುಗಳನ್ನು ಶೂದ್ರರನ್ನಾಗಿ ಮಾಡಿದರು. ಅನಂತರ ರಾಮಾಯಣ, ಮಹಾಭಾರತಗಳು ಮಹಾಕಾವ್ಯಗಳಾದವು.
  2. ಹಿಂದೂ ಎನ್ನುವುದು ಪ್ರಾದೇಶಿಕ ಗುರುತಿಸುವಿಕೆಯೇ ಹೊರತು ಧರ್ಮವಾಚಕ ಅಲ್ಲ. ಪರ್ಷಿಯನ್ ಭಾಷೆಯಲ್ಲಿ ‘ಸ’ ಕಾರ ಇಲ್ಲ. ಹೀಗಾಗಿ ಸಿಂಧೂ ನದಿಯ ಈ ಕಡೆಗೆ ಇರುವ ಜನರನ್ನು ಹಿಂದೂ ಎಂದು ಕರೆದರು.
  3. ದಯಾನಂದ ಸರಸ್ವತಿ ಅವರು 1880-90ರ ಅವಧಿಯಲ್ಲಿ ಹಿಂದೂ ಸಮಾಜದ ಬದಲಿಗೆ ಆರ್ಯ ಸಮಾಜ ಸ್ಥಾಪಿಸಿದರು. ಮಡಿವಂತ ಬ್ರಾಹ್ಮಣರು ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳಲು ಹೇಸಿಕೊಳ್ಳುತ್ತಾರೆ.
  4. ದ್ರಾವಿಡರ ಶಿವನನ್ನು ವೇದಗಳ ರುದ್ರನಿಗೆ ಸಮೀಕರಿಸಿದ ಆರ್ಯರು ಜನಿವಾರ ತೊಡಿಸಿದರು. ನೆಲಮೂಲದ ಜನಪದೀಯ ಸಾಹಿತ್ಯ ರಾಶಿಯನ್ನು ಕದ್ದು, ತಿರುಚಿ ವೇದ, ಆಗಮ, ಶಾಸ್ತ್ರ, ಪುರಾಣಗಳನ್ನು ರಚಿಸಿಕೊಂಡರು.
  5. ಬೌದ್ಧ ಬಿಕ್ಕುಗಳ ಕಾವಿಯನ್ನು ಆರ್ಯರು ಕದ್ದರು. ದ್ರಾವಿಡರ ಓಂಕಾರವನ್ನು ಹೈಜಾಕ್ ಮಾಡಿದರು. ವಿಭೂತಿ, ರುದ್ರಾಕ್ಷಿ, ಕುಂಕುಮ, ವಾಗೀನ, ಕಲಶದಂಥ ದ್ರಾವಿಡ ಲಾಂಛನ ಮತ್ತು ಆಚರಣೆಗಳನ್ನು ಆರ್ಯರು ತಮ್ಮದೆಂದು ವಾದಿಸಿದರು.
  6. ಕಾಂತಾರ ಸಿನಿಮಾದಲ್ಲಿರುವ ದ್ರಾವಿಡ ಆಚರಣೆಯಾಗಿರುವ ಭೂತಾರಾಧನೆಯನ್ನು ಹಿಂದೂ ಆಚರಣೆ ಎಂದು ವೈದಿಕ ಮತಾಂಧರು ತಪ್ಪು ಪ್ರಚಾರ ಮಾಡುತ್ತಿದ್ದಾರೆ.
  7. ದೇಶಕ್ಕೆ ಆರ್ಯರು ಬರಿಗೈಲಿ ವಲಸೆ ಬಂದರು. ಸತ್ತವರನ್ನು ಹೂಳಲು ಭೂಮಿ ಇರಲಿಲ್ಲ. ಹೀಗಾಗಿ ಶವದಹನ ಪದ್ಧತಿ ಜಾರಿಗೆ ಬಂತು. ಅಸ್ತಿಯ ಬೂದಿಯನ್ನು ಪಶ್ಚಿಮ ವಾಹಿನಿಯಲ್ಲಿ ಹರಿಬಿಡುವ ಮೂಲಕ ಮಧ್ಯಪ್ರಾಚ್ಯಕ್ಕೆ (ಇರಾನ್ ಅಥವಾ ಪರ್ಷಿಯಾದಂಥ ದೇಶಗಳು) ತಮ್ಮ ನಿಷ್ಠೆಯನ್ನು ಇಂದಿಗೂ ಪ್ರದರ್ಶಿಸುತ್ತಿದ್ದಾರೆ.
Satish-Jarkiholi-Rcords

ಸತೀಶ್ ಜಾರಕಿಹೊಳಿ ಅವರು ಬಿಡುಗಡೆ ಮಾಡಿರುವ ದಾಖಲೆಗಳು

ಈ ಲೇಖನದಲ್ಲಿ ಜೆ.ಎಸ್.ಪಾಟೀಲ ಅವರು ಹಲವು ಇತರರ ಬರಹಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಲೇಖನವನ್ನು ಮೂಲ ಸಂಶೋಧನೆಯಾಗಿ ಪ್ರಸ್ತುತಪಡಿಸಿಲ್ಲ. ಈ ಅಂಶವನ್ನು ಸತೀಶ್ ಜಾರಕಿಹೊಳಿ ಅವರು ಗಮನಕ್ಕೆ ತೆಗೆದುಕೊಂಡಂತೆ ಇಲ್ಲ.

ಇದನ್ನೂ ಓದಿ: ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂದು ಉಲ್ಲೇಖವಿದೆ: ಹೇಳಿಕೆ ತಪ್ಪು ಎಂದಾದರೆ ರಾಜೀನಾಮೆ ಕೊಡುತ್ತೇನೆ ಎಂದ ಸತೀಶ್ ಜಾರಕಿಹೊಳಿ

Published On - 3:31 pm, Tue, 8 November 22

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು