AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯನ್ನು ಬಿಟ್ಟು ದೊಡ್ಡಮ್ಮನ ಬಳಿ ಇದ್ದ 3 ವರ್ಷದ ಮಗುವನ್ನು ಬಲಿಪಡೆದ ಬಿಎಂಟಿಸಿ ಬಸ್!

ತಾಯಿಯನ್ನು ಬಿಟ್ಟು ದೊಡ್ಡಮ್ಮನ ಬಳಿ ಇದ್ದ 3 ವರ್ಷದ ಮಗುವನ್ನು ಇದೀಗ ಬಿಎಂಟಿಸಿ ಬಸ್ ಬಲಿ ಪಡೆದುಕೊಂಡಿದೆ. ಹೌದು ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಹರಿದು ಮೂರು ವರ್ಷದ ಮಗು ಮೃತಪಟ್ಟಿದೆ.

ತಾಯಿಯನ್ನು ಬಿಟ್ಟು ದೊಡ್ಡಮ್ಮನ ಬಳಿ ಇದ್ದ 3 ವರ್ಷದ ಮಗುವನ್ನು ಬಲಿಪಡೆದ ಬಿಎಂಟಿಸಿ ಬಸ್!
ಅಯಾನ್ ಮೃತ ಮಗು
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on:Oct 09, 2023 | 11:56 AM

ಬೆಂಗಳೂರು, (ಅಕ್ಟೋಬರ್ 09) ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ (BMTC Bus) ಮತ್ತೊಂದು ಬಲಿಯಾಗಿದೆ. ಗಾರೇಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಹರಿದು ಮೂರು ವರ್ಷದ ಅಯಾನ್ ಮೃತಪಟ್ಟಿದ್ದಾನೆ. ನಿನ್ನೆ (ಅಕ್ಟೋಬರ್ 08) ಅಯಾನ್, ದೊಡ್ಡಮ್ಮನ ಜೊತೆ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ​ ಬೈಕ್​ನಿಂದ ಕೆಳಗೆ ಬಿದ್ದಿದ್ದ ಅಯಾನ್ ಮೇಲೆ  ಬಸ್​ ಹರಿದಿದೆ. ಪರಿಣಾಮ ಆಯಾನ್​ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಬಸ್​ ಮೇಲೆ ಹರಿದಿದ್ದರಿಂದ ಅಯಾನ್​ ತಲೆ ಛಿದ್ರ ಛಿದ್ರವಾಗಿದೆ. ಬಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದೊಡ್ಡಮ್ಮನ ಕಣ್ಣೀರಿನ ಮಾತು

ಮಗುವಿನ ದೊಡ್ಡಮ್ಮ ರುಸ್ಮಾ ಮಾತನಾಡಿ, ಮಗು ದೊಡ್ಡಮ್ಮ ದೊಡ್ಡಮ್ಮ ಅಂತಾ ನನ್ನೇ (ಮಗುವಿನ ದೊಡ್ಡಮ್ಮ ರುಸ್ಮಾ) ಹಚ್ಚಿಕೊಂಡಿತ್ತು. ಅದಕ್ಕೆ ನನ್ ತಂಗಿ ತನ್ನ ಮಗು ಅಯಾನ್​ನನ್ನು ನನ್ನ ಬಳಿ ಬಿಟ್ಟು ಹೋಗಿದ್ದಳು. ನಿನ್ನೆ ನನ್ ತಂಗಿಗೆ ಹುಷಾರಿಲ್ಲ ಎಂದು ಮಗುವನ್ನ ಕರೆದುಕೊಂಡು ಹೋಗುತ್ತಿದ್ದೆ. ಗರವೇಭಾವಿ ಪಾಳ್ಯ ಜಂಕ್ಷನ್ ಬಳಿ ನಿಂತಿದ್ವಿ. ಆಗ ಮಗು ಸ್ಲಿಪ್ ಆಗಿ ಕೆಳಗೆ ಬಿದ್ದು ಅಳ್ತಿತ್ತು. ಆಗ ಬಸ್ ನವರು ನೋಡಿ ಸ್ಟಾಪ್ ಮಾಡಲಿಲ್ಲ. ನಿಲ್ಲಿಸಿ ನಿಲ್ಲಿಸಿ ಅಂದರು ಕೂಡ ಬಸ್ ನವರು ಸ್ಟಾಪ್ ಮಾಡಲಿಲ್ಲ. ಮೂವ್ ಮಾಡಿಬಿಟ್ರು. ನನ್ನ ಮಗು ಹೋಯ್ತು. ಬಸ್ ನವರು ನಿಲ್ಲಿಸಿದ್ರೆ ಮಗು ಜೀವ ಉಳಿಯುತ್ತಿತ್ತು ಎಂದು ಕಣ್ಣಿರಿಟ್ಟರು.

ಈ ಬಿಎಂಟಿಸಿ ಬಸ್​ ಬಲಿಯಾಗುತ್ತಿರುವ ಜೀವ ಇದೇ ಮೊದಲು ಅಲ್ಲ. ಈ ದೈತ್ಯ ಬಿಎಂಟಿಸಿ ಬಸ್​ಗೆ ಹಲವು ಜೀವಗಳು ಬಲಿಯಾಗಿವೆ. ಇದರಿಂದ ಇದಕ್ಕೆ ಕಿಲ್ಲರ್​ ಬಿಎಂಟಿಸಿ ಬಸ್​ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ದೈತ್ಯ ಬಿಎಂಟಿಸಿ ಬಸ್ ಓಡಿಸುವ ಚಾಲಕರು​ ಪಕ್ಕದಲ್ಲಿ ಚಿಕ್ಕ ವಾಹನಗಳು ಸಂಚರಿಸುತ್ತವೆ ಎನ್ನುವುದನ್ನೇ ಲೆಕ್ಕಿಸಲ್ಲ.

ಬಿಎಂಟಿಸಿ ಬಸ್​ ಚಾಲಕರಿಗೆ ಯಾರ ಭಯವೂ ಇಲ್ಲ. ಚಿಕ್ಕ ವಾಹನಗಳಂತೆ ವೇಗವಾಗಿ ನುಗ್ಗಿಸಿಕೊಂಡು ಹೋಗುತ್ತಾರೆ. ಇದಕ್ಕೆ ಬಿಎಂಟಿಸಿ ಸಂಸ್ಥೆ ಕಡಿವಾಣ ಹಾಕಿದೆ. ಇಲ್ಲವಾದರಲ್ಲಿ ಸಿಕ್ಕ ಸಿಕ್ಕವರಿಗೆ ಗುದ್ದಿ ಇನ್ನಷ್ಟು ಅಮಾಯಕ ಜನರ ಪ್ರಾಣ ಬಲಿ ಪಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಬೆಂಗಳುರಿನ ಮತ್ತಷ್ಟು ಸುದ್ದಿಗಾಗಿ ಇ;ಲ್ಲಿ ಕ್ಲಿಕ್ ಮಾಡಿ

Published On - 11:44 am, Mon, 9 October 23

ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ