AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ದರ ಏರಿಕೆ ನಡುವೆ ಜಲಮಂಡಳಿಗೆ ಮತ್ತೊಂದು ಹೊಡೆತ; ಸರ್ಕಾರಿ ಸಂಸ್ಥೆಗಳಿಂದಲೇ ಬರಬೇಕಿದೆ ಕೋಟಿ ಕೋಟಿ ರೂ. ಬಿಲ್

ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ.‌

ವಿದ್ಯುತ್ ದರ ಏರಿಕೆ ನಡುವೆ ಜಲಮಂಡಳಿಗೆ ಮತ್ತೊಂದು ಹೊಡೆತ; ಸರ್ಕಾರಿ ಸಂಸ್ಥೆಗಳಿಂದಲೇ ಬರಬೇಕಿದೆ ಕೋಟಿ ಕೋಟಿ ರೂ. ಬಿಲ್
BWSSB
Poornima Agali Nagaraj
| Edited By: |

Updated on: Jul 05, 2023 | 9:35 AM

Share

ಬೆಂಗಳೂರು: ಜನರು ಕೇವಲ ಒಂದು ತಿಂಗಳ ವಾಟರ್ ಬಿಲ್(Water Bill) ಬಾಕಿ ಉಳಿಸಿಕೊಂಡ್ರೆ ಸಾಕು ವಾಟರ್ ಸಪ್ಲೈ ಕಟ್ ಮಾಡುವ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ಕೋಟಿ ಕೋಟಿ ಬಾಕಿ ಉಳಿಸಿಕೊಂಡಿದ್ರೂ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.‌ ಸರ್ಕಾರಿ ಸಂಸ್ಥೆಗಳಿಂದ ಜಲಮಂಡಳಿಗೆ(BWSSB) ಬರೋಬ್ಬರಿ 16201.89 ಕೋಟಿ ಬಿಲ್ ಬರಬೇಕಿದೆ. ಆದ್ರೆ ವಸೂಲಿ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗಾಗಲೇ ಜಲಮಂಡಳಿ ನಷ್ಟದಲ್ಲಿದ್ದು, ಜಲಮಂಡಳಿ ಬರುವ ಆದಾಯ ಸಧ್ಯ ಬೆಸ್ಕಾಂ ಬಿಲ್ ಕಟ್ಟುವುದುಕ್ಕೆ ಸರಿಹೊಂದುತ್ತಿದೆ. ಇದನ್ನ ಸರಿಪಡಿಸುವ ಸಲುವಾಗಿ ಜಲಮಂಡಳಿ ವಾಟರ್ ಬಿಲ್‌ ಏರಿಕೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಹ ಸಲ್ಲಿಸಿದೆ.‌ ಜಲಮಂಡಳಿಯ ಮಾಹಿತಿಯ ಪ್ರಕಾರ ಶೇ. 25% ರಷ್ಟು ನೀರಿನ ದರ ಪರಿಷ್ಕರಣೆಗೆ ಮಾಡುವ ಸಾಧ್ಯತೆ ಇದೆ. ಆದ್ರೆ ಮತ್ತೊಂದು ಕಡೆ ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ.‌ ಅಲ್ಲದೇ ಬಾಕಿ ಬಿಲ್ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಬಾಕಿ ಮೊತ್ತದ ಮೇಲೆ ಎಷ್ಟೇ ದಂಡ ವಿಧಿಸಿದ್ರೂ ಕೂಡಾ ಡೋಂಟ್ ಕೇರ್ ಎನ್ನುತ್ತಿವೆ ಇಲಾಖೆಗಳು. ಹೀಗಾಗಿ ಜಲಮಂಡಳಿಗೆ ದೊಡ್ಡ ಟೆಕ್ಷನ್ ಶುರುವಾಗಿದೆ.

ಯಾವೆಲ್ಲ ಇಲಾಖೆಗಳು ನೀರಿನ ಬಿಲ್ ಕಟ್ಟಿಲ್ಲ ಅಂತ ನೋಡೋದಾದ್ರೆ

ಇನ್ನು, ಈ ಕುರಿತಾಗಿ ಜಲಂಡಳಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಆದಷ್ಟು ಬೇಗ ಬಾಕಿ ಪಾವತಿಸುಂತೆ ಪತ್ರವನ್ನು ಕೂಡಾ ಬರೆಯಲಾಗಿದೆ. ಆಸ್ಪತ್ರೆಗಳಲ್ಲೂ ಕೂಡಾ ಬಿಲ್ ಬಾಕಿ ಇದೆ, ಎಲ್ಲವನ್ನೂ ನಾವು ಕಟ್ಟಿಸಲು ತಳಿಸಿದ್ದೇವೆ. ಆದ್ರೆ ಬಜೆಟ್ ಮಂಡನೆಯ ನಂತರ ಪಾವತಿ ಮಾಡ್ತಿವಿ ಅಂತಿದ್ದಾರೆ‌. ಇದು ಕೇವಲ ಒಂದು ವರ್ಷದಲ್ಲಿ ಬಾಕಿ ಉಳಿದ ಬಿಲ್‌ ಅಲ್ಲ . ಹಲವು ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ನಾವು ಕೂಡ ನೋಟಿಸ್ ಕೊಟ್ಟಿದ್ದೀವಿ ಅಂತ ಜಲಮಂಡಳಿ ಮುಖ್ಯ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದರು.‌

ಒಟ್ನಲ್ಲಿ, ಸರ್ಕಾರಿ ಸಂಸ್ಥೆಗಳ ಮೇಲೆ ಜಲಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಸಂಸ್ಥೆಗಳಿಗೆ ಚೆಲ್ಲಾಟವಾದ್ರೆ, ಜಲಮಂಡಳಿಗೆ ಪ್ರಾಣ ಸಂಕಟವಾಗಿದ್ದು, ನೋಟಿಸ್ ಕೊಟ್ಟ ಬಳಿಕವಾದ್ರು ವಾಟಾಲ್ ಬಿಲ್ ಪೇ ಮಾಡ್ತಾವಾ ಸಂಸ್ಥೆಗಳು ಅಂತ ಕಾದು ನೋಡ್ಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Poornima Agali Nagaraj
Poornima Agali Nagaraj
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ