AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ನಗರ DHO ಡಾ. ಶ್ರೀನಿವಾಸ್ ವಿರುದ್ಧ ಲಂಚ ಆರೋಪ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಮುಖ್ಯ ಕಚೇರಿಯಲ್ಲಿ ಡಿಹೆಚ್ಓ ಡಾ. ಶ್ರೀ ನಿವಾಸ್ ವಿರುದ್ಧ ಲಂಚ ಪಡೆದ ಆರೋಪ ಮಾಡಲಾಗಿದೆ. ಈ ಕುರಿತಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಚೇರಿಯಲ್ಲಿ ಪ್ರತಿಭಟನೆ ಮಾಡಿದರು.

ಬೆಂಗಳೂರು ನಗರ DHO ಡಾ. ಶ್ರೀನಿವಾಸ್ ವಿರುದ್ಧ ಲಂಚ ಆರೋಪ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ
ಡಾ. ಶ್ರೀನಿವಾಸ್ ವಿರುದ್ಧ ಲಂಚ ಆರೋಪ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 01, 2022 | 10:14 AM

Share

ಬೆಂಗಳೂರು: ನಗರದ ಡಿಎಚ್​​ಓ ಡಾ. ಶ್ರೀನಿವಾಸ್ ವಿರುದ್ಧ ಮುಖ್ಯ ಕಚೇರಿಯಲ್ಲೇ ಲಂಚ ಪಡೆದಿರುವುದಾಗಿ ಆರೋಪ ಮಾಡಲಾಗಿದ್ದು, ಬಿಳಿ ಬಣ್ಣದ ಕವರ್​ನಲ್ಲಿ ಡಾ. ಶ್ರೀನಿವಾಸ್​ಗೆ 500 ರೂಪಾಯಿ ನೋಟುಗಳಿದ್ದ 4 ಕವರ್​ನ್ನು ಅಪರಿಚಿತ ವ್ಯಕ್ತಿಗಳು ನೀಡಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಮಧ್ಯಾಹ್ನ 3ರ ಸುಮಾರಿಗೆ ಡಿಎಚ್​​ಓ ಲಂಚ ಪಡೆದಿರುವುದಾಗಿ ಆರೋಪಿಸಿದ್ದು, ಡಾ. ಶ್ರೀನಿವಾಸ್​ಗೆ ಇಬ್ಬರು ಹಣ ನೀಡುವ ದೃಶ್ಯ ಟಿವಿ 9ಗೆ ಲಭ್ಯವಾಗಿದೆ. ಹಣದ ಕವರ್​ ನೀಡಿದ ಬಳಿಕ ಆಪ್​ ಕಾರ್ಯಕರ್ತರಿಂದ DHOಗೆ ಪ್ರಶ್ನೆ ಮಾಡಿದ್ದು, ಆನ್​ಲೈನ್ ಫೀಸ್ ಕಟ್ಟಲು ಹಣ ನೀಡಿದ್ದಾರೆ ಎಂದು ಡಿಹೆಚ್​ಒ ಉತ್ತರ  ನೀಡಿದ್ದಾರೆ. ಫೀಸ್ ಬಗ್ಗೆ ಪ್ರಶ್ನೆ ಮಾಡಿದಾಗ ಮತ್ತೊಂದು ಉತ್ತರ ನೀಡಿದ ಡಿಹೆಚ್​ಒ, ಹಣ ಕೊಟ್ಟವರು ಯಾರು ಎಂದು ನನಗೆ ಗೊತ್ತೇ ಇಲ್ಲ ಎಂದು ಡಾ. ಶ್ರೀನಿವಾಸ್ ಹೇಳಿದರು. ಈ ವೇಳೆ ಕಚೇರಿಯಿಂದ ತಪ್ಪಿಸಿಕೊಳ್ಳಲು ಡಿಹೆಚ್​ಒ ಡಾ. ಶ್ರೀನಿವಾಸ್​ ಯತ್ನಿಸಿದ್ದು, ಕಾರಿನ ಮುಂದೆ ಮಲಗಿ ಆಪ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ ಬಿಟ್ಟು ನಡೆದುಕೊಂಡೇ ತೆರಳಿದರು.

ಪ್ರಕರಣ ಏನು ಅಂತ ನೋಡೋದಾದ್ರೆ:

ಯಲಹಂಕ ಭಾಗದಲ್ಲಿ ಕ್ಲೋಸ್ ಆಗಿದ್ದ ಪ್ರಾರ್ಥಮಿಕ ಆರೋಗ್ಯ ಕೇಂದ್ರವನ್ನು ಮತ್ತೆ ಓಪನ್ ಮಾಡುವಂತೆ ಮನವಿ ಮಾಡಲು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಸುಹಾಸಿನಿ ಡಿಹೆಚ್ಓ ಡಾ. ಶ್ರೀನಿವಾಸ್​ರನ್ನು ಭೇಟಿ ಮಾಡಿ ಮನವಿ ನೀಡಲು ಬಂದಿದ್ದರು. ಈ ವೇಳೆ ಒಬ್ಬ ಮಹಿಳೆ ಮತ್ತು ಪುರುಷ ಐನೂರು ರುಪಾಯಿ ನೋಟುಗಳನ್ನು ಎಣಿಸಿ ಬಿಳಿ ಬಣ್ಣದ ಕವರ್ ನಲ್ಲಿ ಹಾಕುತ್ತಿದ್ದರು. ಆ ಕವರ್​ಗಳನ್ನು ತೆಗೆದುಕೊಂಡು ಡಿಹೆಚ್ಓ ರೂಮ್​ನೊಳಗೆ ಹೋದರು. ನಂತರ ರೂಮ್​ನೊಳಗೆ ಹೋಗಿ ನೋಡಿದರೆ ಹಣವಿದ್ದ ಬಿಳಿ ಬಣ್ಣದ ಕವರ್​ಗಳು ಡಿಹೆಚ್ಓ ಕುಳಿತಿದ್ದ ಟೇಬಲ್ ಮೇಲೆ ಕಂಡುಬಂದಿದೆ. ನಂತರ ಸುಹಾಸಿನಿ ಆಮ್ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಬಂದು, ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣು, ಕೇಂದ್ರ ಸಚಿವ ಸಂಪುಟ ಮತ್ತೆ ಪುನರ್​ರಚನೆ ಸಾಧ್ಯತೆ

ಡಿಹೆಚ್ಓ ಡಾ. ಶ್ರೀನಿವಾಸ್ ಅವರು ನಾರಾಯಣ ಹೃದಯಲುದವರು. ಆನ್ಲೈನ್​ನಲ್ಲಿ ಫೀಸ್ ಕಟ್ಟಲು ಹಣ ನೀಡಿದರು ಅಂತ ಉತ್ತರಿಸಿದರು. ಯಾವುದಕ್ಕೆ ಈ ಫೀಸ್ ಎಂದು ಪ್ರಶ್ನೆ ಮಾಡಿದರೆ, ಅವರು ಯಾರು ಅಂತ ನನಗೆ ಗೊತ್ತಿಲ್ಲ ನನ್ನ ಟೇಬಲ್ ಮೇಲೆ ಹಣವಿಟ್ಟು ಹೋಗಿದ್ದಾರೆ ಎಂದು ಹೇಳಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಚೇರಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದು, ಈ ವೇಳೆ ಡಾ. ಶ್ರೀ ನಿವಾಸ್ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಾರಿನ ಮುಂದೆ ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ ಬಿಟ್ಟು ಡಿಹೆಚ್ಓ ಡಾ. ಶ್ರೀನಿವಾಸ್ ನಡೆದುಕೊಂಡೆ ಹೋಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!