AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ […]

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌
Guru
Guru|

Updated on:Jun 28, 2020 | 1:45 PM

Share

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ.

ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ ಜೂನ್ 13ರಂದು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು. ಸಿಂಗಾರಗೊಪ್ಪ ಗ್ರಾಮದ 70ಜನರು ಈ ಮದುವೆಗೆ ಹೋಗಿದ್ದರು. ಯುವತಿಯೊಬ್ಬಳು ಕೂಡಾ ತನ್ನದೇ ಗ್ರಾಮದ ಗೆಳತಿ‌ ಮದುವೆ ಅಂತಾ ಮದುವೆಗೆ ಹೋಗಿದ್ದಳು. ಜತೆಗೆ ಈ ಮದುವೆಗೆ ನವಲಗುಂದ ತಾಲೂಕಿನ ಮೊರಬ ಗ್ರಾಮದವರು ಕೂಡಾ ಆಗಮಿಸಿದ್ದರು. ಈಗಾಗಲೇ ಕೊರೊನಾ ಸೋಂಕಿತರಿರುವ ಮೊರಬ ಗ್ರಾಮಸ್ಥರು ಮತ್ತು ಸಿಂಗಾರಗೊಪ್ಪ ಗ್ರಾಮಸ್ಥರು ಸೇರಿ ಊಟ ಮಾಡಿದ್ದರು. ಹೀಗೆ ಮದುವೆಯಲ್ಲಿ ಸಾಮಾಜಿಕ ಅಂತರ ಮರೆತು ಎಲ್ಲರೂ ಬೆರೆತಿದ್ದೇ ಈಗ ಸೋಂಕು ಹರಡಲು ಕಾರಣವಾಗಿದೆ ಎನ್ನಲಾಗ್ತಿದೆ.

ಮದುವೆಗೆ ಬಂದ ಮೊರಬ ಗ್ರಾಮಸ್ಥರಿಂದ ಹರಡಿತು ಸೋಂಕು ಹೀಗೆ ಮದುವೆಗೆ ಬಂದ ಮೊರಬ ಗ್ರಾಮಸ್ಥರಲ್ಲಿ ಈಗ ಕೊರೊನಾ ಸೋಂಕು ಇರೋದು ಈಗ ದೃಡವಾಗಿದೆ. ಹೀಗಾಗಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಸಿಂಗಾರಗೊಪ್ಪ ಗ್ರಾಮಸ್ಥರಿಗೆ ಕೊವಿಡ್ ಟೇಸ್ಟ್ ಮಾಡಲಾಗಿದೆ. ಇದರಲ್ಲಿ ಇದೀಗ ಮದುವೆಗೆ ಹೋದ ಪಿ.11248 ಯುವತಿಗೆ ಕೊರೊನಾ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಪರಿಣಾಮ ಈಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಮತ್ತು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮಗಳನ್ನ ಸೀಲ್​ಡೌನ್ ಮಾಡಲಾಗಿದೆ.

Published On - 1:38 pm, Sun, 28 June 20

Follow Us
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!