Kittur Utsav: ಅಕ್ಟೋಬರ್ 23 ಮತ್ತು 24ರಂದು ಕಿತ್ತೂರು ಉತ್ಸವ: ಸಚಿವ ಗೋವಿಂದ ಕಾರಜೋಳ

ಕಿತ್ತೂರು ಉತ್ಸವಕ್ಕೆ ಒಂದು ಕೋಟಿ ಅನುದಾನ ಒದಗಿಸುತ್ತೇವೆ. ಕೊರೊನಾ ನಿಯಮ ಪಾಲಿಸಿ ಉತ್ಸವ ಆಚರಿಸೋಣ ಎಂದು ತಿಳಿಸಿದರು.

Kittur Utsav: ಅಕ್ಟೋಬರ್ 23 ಮತ್ತು 24ರಂದು ಕಿತ್ತೂರು ಉತ್ಸವ: ಸಚಿವ ಗೋವಿಂದ ಕಾರಜೋಳ
Updated By: guruganesh bhat

Updated on: Oct 06, 2021 | 4:07 PM

ಬೆಳಗಾವಿ: ಅಕ್ಟೋಬರ್ 23 ಮತ್ತು 24ರಂದು ಕಿತ್ತೂರು ಉತ್ಸವ ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಸಚಿವ ಗೋವಿಂದ ಕಾರಜೋಳ ಘೋಷಿಸಿದರು. ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಒಂದು ಕೋಟಿ ಅನುದಾನ ಒದಗಿಸುತ್ತೇವೆ. ಕೊರೊನಾ ನಿಯಮ ಪಾಲಿಸಿ ಉತ್ಸವ ಆಚರಿಸೋಣ ಎಂದು ತಿಳಿಸಿದರು.

ಎರಡು ದಿನ ಕಿತ್ತೂರು ಉತ್ಸವವನ್ನು ಎಲ್ಲ ಕಲಾವಿದರನ್ನು ಸೇರಿಸಿ ನಡೆಸೋಣ. ಕಿತ್ತೂರು ಗತವೈಭವದ ಅನಾವರಣ ಮಾಡುವಂತೆ ಉತ್ಸವ ಮಾಡೋಣ. 25ನೇ ಉತ್ಸವವನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅವರು ತಿಳಿಸಿದರು.

ಇದನ್ನೂ ಓದಿ: 

‘ಏನಮ್ಮಾ ಕಿತ್ತೂರು ರಾಣಿ ಚೆನ್ನಮ್ಮಾ, ಚೆನ್ನಾಗಿದ್ದಿಯಾ?‘ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ರನ್ನು ಸಿದ್ದರಾಮಯ್ಯ ಮಾತನಾಡಿಸುವುದು ಹೀಗಂತೆ

ಬೆಳಗಾವಿಯ ಸುವರ್ಣ ಸೌಧದಲ್ಲೇ ಚಳಿಗಾಲದ ಅಧಿವೇಶನ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ