AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ. ದಂಡದ ಮೊತ್ತಕ್ಕೆ […]

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು
ಸಾಧು ಶ್ರೀನಾಥ್​
|

Updated on:Jan 21, 2020 | 12:28 PM

Share

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ.

ದಂಡದ ಮೊತ್ತಕ್ಕೆ ಹೆದರಿ ವಾಹನ ಬಿಡಿಸಿಕೊಳ್ಳಲು ಹಿಂದೇಟು: ಹೌದು.. ಬೆಳಗಾವಿ ಪೊಲೀಸ್ರಿಗೆ ಸಂಚಾರಿ ನಿಯಮ ಉಲ್ಲಂಘಿಸೋ, ಸವಾರರಿಗೆ ದಂಡ ಹಾಕೋದು ಒಂದು ಕೆಲಸವಾದ್ರೆ, ಕೇಸ್​​​​​​ ಬಿದ್ದಿರೋ ವೆಹಿಕಲ್​​ ಕಾಯೋದು ಇನ್ನೊಂದು ಕೆಲಸ ಆಗ್ಬಿಟ್ಟಿದೆ. ಯಾಕಂದ್ರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ, ನೂರಾರು ಬೈಕ್​​ಗಳಿಗೆ ದಂಡ ವಿಧಿಸಿದ್ದಾರೆ. ಅನೇಕ ನಿಯಮಗಳ ಉಲ್ಲಂಘನೆ ಸೇರಿಸಿ, ಐದು, ಹತ್ತು, ಹನ್ನೆರಡು ಸಾವಿರದ ವರೆಗೂ ಫೈನ್​​ ಹಾಕಿದ್ದಾರೆ. ಆದ್ರೆ, ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕಾದ ಮಾಲೀಕರು, ಅಷ್ಟು ಹಣ ಕಟ್ಟಲಾಗದೆ ಸುಮ್ಮನಾಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಬೈಕ್​​ಗಳನ್ನ, ಸಂಚಾರಿ ನಿಯಮ ಉಲ್ಲಂಘನೆಯಡಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ, ಕೋರ್ಟ್​​​​ನಲ್ಲಿ ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗ್ಬೇಕು. ಆದ್ರೆ, ಒಂದು ತಿಂಗಳಾದ್ರೂ ಬೈಕ್​ ಮಾಲೀಕರು, ದಂಡ ಕಟ್ಟಿ ಬೈಕ್​ ಬಿಡಿಸಿಕೊಳ್ತಿಲ್ಲ. ಹೀಗಾಗಿ, ಪೊಲೀಸ್ ಠಾಣೆ ಮುಂಭಾಗದಲ್ಲೇ ಬೈಕ್​ಗಳು ನಿಂತಿವೆ. ಇನ್ನು, ವೆಹಿಕಲ್​ಗಳಿಗೆಲ್ಲ ಸರಪಳಿ ಕಟ್ಟಿದ್ದು, ಅದನ್ನ ಕಾಯೋದಕ್ಕಾಗೇ ಕಾನ್ಸ್​​ಸ್ಟೇಬಲ್​​​ ಒಬ್ಬರು ನಿಂತಿದ್ದಾರೆ.

ಒಟ್ನಲ್ಲಿ ದಂಡದಿಂದ ಭಯ ಮೂಡಿ, ನಿಯಮ ಪಾಲಿಸ್ತಾರೆ ಅನ್ನೋದು ಪೊಲೀಸ್ರ ಲೆಕ್ಕಾಚಾರ. ಆದ್ರೆ, ದಂಡ ಕಟ್ಟೋ ಬದಲು ಗಾಡಿಯನ್ನೇ ಬಿಡಲು ಮಾಲೀಕರು ಮುಂದಾಗಿರೋದು, ಪೊಲೀಸ್ರಿಗೆ ಹೊಸ ಫಜೀತಿ ತಂದಿಟ್ಟಿದೆ.

Published On - 12:25 pm, Tue, 21 January 20

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್