AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 44 ವರ್ಷಗಳಲ್ಲಿ ಬೆಂಗಳೂರು ಶೇ 1,005 ರಷ್ಟು ಬೆಳೆದಿದೆ: ವರದಿ

1973 ರಿಂದ 2017ರ ವರೆಗೆ ಬೆಂಗಳೂರು ಶೇ 1,005ರಷ್ಟು ಬೆಳೆದಿದೆ. ನಗರದಲ್ಲಿ ರಾಜ್ಯದ ಜನಸಂಖ್ಯೆಗಿಂತ ಶೇ 15 ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ ಎಂದು ಕಾರ್ಪರೇಟ್ಸ್​ ಇನ್​ ರಿಯಲ್​ ಎಸ್ಟೆಟ್​ (CIRE) ಎಂದು ಕರೆಯಲ್ಪಡುವ ಲೀಡರ್​​ಶಿಪ್​​ ನೆಟ್​ವರ್ಕ್​​ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿದೆ.

ಕಳೆದ 44 ವರ್ಷಗಳಲ್ಲಿ ಬೆಂಗಳೂರು ಶೇ 1,005 ರಷ್ಟು ಬೆಳೆದಿದೆ: ವರದಿ
ಬೆಂಗಳೂರು
ವಿವೇಕ ಬಿರಾದಾರ
|

Updated on: Aug 16, 2023 | 10:06 AM

Share

ಬೆಂಗಳೂರು: 1973 ರಿಂದ 2017ರ ವರೆಗೆ ಬೆಂಗಳೂರು (Bengaluru) ಶೇ 1,005ರಷ್ಟು ಬೆಳೆದಿದೆ. ನಗರದಲ್ಲಿ ರಾಜ್ಯದ ಜನಸಂಖ್ಯೆಗಿಂತ ಶೇ 15 ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ ಎಂದು ಕಾರ್ಪರೇಟ್ಸ್​ ಇನ್​ ರಿಯಲ್​ ಎಸ್ಟೆಟ್​ (CIRE) ಎಂದು ಕರೆಯಲ್ಪಡುವ ಲೀಡರ್​​ಶಿಪ್​​ ನೆಟ್​ವರ್ಕ್​​ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಬೆಂಗಳೂರು ನಗರವು ಉದ್ಯೋಗಿಗಳಿಗೆ ಪ್ರಮುಖ ಕೇಂದ್ರವಾಗಿದೆ ಮತ್ತು ನೈಜ ಅಭಿವೃದ್ಧಿಗೆ ಕೇಂದ್ರಬಿಂದುವಾಗಿದೆ.

ಕಳೆದ ವರ್ಷ ಭಾರತದ ವಾಣಿಜ್ಯ ಗುತ್ತಿಗೆಗಳಲ್ಲಿ ನಗರವು ಶೇ 20 ರಷ್ಟು ಭಾಗ ಹೊಂದಿದೆ. 2022 ರಲ್ಲಿ, ನಗರದ 12.5 ಮಿಲಿಯನ್ ಚದರ ಅಡಿ ಭೂಮಿಯಲ್ಲಿ ಕಚೇರಿಗಳೇ ಇವೆ. ಈ ವರ್ಷದ ಅಂತ್ಯದ ವೇಳೆಗೆ ಇದು 8-7 ಮಿಲಿಯನ್ ಚದರ​​ ಅಡಿಗೆ ಏರುವ ನಿರೀಕ್ಷೆ ಇದೆ. ಕಳೆದ ವರ್ಷ ಒಂದರಲ್ಲೇ 8.5 ಮಿಲಿಯನ್ ಚದರ ಅಡಿ ಭೂಮಿ ವಾಣಿಜ್ಯ ರಿಯಲ್ ಎಸ್ಟೇಟ್​​ಗಾಗಿ ಬಳಕೆಯಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ (IT-BPM) ವಲಯವು ಕಳೆದ ವರ್ಷ ಶೇ 40ರಷ್ಟು ಭೂಮಿಯನ್ನು ಬಾಡಿಗೆ ಪಡೆದುಕೊಂಡಿದೆ. ನಂತರ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯ ಶೇ 25 ರಷ್ಟು ಭೂಮಿಯನ್ನು ಬಾಡಿಗೆ ಪಡೆದುಕೊಂಡಿದೆ. ನಗರದ ಒಟ್ಟು ಗುತ್ತಿಗೆಯ ಶೇ 17 ರಷ್ಟು ಭೂಮಿಯು ಕಚೇರಿಗಳಿವೆ. ಹೊರ ವರ್ತುಲ ರಸ್ತೆ, ಪೆರಿಫೆರಲ್ ಈಸ್ಟ್ (ಆನೇಕಲ್) ಮತ್ತು ಪೆರಿಫೆರಲ್ ಸೌತ್ (ಕನಕಪುರ) ಪ್ರದೇಶಗಳ ಒಟ್ಟು ಭೂಮಿಯಲ್ಲಿ ಶೇ 50 ರಷ್ಟು ಅನ್ನು ರಿಯಲ್ ಎಸ್ಟೇಟ್​​ಗಾಗಿ ಮೀಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ತೆರವಿಗೆ ಬಿಬಿಎಂಪಿ ಆದೇಶ

ಇನ್ನು 2022ರಲ್ಲಿ ನಗರದಲ್ಲಿ 1.8 ಮಿಲಿಯನ್​​ ಚದರ ಅಡಿ ಭಾಮಿಯಲ್ಲಿ ಅಂಗಡಿಗಳೇ ಇವೆ. ಸಣ್ಣಪುಟ್ಟ ಅಂಗಡಿಗಳು ಹೆಚ್ಚಾಗಿ ಇಂದಿರಾನಗರ, ಜಯನಗರ ಮತ್ತು ಕೋರಮಂಗಲದಲ್ಲಿವೆ. ಚಿಲ್ಲರೆ ಮಾರುಕಟ್ಟೆ 2022ರಲ್ಲಿ 65 ರಿಂದ 70 ಪ್ರತಿಶತದಷ್ಟು ಆಕ್ರಮಿಸಿಕೊಂಡಿದೆ. ಈ ಮಾರುಕಟ್ಟೆಯಿಂದ ಇಲ್ಲಿಯ ಭೂಮಿಗೆ ಹೆಚ್ಚು ಬೇಡಿಕೆ ಬಂದಿದೆ.

ಬಾಡಿಗೆಗಳು ಹೆಚ್ಚಳ

ಕಳೆದ ಎರಡು-ಮೂರು ವರ್ಷಗಳಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಬಾಡಿಗೆ ಮನೆಗಳ ಬಾಡಿಗೆ 2019 ರಿಂದ 2021ರ ಅಂತ್ಯದವರೆಗೆ ಸ್ಥಿರವಾಗಿತ್ತು. ಆದರೆ 2022 ರ ನಂತರ ಬಾಡಿಗೆ ಏರಿಕೆ ಕಂಡಿದೆ. ಹೂಡಿಕೆ, ಮೂಲಸೌಕರ್ಯ ಮತ್ತು ಇನ್ನಿತರ ಸೌಲಭ್ಯಗಳು ಸುಲಭವಾಗಿ ದೊರೆಯುವುದರಿಂದ ಬಾಡಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಲೈವ್​​​ಬಿಲಿಟಿ ಇಂಡೆಕ್ಸ್​​ ವರದಿ ಪ್ರಕಾರ 1991ರಲ್ಲಿ 16 ಕೋಟಿ ರೂ. ಅಷ್ಟು ಸಾಪ್ಟ್​​ವೇರ್​ ರಪ್ತಾಗಿದ್ದು, 2022ರಲ್ಲಿ 6.3 ಲಕ್ಷ ಕೋಟಿ ರೂ. ನಷ್ಟು ಸ್ಪಾಪ್ಟ್​​ವೇರ್​ ರಪ್ತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ