ಹಸಿರೀಕರಣ ಹೆಚ್ಚಿಸಲು ಬೆಂಗಳೂರಿನಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ
ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸಿಟಿಯಲ್ಲಿ ಹಸಿರೀಕರಣ ಹೆಚ್ಚಳ ಮಾಡಲು ಮಿಯಾವಾಕಿ ಫಾರೆಸ್ಟ್ ತಲೆ ಎತ್ತುತ್ತಿದೆ. ಅರ್ಧ ಎಕರೆ ಜಾಗದಲ್ಲಿ ಮಿನಿ ಫಾರೆಸ್ಟ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.
- Poornima Agali Nagaraj
- Updated on: Jun 24, 2024
- 10:56 am
ಕಟ್ ಮಾಡುವ ಮುನ್ನವೇ ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ಬೆಲೆ ಏರಿಕೆ!
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಈ ಮಧ್ಯೆ ತರಕಾರಿಗಳ ಬೆಲೆಯಲ್ಲಿ ಹಾವು-ಏಣಿ ಆಟ ಶುರುವಾಗಿದೆ. ಟೊಮೆಟೊ ಒಂದು ವಾರದ ಹಿಂದೆ ಶತಕ ಭಾರಿಸಿತ್ತು. ಇದೀಗ ಕೊಂಚ ಕಡಿಮೆಯಾಗಿದೆ. ಈ ಮಧ್ಯೆ ಈರುಳ್ಳಿ ಬೆಲೆ ಏರಿಕರಯಾಗುತ್ತುದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.
- Poornima Agali Nagaraj
- Updated on: Jun 23, 2024
- 2:57 pm
ಮನೆಯನ್ನೇ ಪಾರ್ಕ್ ಮಾಡಿದ ಪರಿಸರ ಪ್ರೇಮಿ; 250ಕ್ಕೂ ಹೆಚ್ಚು ಬಗೆಯ ಗಿಡಗಳ ಹಸಿರ ಮನೆ
ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿ ಮಾರ್ಪಡುತ್ತಿದೆ. ನಗರದಲ್ಲಿ ಹಸಿರನ್ನ ನೋಡುವುದೇ ಅಪರೂಪವಾಗಿ ಹೋಗಿದೆ. ಈ ಮಧ್ಯೆ ಡಾಲೋರ್ಸ್ ಕಾಲೋನಿಯಲ್ಲಿ ಪರಿಸರ ಪ್ರೇಮಿಯೊಬ್ಬರು ತಮ್ಮ ಮನೆಯನ್ನೇ ಸುಂದರ ಪಾರ್ಕ್ ಅನ್ನಾಗಿ ಮಾಡಿಕೊಂಡಿದ್ದು, ನಗರದ ಜನರಿಗೆ ಮಾದರಿಯಾಗಿದ್ದಾರೆ.
- Poornima Agali Nagaraj
- Updated on: Jun 20, 2024
- 8:06 am
ಬೆಂಗಳೂರಿನಲ್ಲಿ ನೂರರ ಗಡಿ ದಾಟಿದ ಟೊಮೆಟೊ ಬೆಲೆ, ಇನ್ನು ಮೂರು ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ
Bengaluru Tomato Price Hike; ತರಕಾರಿ ಬೆಲೆ ಏರಿಕೆಯ ಬಿಸಿ ಬೆಂಗಳೂರಿನ ಜನರಿಗೆ ಈಗಾಗಲೇ ತಟ್ಟಿದೆ. ಇದೀಗ ಟೊಮೆಟೊ ಖರೀದಿ ಬಲು ದುಸ್ತರವಾಗಿದೆ. ಟೊಮೆಟೊ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು, 150 ರೂ. ವರಗೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣವೇನು? ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಲಿದೆಯಾ? ಇಲ್ಲಿದೆ ವಿವರ.
- Poornima Agali Nagaraj
- Updated on: Jun 20, 2024
- 7:47 am
ಹೋಟೆಲ್ಗಳಲ್ಲಿ ಹಾಡು ಹಾಕೋಕೆ ಬೇಕು ಕೇಂದ್ರ ಸರ್ಕಾರದ ಲೈಸೆನ್ಸ್; ಹೋಟೆಲ್ ಅಸೋಸಿಯೇಷನ್ ಆಕ್ರೋಶ
ಇನ್ಮುಂದೆ ಹೋಟೆಲ್ಗಳಲ್ಲಿ ಹಾಡುಗಳನ್ನ ಹಾಕಬೇಕು ಅಂದ್ರೆ ಅದಕ್ಕೆ ಲೈಸೆನ್ಸ್ ತೆಗೆದುಕೊಳ್ಲಬೇಕು ಅಂತ ಕೇಂದ್ರ ಸರ್ಕಾರ ರೂಲ್ಸ್ ಮಾಡಿದೆ. ಸಧ್ಯ ಈ ರೂಲ್ಸ್ ವಿರುದ್ದ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತಿದೆ. ಹಾಡುಗಳ ಬಳಕೆಗೆ ಲೈಸೆನ್ಸ್ ಕಡ್ಡಾಯ ಮಾಡಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತಿದ್ದು ಕೇಂದ್ರ ಸರ್ಕಾರಕ್ಕೆ ಲೈಸೆನ್ಸ್ ಆದೇಶ ಕ್ಯಾನ್ಸಲ್ ಮಾಡುವಂತೆ ಪತ್ರ ಬರೆಯಲಾಗುತ್ತಿದೆ.
- Poornima Agali Nagaraj
- Updated on: Jun 19, 2024
- 8:38 am
ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್: 100 ಗಡಿದಾಟಿದ ಟೊಮೆಟೊ, ಗೃಹಿಣಿಯರು ಆಕ್ರೋಶ
ಟೊಮೆಟೊ ಒಂದು ಕೆಜಿಗೆ ಬರೋಬ್ಬರಿ 100 ರೂ, ಈರುಳ್ಳಿ ಬೆಲೆ ಬರೋಬ್ಬರಿ 60 ರೂ ಏರಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ಮಳೆ ಬರುತ್ತಿರುವ ಪರಿಣಾಮ ಟೊಮೆಟೊ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ಟೊಮೆಟೊ ಬೆಲೆ ಕೆಜಿಗೆ 100 ರೂ ಏರಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ.
- Poornima Agali Nagaraj
- Updated on: Jun 17, 2024
- 6:45 pm
15 ದಿನದ ಮಗುವಿಗೆ ಹಾರ್ಟ್ ಅಪರೇಷನ್, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ
ಸರ್ಕಾರಿ ಆಸ್ಪತ್ರೆಗಳೆಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಅದೇ ಸರ್ಕಾರಿ ಆಸ್ಪತ್ರೆಲ್ಲಿ 15 ದಿನದ ಮಗುವುಗೆ ಸರ್ಜರಿ ಮಾಡಿ ಡಾಕ್ಟರ್ಗಳು ಸಾಧಾನೆ ಮಾಡಿದ್ದಾರೆ. ಮಗು ಉಳಿಸಿಕೊಳ್ಳುವ ಸಲುವಾಗಿ ಹಲವು ಖಾಸಗಿ ಆಸ್ಪತ್ರೆಗಳನ್ನ ಸುತ್ತಿದ್ರು. ಕೊನೆಗೆ ಇಂದಿರಾ ಗಾಂಧಿ ಆಸ್ಪತ್ರೆಗೆ ಮಗು ದಾಖಲಿಸಿದ್ದು ಸಧ್ಯ ಹಾರ್ಟ್ ಸಮಸ್ಯೆಗೆ ಸರ್ಜರಿ ಮಾಡಿ ಮಗುವನ್ನ ಡಾಕ್ಟರ್ಸ್ ಉಳಿಸಿಕೊಂಡಿದ್ದಾರೆ.
- Poornima Agali Nagaraj
- Updated on: Jun 16, 2024
- 7:34 am
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ರಾಜ್ಯದೆಲ್ಲೆಡೆ ಭಾರಿ ವಿರೋಧ: ಸರ್ಕಾರದ ವಿರುದ್ಧ ವಾಹನ ಸವಾರರು ಗರಂ
ವಾಹನ ಸವಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟದ ತೆರಿಗೆ ದರವನ್ನ ಹೆಚ್ಚಳ ಮಾಡಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದರ ಏರಿಕೆ ಆದೇಶ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.
- Poornima Agali Nagaraj
- Updated on: Jun 15, 2024
- 8:19 pm
ಬೆಂಗಳೂರು ಹವಾಮಾನದಲ್ಲಿ ಭಾರಿ ಬದಲಾವಣೆ, ಹೆಚ್ಚಾದ ವೈರಲ್ ಸೋಂಕು; ಆಸ್ಪತ್ರೆಗೆ ದಾಖಾಲಾಗುವವರ ಸಂಖ್ಯೆ ಹೆಚ್ಚಳ
ಬೆಂಗಳೂರಿನಲ್ಲಿ ಮುಂಗಾರು ಮಳೆಯ ಸಿಂಚನದೊಂದಿಗೆ ವೈರಲ್ ಸೋಂಕು ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಹವಾಮಾನದಲ್ಲಿ ಆಗಿರುವ ಬದಲಾವಣೆ ಕೂಡ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ ತಜ್ಞರು. ಹೀಗಾಗಿ, ಸಾರ್ವಜನಿಕರು ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂಬ ಬಗ್ಗೆ ತಜ್ಞರು ಸಲಹೆ ನೀಡಿದ್ದು, ಆ ಕುರಿತ ವಿವರ ಇಲ್ಲಿದೆ.
- Poornima Agali Nagaraj
- Updated on: Jun 15, 2024
- 10:37 am
ಬೆಂಗಳೂರಿನಲ್ಲಿ ಗಗನಕ್ಕೇರಿದ ದಿನಸಿ, ತರಕಾರಿ ಬೆಲೆ: ಟೊಮೆಟೋ ಬೆಲೆ 50 ರೂ.ಗೆ ಏರಿಕೆ, 200 ರ ಗಡಿದಾಟಿದ ತೊಗರಿ ಬೇಳೆ
Vegetables Price in Bangalore Today; ಬೆಂಗಳೂರಿನಲ್ಲಿ ಮತ್ತೆ ತರಕಾರಿ ದುಬಾರಿಯಾಗಿದೆ. ಈ ಬಾರಿ ತರಕಾರಿ ಜೊತೆಗೆ ದಿನಸಿ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಹಾಗಾದರೆ, ಸದ್ಯ ಯಾವ ತರಕಾರಿಗೆ ಎಷ್ಟಿದೆ ಬೆಲೆ? ದಿನಸಿ ವಸ್ತುಗಳ ಬೆಲೆ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ.
- Poornima Agali Nagaraj
- Updated on: Jun 13, 2024
- 7:13 am
ಮಹಿಳೆಯರಲ್ಲಿ ಹೆಚ್ಚಾದ ಒಬಿಸಿಟಿ ಹಾಗೂ ಹೈಪರ್ ಟೆನ್ಷನ್; ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೇ ಕುತ್ತು
ದಿನದಿಂದ ದಿನಕ್ಕೆ ಮಹಿಳೆಯರಲ್ಲಿ ಒಬಿಸಿಟಿ ಹಾಗೂ ಹೈಪರ್ ಟೆನ್ಷನ್ ಹೆಚ್ಚಾಗುತ್ತಿದ್ದು, ಸರಿಯಾಗಿ ಚಿಕಿತ್ಸೆಯಾಗದಿದ್ರೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಲಿದೆ. ಒಬಿಸಿಟಿ ಹಾಗೂ ಹೈಪರ್ ಟೆನ್ಷನ್ ಸಮಸ್ಯೆಗಳ ಕೇಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಾಲಾಗುತ್ತಿವೆ. ಹೀಗಾಗಿ ಮಹಿಳೆಯರು ಎಚ್ಚರ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
- Poornima Agali Nagaraj
- Updated on: Jun 12, 2024
- 11:59 am
Gruha Lakshmi Scheme: ಮುಂದಿನ ತಿಂಗಳಿನಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಹಣ
Gruha Lakshmi Money for Transgenders; ಈವರೆಗೆ ಮಹಿಳೆಯರಿಗೆ ಮಾತ್ರ ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದೆ ತೃತೀಯ ಲಿಂಗಿಗಳಿಗೂ ದೊರೆಯಲಿದೆ. ಈ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ತಿಂಗಳಿನಿಂದ ಹಣ ದೊರೆಯಲಿದ್ದು, ಈ ತಿಂಗಳ ಅಂತ್ಯದ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯ ಹೇಗೆ? ಏನು ದಾಖಲೆಗಳು ಬೇಕು ಎಂಬ ಮಾಹಿತಿಯೂ ಸೇರಿದಂತೆ ಪೂರ್ಣ ವಿವರ ಇಲ್ಲಿದೆ.
- Poornima Agali Nagaraj
- Updated on: Jun 12, 2024
- 10:45 am