AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ. ದಂಡದ ಮೊತ್ತಕ್ಕೆ […]

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 21, 2020 | 12:28 PM

Share

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ.

ದಂಡದ ಮೊತ್ತಕ್ಕೆ ಹೆದರಿ ವಾಹನ ಬಿಡಿಸಿಕೊಳ್ಳಲು ಹಿಂದೇಟು: ಹೌದು.. ಬೆಳಗಾವಿ ಪೊಲೀಸ್ರಿಗೆ ಸಂಚಾರಿ ನಿಯಮ ಉಲ್ಲಂಘಿಸೋ, ಸವಾರರಿಗೆ ದಂಡ ಹಾಕೋದು ಒಂದು ಕೆಲಸವಾದ್ರೆ, ಕೇಸ್​​​​​​ ಬಿದ್ದಿರೋ ವೆಹಿಕಲ್​​ ಕಾಯೋದು ಇನ್ನೊಂದು ಕೆಲಸ ಆಗ್ಬಿಟ್ಟಿದೆ. ಯಾಕಂದ್ರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ, ನೂರಾರು ಬೈಕ್​​ಗಳಿಗೆ ದಂಡ ವಿಧಿಸಿದ್ದಾರೆ. ಅನೇಕ ನಿಯಮಗಳ ಉಲ್ಲಂಘನೆ ಸೇರಿಸಿ, ಐದು, ಹತ್ತು, ಹನ್ನೆರಡು ಸಾವಿರದ ವರೆಗೂ ಫೈನ್​​ ಹಾಕಿದ್ದಾರೆ. ಆದ್ರೆ, ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕಾದ ಮಾಲೀಕರು, ಅಷ್ಟು ಹಣ ಕಟ್ಟಲಾಗದೆ ಸುಮ್ಮನಾಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಬೈಕ್​​ಗಳನ್ನ, ಸಂಚಾರಿ ನಿಯಮ ಉಲ್ಲಂಘನೆಯಡಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ, ಕೋರ್ಟ್​​​​ನಲ್ಲಿ ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗ್ಬೇಕು. ಆದ್ರೆ, ಒಂದು ತಿಂಗಳಾದ್ರೂ ಬೈಕ್​ ಮಾಲೀಕರು, ದಂಡ ಕಟ್ಟಿ ಬೈಕ್​ ಬಿಡಿಸಿಕೊಳ್ತಿಲ್ಲ. ಹೀಗಾಗಿ, ಪೊಲೀಸ್ ಠಾಣೆ ಮುಂಭಾಗದಲ್ಲೇ ಬೈಕ್​ಗಳು ನಿಂತಿವೆ. ಇನ್ನು, ವೆಹಿಕಲ್​ಗಳಿಗೆಲ್ಲ ಸರಪಳಿ ಕಟ್ಟಿದ್ದು, ಅದನ್ನ ಕಾಯೋದಕ್ಕಾಗೇ ಕಾನ್ಸ್​​ಸ್ಟೇಬಲ್​​​ ಒಬ್ಬರು ನಿಂತಿದ್ದಾರೆ.

ಒಟ್ನಲ್ಲಿ ದಂಡದಿಂದ ಭಯ ಮೂಡಿ, ನಿಯಮ ಪಾಲಿಸ್ತಾರೆ ಅನ್ನೋದು ಪೊಲೀಸ್ರ ಲೆಕ್ಕಾಚಾರ. ಆದ್ರೆ, ದಂಡ ಕಟ್ಟೋ ಬದಲು ಗಾಡಿಯನ್ನೇ ಬಿಡಲು ಮಾಲೀಕರು ಮುಂದಾಗಿರೋದು, ಪೊಲೀಸ್ರಿಗೆ ಹೊಸ ಫಜೀತಿ ತಂದಿಟ್ಟಿದೆ.

Published On - 12:25 pm, Tue, 21 January 20

Follow Us
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು