AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ. ದಂಡದ ಮೊತ್ತಕ್ಕೆ […]

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 21, 2020 | 12:28 PM

Share

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ.

ದಂಡದ ಮೊತ್ತಕ್ಕೆ ಹೆದರಿ ವಾಹನ ಬಿಡಿಸಿಕೊಳ್ಳಲು ಹಿಂದೇಟು: ಹೌದು.. ಬೆಳಗಾವಿ ಪೊಲೀಸ್ರಿಗೆ ಸಂಚಾರಿ ನಿಯಮ ಉಲ್ಲಂಘಿಸೋ, ಸವಾರರಿಗೆ ದಂಡ ಹಾಕೋದು ಒಂದು ಕೆಲಸವಾದ್ರೆ, ಕೇಸ್​​​​​​ ಬಿದ್ದಿರೋ ವೆಹಿಕಲ್​​ ಕಾಯೋದು ಇನ್ನೊಂದು ಕೆಲಸ ಆಗ್ಬಿಟ್ಟಿದೆ. ಯಾಕಂದ್ರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ, ನೂರಾರು ಬೈಕ್​​ಗಳಿಗೆ ದಂಡ ವಿಧಿಸಿದ್ದಾರೆ. ಅನೇಕ ನಿಯಮಗಳ ಉಲ್ಲಂಘನೆ ಸೇರಿಸಿ, ಐದು, ಹತ್ತು, ಹನ್ನೆರಡು ಸಾವಿರದ ವರೆಗೂ ಫೈನ್​​ ಹಾಕಿದ್ದಾರೆ. ಆದ್ರೆ, ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕಾದ ಮಾಲೀಕರು, ಅಷ್ಟು ಹಣ ಕಟ್ಟಲಾಗದೆ ಸುಮ್ಮನಾಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಬೈಕ್​​ಗಳನ್ನ, ಸಂಚಾರಿ ನಿಯಮ ಉಲ್ಲಂಘನೆಯಡಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ, ಕೋರ್ಟ್​​​​ನಲ್ಲಿ ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗ್ಬೇಕು. ಆದ್ರೆ, ಒಂದು ತಿಂಗಳಾದ್ರೂ ಬೈಕ್​ ಮಾಲೀಕರು, ದಂಡ ಕಟ್ಟಿ ಬೈಕ್​ ಬಿಡಿಸಿಕೊಳ್ತಿಲ್ಲ. ಹೀಗಾಗಿ, ಪೊಲೀಸ್ ಠಾಣೆ ಮುಂಭಾಗದಲ್ಲೇ ಬೈಕ್​ಗಳು ನಿಂತಿವೆ. ಇನ್ನು, ವೆಹಿಕಲ್​ಗಳಿಗೆಲ್ಲ ಸರಪಳಿ ಕಟ್ಟಿದ್ದು, ಅದನ್ನ ಕಾಯೋದಕ್ಕಾಗೇ ಕಾನ್ಸ್​​ಸ್ಟೇಬಲ್​​​ ಒಬ್ಬರು ನಿಂತಿದ್ದಾರೆ.

ಒಟ್ನಲ್ಲಿ ದಂಡದಿಂದ ಭಯ ಮೂಡಿ, ನಿಯಮ ಪಾಲಿಸ್ತಾರೆ ಅನ್ನೋದು ಪೊಲೀಸ್ರ ಲೆಕ್ಕಾಚಾರ. ಆದ್ರೆ, ದಂಡ ಕಟ್ಟೋ ಬದಲು ಗಾಡಿಯನ್ನೇ ಬಿಡಲು ಮಾಲೀಕರು ಮುಂದಾಗಿರೋದು, ಪೊಲೀಸ್ರಿಗೆ ಹೊಸ ಫಜೀತಿ ತಂದಿಟ್ಟಿದೆ.

Published On - 12:25 pm, Tue, 21 January 20

Follow Us
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್