AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ […]

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌
Guru
|

Updated on:Jun 28, 2020 | 1:45 PM

Share

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ.

ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ ಜೂನ್ 13ರಂದು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು. ಸಿಂಗಾರಗೊಪ್ಪ ಗ್ರಾಮದ 70ಜನರು ಈ ಮದುವೆಗೆ ಹೋಗಿದ್ದರು. ಯುವತಿಯೊಬ್ಬಳು ಕೂಡಾ ತನ್ನದೇ ಗ್ರಾಮದ ಗೆಳತಿ‌ ಮದುವೆ ಅಂತಾ ಮದುವೆಗೆ ಹೋಗಿದ್ದಳು. ಜತೆಗೆ ಈ ಮದುವೆಗೆ ನವಲಗುಂದ ತಾಲೂಕಿನ ಮೊರಬ ಗ್ರಾಮದವರು ಕೂಡಾ ಆಗಮಿಸಿದ್ದರು. ಈಗಾಗಲೇ ಕೊರೊನಾ ಸೋಂಕಿತರಿರುವ ಮೊರಬ ಗ್ರಾಮಸ್ಥರು ಮತ್ತು ಸಿಂಗಾರಗೊಪ್ಪ ಗ್ರಾಮಸ್ಥರು ಸೇರಿ ಊಟ ಮಾಡಿದ್ದರು. ಹೀಗೆ ಮದುವೆಯಲ್ಲಿ ಸಾಮಾಜಿಕ ಅಂತರ ಮರೆತು ಎಲ್ಲರೂ ಬೆರೆತಿದ್ದೇ ಈಗ ಸೋಂಕು ಹರಡಲು ಕಾರಣವಾಗಿದೆ ಎನ್ನಲಾಗ್ತಿದೆ.

ಮದುವೆಗೆ ಬಂದ ಮೊರಬ ಗ್ರಾಮಸ್ಥರಿಂದ ಹರಡಿತು ಸೋಂಕು ಹೀಗೆ ಮದುವೆಗೆ ಬಂದ ಮೊರಬ ಗ್ರಾಮಸ್ಥರಲ್ಲಿ ಈಗ ಕೊರೊನಾ ಸೋಂಕು ಇರೋದು ಈಗ ದೃಡವಾಗಿದೆ. ಹೀಗಾಗಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಸಿಂಗಾರಗೊಪ್ಪ ಗ್ರಾಮಸ್ಥರಿಗೆ ಕೊವಿಡ್ ಟೇಸ್ಟ್ ಮಾಡಲಾಗಿದೆ. ಇದರಲ್ಲಿ ಇದೀಗ ಮದುವೆಗೆ ಹೋದ ಪಿ.11248 ಯುವತಿಗೆ ಕೊರೊನಾ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಪರಿಣಾಮ ಈಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಮತ್ತು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮಗಳನ್ನ ಸೀಲ್​ಡೌನ್ ಮಾಡಲಾಗಿದೆ.

Published On - 1:38 pm, Sun, 28 June 20

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ