AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ, ದೇವನಹಳ್ಳಿ ಡಿಹೆಚ್​ಒ ಕಚೇರಿಗೆ ಬೀಗ

ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್​ಒ ಕಚೇರಿಯ ಹಳೇ ಡಿಹೆಚ್​ಒ ವಿಜಯೇಂದ್ರ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದ್ರೆ ಡಿಹೆಚ್​ಒ ವಿಜಯೇಂದ್ರ ಅವರು ಕೆಎಟಿ ಮೂಲಕ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದು ಆ.18ರಂದು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಆ.19ರಂದು ಕಚೇರಿಗೆ ನೂತನ ಡಿಹೆಚ್​ಒ ಸುನೀಲ್​ ಕುಮಾರ್ ಕಾಲಿಟ್ಟಿದ್ದು ಹುದ್ದೆಯನ್ನು ಅಲಂಕರಿಸಲು ಪಟ್ಟು ಹಿಡಿದಿದ್ದಾರೆ.

ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ, ದೇವನಹಳ್ಳಿ ಡಿಹೆಚ್​ಒ ಕಚೇರಿಗೆ ಬೀಗ
ಹೊಸ ಡಿಹೆಚ್​ಒ ಸುನೀಲ್, ಹಳೇ ಡಿಹೆಚ್​ಒ ವಿಜಯೇಂದ್ರ
ನವೀನ್ ಕುಮಾರ್ ಟಿ
| Edited By: |

Updated on: Aug 21, 2023 | 11:15 AM

Share

ದೇವನಹಳ್ಳಿ, ಆ.21: ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದ್ದು ಬೆಂಗಳೂರು ಗ್ರಾ. ಡಿಸಿ ಕಚೇರಿಯಲ್ಲಿರುವ ಡಿಹೆಚ್​ಒ ಕಚೇರಿಗೆ(DHO Office) ಬೀಗ ಹಾಕಲಾದ ಪ್ರಸಂಗ ದೇವನಹಳ್ಳಿಯಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್​ಒ ಕಚೇರಿಯ ಸೀಟ್​ಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಹೊಸ ಡಿಹೆಚ್​​ಒ ಸುನೀಲ್​ ಕುಮಾರ್​​ ಹಾಗೂ ಹಳೇ ಡಿಹೆಚ್​ಒ ವಿಜಯೇಂದ್ರ ನಡುವೆ ಜಟಾಪಟಿ ನಡೆಯುತ್ತಿದೆ.

ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್​ಒ ಕಚೇರಿಯ ಹಳೇ ಡಿಹೆಚ್​ಒ ವಿಜಯೇಂದ್ರ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದ್ರೆ ಡಿಹೆಚ್​ಒ ವಿಜಯೇಂದ್ರ ಅವರು ಕೆಎಟಿ ಮೂಲಕ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದು ಆ.18ರಂದು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಆ.19ರಂದು ಕಚೇರಿಗೆ ನೂತನ ಡಿಹೆಚ್​ಒ ಸುನೀಲ್​ ಕುಮಾರ್ ಕಾಲಿಟ್ಟಿದ್ದು ಹುದ್ದೆಯನ್ನು ಅಲಂಕರಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಡಿಹೆಚ್​ಒ ಸೀಟ್ ಮೇಲೆ ಕೂರಲು ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿದೆ.

ಇದನ್ನೂ ಓದಿ: ಸಿಎಂ ಕಚೇರಿಯಿಂದ ಒಂದೇ ಹುದ್ದೆಗೆ ನಾಲ್ವರಿಗೆ ಶಿಫಾರಸು: ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲು​ ವಾಗ್ದಾಳಿ

ಡಿಹೆಚ್​ಒ ಕಚೇರಿಗೆ ಬೀಗ

ಇನ್ನು ಕಳೆದ ಒಂದೂವರೆ ವರ್ಷದಿಂದ ಡಿಹೆಚ್ಒ ಆಗಿ ವಿಜಯೇಂದ್ರ ಕೆಲಸ ಮಾಡ್ತಿದ್ದಾರೆ. ಈ‌ ನಡುವೆ ಹೊಸ ಸರ್ಕಾರದಿಂದ ನೂತನ ಡಿಹೆಚ್ಒ ಆಗಿ ಸುನೀಲ್ ಕುಮಾರ್ ನೇಮಕಗೊಂಡಿದ್ದಾರೆ. ಆದರೆ ಅವಧಿ ಮುಗಿದಿಲ್ಲ ಎಂದು ವರ್ಗಾವಣೆ ಆದೇಶಕ್ಕೆ ಕೆಎಟಿ ಮೋರೆ ಹೋಗಿ ಡಿಹೆಚ್ಒ ವಿಜಯೇಂದ್ರ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೆ ಕಳೆದ ಶುಕ್ರವಾರದಿಂದ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಹೀಗಾಗಿ ಶನಿವಾರ ಸಂಜೆ ಕಚೇರಿಗೆ ಬಂದ ನೂತನ ಡಿಹೆಚ್ಒ ಸುನೀಲ್ ಬೀಗ ಹಾಕಿಕೊಂಡು ಹೋಗಿದ್ದರು. ಡಿಹೆಚ್ಒ ಕೊಠಡಿಗೆ ಬೀಗ ಜಡಿದ ಹಿನ್ನೆಲೆ ಸಿಬ್ಬಂದಿ ಸಂಕಷ್ಟ ಎದುರಿಸುವಂತಾಗಿತ್ತು. ಸದ್ಯ ಇಂದು ನೂತನ ಡಿಹೆಚ್ಒ ಸುನೀಲ್ ಬೆಳ್ಳಂ ಬೆಳಗ್ಗೆ ಕಚೇರಿಗೆ ಆಗಮಿಸಿ ಬೀಗ ತೆಗೆದು ಸೀಟ್​ ಮೇಲೆ ಕುಳಿತಿದ್ದರು. ಸಿಬ್ಬಂದಿ ಆಗಮನಕ್ಕೂ ಮುನ್ನವೇ ಆಗಮಿಸಿ ಡಿಹೆಚ್ಒ ಕಚೇರಿಯ ಬೀಗ ತೆಗೆದು ಒಳಗಡೆ ಕೂತಿದ್ದಾರೆ. ಇಬ್ಬರು ಅಧಿಕಾರಿಗಳ ಜಗಳ ಹಿನ್ನೆಲೆ ಡಿಹೆಚ್ಒರ ಸರ್ಕಾರಿ ಪೋನ್ ಸ್ವಿಚ್ ಆಫ್ ಮಾಡಲಾಗಿದೆ. ಸರ್ಕಾರಿ ಕಾರು ಹೊಸ ಡಿಹೆಚ್ಒ ಸುನೀಲ್ ಬಳಿ ಇದ್ರೆ, ಸರ್ಕಾರಿ ಫೋನ್ ನಂಬರ್ ಹಳೆ ಡಿಹೆಚ್ಒ ವಿಜಯೇಂದ್ರ ಬಳಿ ಇದೆ. ಇಬ್ಬರ ಜಗಳಿಂದಾಗಿ ಸಿಬ್ಬಂದಿ, ಸಾರ್ವಜನಿಕರು ತೊಂದರೆಗೆ ಸಿಲುಕಿದಂತಾಗಿದೆ.

ದೇವನಹಳ್ಳಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್