AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veer Savarkar: ಹಿಂಡಲಗಾ ಜೈಲಿನಲ್ಲೂ 100 ದಿನ ಇದ್ದ ಸಾವರ್ಕರ್: ವೀರ್ ಸಾವರ್ಕರ್ ಟಿಶರ್ಟ್, ಪೋಟೊ, ಬ್ಯಾನರ್ ಸ್ಮರಣಿಕೆ ವಿತರಣೆ

ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಎಲ್ಲದಕ್ಕೂ ಅನುಮತಿ ಪಡೆಯಬೇಕೆಂದ್ರೆ ಗಣೇಶೋತ್ಸವವೇ ಆಗಲ್ಲ. ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಅನುಮತಿಯ ಅವಶ್ಯಕತೆ ಇಲ್ಲ. ನಮಗಷ್ಟೇ ಏಕೆ ಇಂಥ ಕಾನೂನುಗಳು ಅನ್ವಯ ಆಗುತ್ತವೆ -ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ

Veer Savarkar: ಹಿಂಡಲಗಾ ಜೈಲಿನಲ್ಲೂ 100 ದಿನ ಇದ್ದ ಸಾವರ್ಕರ್: ವೀರ್ ಸಾವರ್ಕರ್ ಟಿಶರ್ಟ್, ಪೋಟೊ, ಬ್ಯಾನರ್ ಸ್ಮರಣಿಕೆ ವಿತರಣೆ
ಹಿಂಡಲಗಾ ಜೈಲಿನಲ್ಲೂ 100 ದಿನ ಇದ್ದ ಸಾವರ್ಕರ್: ವೀರ್ ಸಾವರ್ಕರ್ ಟಿಶರ್ಟ್, ಪೋಟೊ, ಬ್ಯಾನರ್ ಸ್ಮರಣಿಕೆ ವಿತರಣೆ
TV9 Web
| Updated By: ಸಾಧು ಶ್ರೀನಾಥ್​|

Updated on: Sep 03, 2022 | 5:38 PM

Share

ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುವಾಗ ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ (Veer Savarkar) ಅವರು ದೇಶಕ್ಕಾಗಿ 27 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅದೇ ವೇಳೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ (Hindalga Jail) ಸಾವರ್ಕರ್ 100 ದಿನ ಇದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸಾವರ್ಕರ್ ಇರುವ ಟಿ ಶರ್ಟ್, ಪೋಟೊ ಮತ್ತು ಬ್ಯಾನರ್ ವಿತರಣೆ ನಡೆದಿದೆ.

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಯಿಂದ (BJP MLA Anil Benake) ಈ ಸ್ಮರಣಿಕೆಗಳ ವಿತರಣೆಯಾಗಿದೆ. ಚವಾಟ್ ಗಲ್ಲಿಯ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ 200 ಮಂಡಳಿಗಳಿಗೆ ಪೋಟೊ ವಿತರಣೆ ಮಾಡಲಾಗಿದೆ. ವಿವಿಧ ಮಂಡಳಿಗಳಿಗೆ ಸಾವರ್ಕರ್ ಇರುವ 200 ಬ್ಯಾನರ್ ಕೂಡ ವಿತರಣೆಯಾಗಿದೆ. ಈ ಮಧ್ಯೆ, ಬೆಳಗಾವಿ ಉತ್ತರ ಕ್ಷೇತ್ರದ ಕಾರ್ಯಕರ್ತರಿಗಾಗಿ ಹಂಚಲು ಶಾಸಕ ಬೆನಕೆ 10 ಸಾವಿರ ಟಿ ಶರ್ಟ್ ರೆಡಿ ಮಾಡಿಸಿದ್ದಾರೆ.

ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಎಲ್ಲದಕ್ಕೂ ಅನುಮತಿ ಪಡೆಯಬೇಕೆಂದ್ರೆ ಗಣೇಶೋತ್ಸವವೇ ಆಗಲ್ಲ. ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಅನುಮತಿಯ ಅವಶ್ಯಕತೆ ಇಲ್ಲ. ನಮಗಷ್ಟೇ ಏಕೆ ಇಂಥ ಕಾನೂನುಗಳು ಅನ್ವಯ ಆಗುತ್ತವೆ. ಅನುಮತಿ ಪಡೆಯಲ್ಲ, ಗಣೇಶ ಮಂಡಳಿಗಳಲ್ಲಿ ಸಾವರ್ಕರ್ ಪೋಟೊ ಹಾಕುತ್ತೇವೆ.

ಗಣಪತಿ ಮಂಡಳಿಯವರು ಸ್ವಯಂಪ್ರೇರಿತವಾಗಿ ಪೋಟೊ ಹಾಕ್ತಿದ್ದಾರೆ. ಸಾವರ್ಕರ್ ದೇಶಕ್ಕಾಗಿ 27 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಅದರಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಸಾವರ್ಕರ್ 100 ದಿನ ಇದ್ದರು ಎಂದು ಸಾವರ್ಕರ್ ಬಗ್ಗೆ ಪ್ರತಿಪಕ್ಷ ನಾಯಕರ ಹೇಳಿಗೆ ಶಾಸಕ ಬೆನಕೆ ತಿರುಗೇಟು ನೀಡಿದ್ದಾರೆ.

ಕಾಲಾಪಾನಿ ಶಿಕ್ಷೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಗೊತ್ತಿಲ್ಲ. ಸಾವರ್ಕರ್ ಬಗ್ಗೆ ಅವರು ಮಾತನಾಡಿದ್ರೆ ನಾವೂ ತಿರುಗೇಟು ನೀಡಬೇಕಾಗುತ್ತದೆ. ಸಾವರ್ಕರ್ ಬಗ್ಗೆ ಮಾತನಾಡುವ ಮೂಲಕ ಸಿದ್ದರಾಮಯ್ಯ ನಮ್ಮನ್ನು ಕೆಲಸಕ್ಕೆ ಹಚ್ಚಿದ್ದಾರೆ, ಒಳ್ಳೆಯದು. ಬರುವ ದಿನಗಳಲ್ಲಿ ರಾಣಿಚನ್ನಮ್ಮ, ಸಂಗೊಳ್ಳಿ ರಾಯಣ್ಣ ಪೋಟೊ ‌ಕೂಡ ಹಂಚುತ್ತೇವೆ.

ಬೆಳಗಾವಿ ಹಿಂಡಲಗಾ ‌ಜೈಲು ಮುಂದೆ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ. ಹಿಂಡಲಗಾ ‌ಪಂಚಾಯಿತಿ ಸದಸ್ಯರು, ನಮ್ಮ ಕಾರ್ಯಕರ್ತರ ಜೊತೆಗೆ ಚರ್ಚಿಸುತ್ತೇವೆ. ಹಿಂಡಲಗಾ ಪಂಚಾಯತಿ ಅನುಮತಿಯೊಂದಿಗೆ ಸಾವರ್ಕರ್ ಪುತ್ಥಳಿ ನಿರ್ಮಾಣವಾಗಲಿದೆ. ಬೆಳಗಾವಿಯ ಪ್ರಮುಖ ವೃತ್ತಗಳಿಗೆ ಸಾವರ್ಕರ್, ರಾಣಿ ಚೆನ್ನಮ್ಮ ಹೆಸರಿಡುತ್ತೇವೆ. ದಕ್ಷಿಣ ಭಾರತದಲ್ಲಿ ಮೊದಲು ಗಣೇಶೋತ್ಸವ ಆರಂಭವಾಗಿದ್ದು ಬೆಳಗಾವಿಯಲ್ಲಿ ಎಂಬುದು ಗಮನಾರ್ಹ ಸಂಗತಿ ಎಂದು ಅವರು ಹೇಳಿದರು.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ