AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ವೃತ್ತಿಯಲ್ಲಿ ನರ್ಸ್, ಶೋಕಿ‌ ಜೀವನಕ್ಕೆ ಬಿದ್ದು ಈಕೆ ಹಿಡಿದ ದಾರಿ ಎಂತಹದ್ದು ನೋಡಿ

ಇತ್ತಿಚೀನ ದಿನಗಳಲ್ಲಿ ಶೋಕಿ ಜೀವನದ ಹಿಂದೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೊಸ್ಕರ​ ಎಂತಹ ಕೆಲಸಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. ಅದರಂತೆ ಇಲ್ಲೊಬ್ಬಳು ಹೈ ಪೈ ಜೀವನದ ಆಸೆಗೆ ಬಿದ್ದು ಇದೀಗ ಅಂದರ್​ ಆಗಿದ್ದಾಳೆ.

Bengaluru News: ವೃತ್ತಿಯಲ್ಲಿ ನರ್ಸ್, ಶೋಕಿ‌ ಜೀವನಕ್ಕೆ ಬಿದ್ದು ಈಕೆ ಹಿಡಿದ ದಾರಿ ಎಂತಹದ್ದು ನೋಡಿ
ಆರೋಪಿ ಮಹಿಳೆ ಗಂಗಾ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Jun 15, 2023 | 8:05 AM

Share

ಬೆಂಗಳೂರು: ಇತ್ತಿಚೀನ ದಿನಗಳಲ್ಲಿ ಶೋಕಿ ಜೀವನದ ಹಿಂದೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೊಸ್ಕರ​ ಎಂತಹ ಕೆಲಸಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. ಅದರಂತೆ ಇಲ್ಲೊಬ್ಬಳು ಹೈ ಪೈ ಜೀವನದ ಆಸೆಗೆ ಬಿದ್ದು ಇದೀಗ ಅಂದರ್​ ಆಗಿದ್ದಾಳೆ. ಹೌದು ಆಕೆ ವೃತ್ತಿಯಲ್ಲಿ ನರ್ಸ್(Nurse), ಕೈತುಂಬಾ ಒಳ್ಳೆ ಸಂಬಳ ಕೂಡ ಬರುತ್ತಿತ್ತು. ಇದರ ಮಧ್ಯೆ ಶೋಕಿ‌ ಜೀವನದ ಜೊತೆಗೆ ಹಣದ ವ್ಯಾಮೋಹ ಕೂಡ ಜಾಸ್ತಿಯಾಗಿತ್ತು. ಇದಕ್ಕೊಸ್ಕರ ಕಳ್ಳತನ(Theft)ದ ಹಾದಿ ಹಿಡಿದಿದ್ದಳು. ಇದರಿಂದ ತನ್ನ ಇಷ್ಟದ ಕೆಲಸವನ್ನ ಕಳೆದುಕೊಂಡಳು. ಇನ್ನು ಕೆಲಸ ಹೋದ ಬಳಿಕ ಆಕೆ ಆಯ್ಕೆ ಮಾಡಿಕೊಂಡಿದ್ದೇ ಡೇಂಜ​ರಸ್ ದಾರಿ. ಹೌದು ಬಾಡಿಗೆ ಕೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಒಬ್ಬರೆ ಇದ್ದದ್ದನ್ನು ನೋಡಿ, ಅವರ ತಲೆಗೆ ಹೊಡೆದು‌ ಕತ್ತಿನಲ್ಲಿದ್ದ ಸರವನ್ನ ದೋಚಲು ಶುರು ಮಾಡಿದ್ದಳು. ಇದೀಗ ಆಕೆಯನ್ನ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮೀ ಅಲಿಯಾಸ್ ಗಂಗಾ ಅರೆಸ್ಟ್

ಹೌದು ಹೀಗೆ ಅಡ್ಡದಾರಿ ಹಿಡಿದ ಲಕ್ಷ್ಮೀ ಅಲಿಯಾಸ್ ಗಂಗಾ ಕಳೆದ ತಿಂಗಳು ಮೇ.26 ರಂದು ಲಗ್ಗೆರೆಯ ಪಾರ್ವತಿನಗರದಲ್ಲಿ ಡ್ರೈ ಪ್ರೂಟ್ಸ್ ಮಾರುವ ನೆಪದಲ್ಲಿ ಹೋಗಿದ್ದಳು. ಮನೆ ಕೇಳಲು ಹೋಗಿ, ಒಂಟಿಯಾಗಿ ಮನೆಯಲ್ಲಿ ಇರುವವರನ್ನ ಟಾರ್ಗೆಟ್ ಮಾಡಿದ್ದ ಆಕೆ, ಅದರಂತೆ ಮೊದಲ ಪ್ರಯತ್ನದಲ್ಲೇ ಆರೋಪಿ ಗಂಗಾ ಸಿಕ್ಕಿಬಿದ್ದಿದ್ದಾಳೆ. ಜೊತೆಗೆ ಆಕೆಯ ಹಿಂದಿನ ಘಟನೆಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ:ಅರೆಸ್ಟ್​ ಮಾಡಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಫೈರಿಂಗ್‌ ಮಾಡಿ ಆರೋಪಿಯ ಬಂಧನ

ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡೋಕು ಮುನ್ನ ಮಾಡ್ತಿದ್ಳು ಖತರ್ನಾಕ್ ಫ್ಲ್ಯಾನ್

ಇನ್ನು ಆರೋಪಿ ಗಂಗಾ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡೋಕು ಮುನ್ನ ಖತರ್ನಾಕ್ ಫ್ಲ್ಯಾನ್ ಮಾಡುತ್ತಿದ್ದಳು. ಈಕೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ದೋಚಿದ್ದ ಒಡವೆಗಳು ಒಂದೆರಡಲ್ಲ. ವಾರ್ಡ್​ಗೆ ಹೋಗಿ ಪೇಷಂಟ್ ಕಡೆಯವರನ್ನು ಹೊರಗೆ ಕಳುಹಿಸಿ, ರೋಗಿಗೆ ಮದ್ದು ಬರುವ ಇಂಜೆಕ್ಷನ್ ಕೊಟ್ಟು, ನಂತರ ಅವರ ಮೈ ಮೇಲಿದ್ದ ಚಿನ್ನಾಭರಣ ದೋಚಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಇಂತಹ ಹಲವು ಘಟನೆಗಳ ಬಳಿಕ ಆಸ್ಪತ್ರೆಯವರು ಆಕೆಯನ್ನ ಕೆಲಸದಿಂದ ತೆಗೆದು ಹಾಕಿದ್ದರು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ