AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಕದ್ದ ಮೇಲೆ, ಹಿಂಬಾಲಿಸಿ ಬಂದವರಿಗೆ ಗನ್ ತೋರಿಸಿ ಎಸ್ಕೇಪ್ ಆದ ಕಳ್ಳರು: ನೆಲಮಂಗಲದ ರೈಲ್ವೆ ನಿಲ್ದಾಣ ಬಳಿ ಬೊಲೆರೊ ಕಾರು ಪತ್ತೆ

ರಾಕೇಶ್ ತಮ್ಮ ಹರೀಶ್ ಸ್ನೇಹಿತ ನಂದಕಿಶೋರ್, ಹ್ಯಾರಿಸ್‌ ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಚೇಸ್ ಮಾಡಿದ್ದಾರೆ. ಈ ವೇಳೆ ಕಳ್ಳರು ಗನ್ ತೋರಿಸಿ ಹೆದರಿಸಿದ್ದು ಸಂದಿ-ಗೋಂದಿಯಲ್ಲಿ ತೋರಿಸಿ ಎಸ್ಕೇಪ್ ಆಗಿದ್ದು ಸದ್ಯ ಕಾರು ಪತ್ತೆಯಾಗಿದೆ.

ಕಾರು ಕದ್ದ ಮೇಲೆ, ಹಿಂಬಾಲಿಸಿ ಬಂದವರಿಗೆ ಗನ್ ತೋರಿಸಿ ಎಸ್ಕೇಪ್ ಆದ ಕಳ್ಳರು: ನೆಲಮಂಗಲದ ರೈಲ್ವೆ ನಿಲ್ದಾಣ ಬಳಿ ಬೊಲೆರೊ ಕಾರು ಪತ್ತೆ
ಬೊಲೆರೊ ಕಾರು
TV9 Web
| Edited By: |

Updated on: Nov 03, 2021 | 1:07 PM

Share

ನೆಲಮಂಗಲ: ಕಾರು ಕದ್ದು ಹಿಂಬಾಲಿಸಿದವರಿಗೆ ಗನ್ ತೋರಿಸಿ ಎಸ್ಕೇಪ್ ಆದ ಕೇಸ್ಗೆ ಸಂಬಂಧಿಸಿ ಸದ್ಯ ಈಗ ನೆಲಮಂಗಲದ ರೈಲ್ವೆ ನಿಲ್ದಾಣದ ಬಳಿ ಬೊಲೆರೊ ಕಾರು ಪತ್ತೆಯಾಗಿದೆ. ತಮಿಳುನಾಡಿನ ಹೊಸೂರಿನ ರಾಕೇಶ್ ಎಂಬುವವರಿಗೆ ಸೇರಿದ ಕಾರು ಪತ್ತೆಯಾಗಿದೆ.

ಘಟನೆ ವಿವರ ಕಳೆದ ತಿಂಗಳ 25ರಂದು ರಾಕೇಶ್ ಎಂಬುವವರು ಎಸ್.ಮುದ್ಗಾನಪಲ್ಲಿಯ ತಮ್ಮ ಮನೆಯ ಬಳಿ ಎಂದಿನಂತೆ ಬೊಲೆರೊ ಕಾರು ಪಾರ್ಕ್ ಮಾಡಿದ್ದರು. ಆ ದಿನ ರಾತ್ರಿ ಕಳೆದ ಬೆಳಕಾಗುವಷ್ಟರಲ್ಲಿ ಬೊಲೆರೊ ನಾಪತ್ತೆಯಾಗಿತ್ತು. ಕಾರನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದರು. ಈ ಬಗ್ಗೆ ರಾಕೇಶ್ ಹೊಸೂರಿನ ಮತ್ತಿಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ತಮ್ಮ ಕಾರು ಕಳ್ಳತನವಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾರ್ ಫೋಟೋ ಸಮೇತ ಫೋನ್ ನಂಬರ್ ಹಾಕಿ ಮಾಹಿತಿ ಹಂಚಿಕೊಂಡಿದ್ದರು.

ಅಕ್ಟೋಬರ್ 27ರಂದು ರಾಕೇಶ್ ಸ್ನೇಹಿತ ಕರೆ ಮಾಡಿ ಕಳೆದೋದ ಬೊಲೆರೊ ಕಾರನ್ನು ನೋಡಿರುವುದಾಗಿ ಅದು ಹಾಸನ ಕಡೆಯಿಂದ ನೆಲಮಂಗಲ ಕಡೆಗೆ ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದ. ಈ ವೇಳೆ ರಾಕೇಶ್ ಠಾಣೆಯಲ್ಲಿದ್ದ ಕಾರಣ ತಕ್ಷಣ ತನ್ನ ಸಂಬಂಧಿಯೊಬ್ಬರಿಗೆ ಕರೆ ಮಾಡಿ ಈ ಮಾಹಿತಿ ನೀಡಿ ನೆಲಮಂಗಲ ಟೋಲ್ ಗೇಟ್ ಬಳಿ ಕಾಯಲು ತಿಳಿಸಿದ್ದಾನೆ. ಈ ವೇಳೆ ರಾಕೇಶ್ ಸಂಬಂಧಿ ನೆಲಮಂಗಲ ಟೋಲ್ ಗೇಟ್ ಬಳಿ ತೆರಳಿ ಅಲ್ಲಿನ ಸಿಬ್ಬಂದಿಗೆ ಈ ವಿಷಯ ತಿಳಿಸಿ ಕಾರಿಗಾಗಿ ಕಾದಿದ್ದಾರೆ.

ಬಳಿಕ ಕೆಲ ಹೊತ್ತಿನ ಬಳಿಕ ಬೊಲೆರೊ ಕಾರೊಂದು ಬಂದಿದ್ದು ಅದರಲ್ಲಿ 7 ಜನ ಗಂಡಸರು ಕೂತಿದ್ದರು ಇದನ್ನು ಕಂಡ ರಾಕೇಶ್ ಸಂಬಂಧಿ ಕಾರಿನ ಪರಿಶೀಲನೆ ಮಾಡಿದ್ದಾರೆ. ಬಳಿಕ ಆ ಕಾರು ಅವರದೇ ಎಂದು ಪಕ್ಕಾ ಆಗುತ್ತಿದ್ದಂತೆ ಟೋಲ್ ಸಿಬ್ಬಂದಿಗೆ ಕಳ್ಳರನ್ನು ಹಿಡಿಯುವಂತೆ ಕೂಗಿದ್ದಾರೆ. ಆಗ ಟೋಲ್ ಗೇಟ್ ಮುಚ್ಚಿದರೂ ಕಳ್ಳರು ಕಾರನ್ನು ಓಡಿಸಿಕೊಂಡು ಎಸ್ಪೇಪ್ ಆಗಿದ್ದಾರೆ. ಆಗ ರಾಕೇಶ್ ತಮ್ಮ ಹರೀಶ್ ಸ್ನೇಹಿತ ನಂದಕಿಶೋರ್, ಹ್ಯಾರಿಸ್‌ ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಚೇಸ್ ಮಾಡಿದ್ದಾರೆ. ಈ ವೇಳೆ ಕಳ್ಳರು ಗನ್ ತೋರಿಸಿ ಹೆದರಿಸಿದ್ದು ಸಂದಿ-ಗೋಂದಿಯಲ್ಲಿ ತೋರಿಸಿ ಎಸ್ಕೇಪ್ ಆಗಿದ್ದು ಸದ್ಯ ಕಾರು ಪತ್ತೆಯಾಗಿದೆ.

ಇದನ್ನೂ ಓದಿ: ಇದು ತಮಾಷೆಯಲ್ಲ, ಸ್ವಲ್ಪವಾದರೂ ಸಂವೇದನೆ ಇರಲಿ: ರಾಹುಲ್​ ಗಾಂಧಿ ಟ್ವೀಟ್​​

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್