ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು

ನಮ್ಮ ಸುಮಾರು‌ ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್​ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು ಎಂದು ಇಸ್ರೇಲ್​ಯಿಂದ ಕನ್ನಡತಿಯೊಬ್ಬರು ಹೇಳಿದ್ದಾರೆ.

ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು
ಇಸ್ರೇಲ್​ನಿಂದ ಭಾರತಕ್ಕೆ ಬಂದ ಕನ್ನಡಿಗರು
Edited By: ಕಿರಣ್ ಹನುಮಂತ್​ ಮಾದಾರ್

Updated on: Oct 14, 2023 | 3:19 PM

ಬೆಂಗಳೂರು ಗ್ರಾಮಾಂತರ, ಅ.14: ಇಸ್ರೇಲ್(Israel) ಮತ್ತು ಹಮಾಸ್(Hamas)ನಡುವೆ ಸಂಘರ್ಷ‌ ಹಿನ್ನೆಲೆ ಇದೀಗ ಇಸ್ರೇಲ್​ನಲ್ಲಿದ್ದ ಭಾರತೀಯರು(Indians), ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. 2 ನೇ ಬ್ಯಾಚ್​ನ 12:40 ರ‌ ಏರ್ ಇಂಡಿಯಾ ವಿಮಾನದಲ್ಲಿ 6 ಜನ ಪುರುಷರು ಹಾಗೂ 3 ಮಹಿಳೆಯರ ಸೇರಿದಂತೆ ಒಟ್ಟು 9 ಜನ ಕನ್ನಡಿಗರು ಆಗಮಿಸಿದ್ದಾರೆ. ಹೌದು, ದಕ್ಷಿಣ ಮೂರ್ತಿ, ಶಾಂತಮೂರ್ತಿ, ಉತ್ತಾಶ್ ದೇವನೂರು, ಸತೀಶ್ ಚಕ್ರಪಾಣಿ, ಶಿಲ್ಪ ಶ್ರೀ, ಸುಮತಿ, ಸೂರಜ್ ಕೃಷ್ಣ, ಪುಣ್ಯಕೋಟಿ ಮತ್ತು ಅಕ್ಷರ ಅವರು ಇಸ್ರೇಲ್​ನಿಂದ ದೆಹಲಿಗೆ ಬಂದು, ಅಲ್ಲಿಂದ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿದ್ದಾರೆ. ಇವರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ತವರಿಗೆ ಕಳಿಸಲಿದ್ದಾರೆ.

ಇಸ್ರೇಲ್​ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ

ಕೆಂಪೇಗೌಡ ಏರ್ಪೊರ್ಟ್​ಗೆ ಇಸ್ರೇಲ್​ನಿಂದ ಆಗಮಿಸಿದವರಲ್ಲಿ ಒಬ್ಬರಾದ ಪುಣ್ಯಕೋಟಿ ಎಂಬುವವರು ಮಾತನಾಡಿ, ‘ಇಸ್ರೇಲ್​ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ನಮ್ಮ ಸುಮಾರು‌ ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್​ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು. ಎಲ್ಲವೂ ಸರಿ ಹೋದ ನಂತರ ನಾವು ಮತ್ತೆ ವಾಪಸ್ ತೆರಳುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:Israel Hamas Conflict Explained: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಣರಂಗವಾಗಿರುವ ಗಾಜಾ ಪಟ್ಟಿ ಯಾವುದು? ಏನಿದರ ಇತಿಹಾಸ?

ನಿನ್ನೆ ಬೆಂಗಳೂರಿಗೆ ಬಂದಿದ್ದ ಓರ್ವ ಕನ್ನಡಿಗ

ಹೌದು, ಇಸ್ರೇಲ್​ನಲ್ಲಿ ಯುದ್ದ ಪರಿಸ್ಥಿತಿ ಇರುವುದರಿಂದ ಅಲ್ಲಿರುವ ಭಾರತೀಯರನ್ನು ಆಪರೇಷನ್ ಅಜಯ್ ಮೂಲಕ ತವರು ದೇಶಕ್ಕೆ ಕರೆದುಕೊಂಡು ಬರುವ ಕೆಲಸ ನಡೆಯುತ್ತಿದೆ. ಅದರಂತೆ ನಿನ್ನೆ(ಅ.13) ರಾತ್ರಿ ಇಸ್ರೇಲ್​​​ನಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಅದರಲ್ಲಿ ವಿಜಯಪುರ ಮೂಲದ ಈರಣ್ಣ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​​ಗೆ ಆಗಮಿಸಿ, ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us