AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ದರ ಏರಿಕೆ ನಡುವೆ ಜಲಮಂಡಳಿಗೆ ಮತ್ತೊಂದು ಹೊಡೆತ; ಸರ್ಕಾರಿ ಸಂಸ್ಥೆಗಳಿಂದಲೇ ಬರಬೇಕಿದೆ ಕೋಟಿ ಕೋಟಿ ರೂ. ಬಿಲ್

ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ.‌

ವಿದ್ಯುತ್ ದರ ಏರಿಕೆ ನಡುವೆ ಜಲಮಂಡಳಿಗೆ ಮತ್ತೊಂದು ಹೊಡೆತ; ಸರ್ಕಾರಿ ಸಂಸ್ಥೆಗಳಿಂದಲೇ ಬರಬೇಕಿದೆ ಕೋಟಿ ಕೋಟಿ ರೂ. ಬಿಲ್
BWSSB
Poornima Agali Nagaraj
| Edited By: |

Updated on: Jul 05, 2023 | 9:35 AM

Share

ಬೆಂಗಳೂರು: ಜನರು ಕೇವಲ ಒಂದು ತಿಂಗಳ ವಾಟರ್ ಬಿಲ್(Water Bill) ಬಾಕಿ ಉಳಿಸಿಕೊಂಡ್ರೆ ಸಾಕು ವಾಟರ್ ಸಪ್ಲೈ ಕಟ್ ಮಾಡುವ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ಕೋಟಿ ಕೋಟಿ ಬಾಕಿ ಉಳಿಸಿಕೊಂಡಿದ್ರೂ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.‌ ಸರ್ಕಾರಿ ಸಂಸ್ಥೆಗಳಿಂದ ಜಲಮಂಡಳಿಗೆ(BWSSB) ಬರೋಬ್ಬರಿ 16201.89 ಕೋಟಿ ಬಿಲ್ ಬರಬೇಕಿದೆ. ಆದ್ರೆ ವಸೂಲಿ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗಾಗಲೇ ಜಲಮಂಡಳಿ ನಷ್ಟದಲ್ಲಿದ್ದು, ಜಲಮಂಡಳಿ ಬರುವ ಆದಾಯ ಸಧ್ಯ ಬೆಸ್ಕಾಂ ಬಿಲ್ ಕಟ್ಟುವುದುಕ್ಕೆ ಸರಿಹೊಂದುತ್ತಿದೆ. ಇದನ್ನ ಸರಿಪಡಿಸುವ ಸಲುವಾಗಿ ಜಲಮಂಡಳಿ ವಾಟರ್ ಬಿಲ್‌ ಏರಿಕೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಹ ಸಲ್ಲಿಸಿದೆ.‌ ಜಲಮಂಡಳಿಯ ಮಾಹಿತಿಯ ಪ್ರಕಾರ ಶೇ. 25% ರಷ್ಟು ನೀರಿನ ದರ ಪರಿಷ್ಕರಣೆಗೆ ಮಾಡುವ ಸಾಧ್ಯತೆ ಇದೆ. ಆದ್ರೆ ಮತ್ತೊಂದು ಕಡೆ ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ.‌ ಅಲ್ಲದೇ ಬಾಕಿ ಬಿಲ್ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಬಾಕಿ ಮೊತ್ತದ ಮೇಲೆ ಎಷ್ಟೇ ದಂಡ ವಿಧಿಸಿದ್ರೂ ಕೂಡಾ ಡೋಂಟ್ ಕೇರ್ ಎನ್ನುತ್ತಿವೆ ಇಲಾಖೆಗಳು. ಹೀಗಾಗಿ ಜಲಮಂಡಳಿಗೆ ದೊಡ್ಡ ಟೆಕ್ಷನ್ ಶುರುವಾಗಿದೆ.

ಯಾವೆಲ್ಲ ಇಲಾಖೆಗಳು ನೀರಿನ ಬಿಲ್ ಕಟ್ಟಿಲ್ಲ ಅಂತ ನೋಡೋದಾದ್ರೆ

ಇನ್ನು, ಈ ಕುರಿತಾಗಿ ಜಲಂಡಳಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಆದಷ್ಟು ಬೇಗ ಬಾಕಿ ಪಾವತಿಸುಂತೆ ಪತ್ರವನ್ನು ಕೂಡಾ ಬರೆಯಲಾಗಿದೆ. ಆಸ್ಪತ್ರೆಗಳಲ್ಲೂ ಕೂಡಾ ಬಿಲ್ ಬಾಕಿ ಇದೆ, ಎಲ್ಲವನ್ನೂ ನಾವು ಕಟ್ಟಿಸಲು ತಳಿಸಿದ್ದೇವೆ. ಆದ್ರೆ ಬಜೆಟ್ ಮಂಡನೆಯ ನಂತರ ಪಾವತಿ ಮಾಡ್ತಿವಿ ಅಂತಿದ್ದಾರೆ‌. ಇದು ಕೇವಲ ಒಂದು ವರ್ಷದಲ್ಲಿ ಬಾಕಿ ಉಳಿದ ಬಿಲ್‌ ಅಲ್ಲ . ಹಲವು ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ನಾವು ಕೂಡ ನೋಟಿಸ್ ಕೊಟ್ಟಿದ್ದೀವಿ ಅಂತ ಜಲಮಂಡಳಿ ಮುಖ್ಯ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದರು.‌

ಒಟ್ನಲ್ಲಿ, ಸರ್ಕಾರಿ ಸಂಸ್ಥೆಗಳ ಮೇಲೆ ಜಲಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಸಂಸ್ಥೆಗಳಿಗೆ ಚೆಲ್ಲಾಟವಾದ್ರೆ, ಜಲಮಂಡಳಿಗೆ ಪ್ರಾಣ ಸಂಕಟವಾಗಿದ್ದು, ನೋಟಿಸ್ ಕೊಟ್ಟ ಬಳಿಕವಾದ್ರು ವಾಟಾಲ್ ಬಿಲ್ ಪೇ ಮಾಡ್ತಾವಾ ಸಂಸ್ಥೆಗಳು ಅಂತ ಕಾದು ನೋಡ್ಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್