AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bannerghatta National Park: ಕೊರೊನಾ ನಂತರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆ ಪ್ರಮಾಣದಲ್ಲಿ ಆದಾಯ

ಮಹಾಮಾರಿ ಕೊರೊನಾದಿಂದ ನಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಪಾರ್ಕ್​ಗೆ 2022-23‌ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಕೋಟ್ಯಾಂತರ ಆದಾಯ ಹರಿದು ಬಂದಿದೆ.

Bannerghatta National Park: ಕೊರೊನಾ ನಂತರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆ ಪ್ರಮಾಣದಲ್ಲಿ ಆದಾಯ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಆಯೇಷಾ ಬಾನು
|

Updated on:Apr 05, 2023 | 2:25 PM

Share

ಆನೇಕಲ್: ಹಲವಾರು ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(Bannerghatta National Park and Zoo) ದಾಖಲೆ ಆದಾಯ ಗಳಿಸಿದೆ. ಮಹಾಮಾರಿ ಕೊರೊನಾದಿಂದ(Coronavirus) ನಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಪಾರ್ಕ್​ಗೆ 2022-23‌ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಕೋಟ್ಯಾಂತರ ಆದಾಯ ಹರಿದು ಬಂದಿದೆ. ಒಟ್ಟು 53 ಕೋಟಿ, 89 ಲಕ್ಷ, 75‌ ಸಾವಿರದಷ್ಟು ಆದಾಯವನ್ನು ಈ ವರ್ಷ ಗಳಿಸಿದೆ. ಶಾಲೆ ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದ್ದು ಮಕ್ಕಳನ್ನು ಬನ್ನೇರುಘಟ್ಟಕ್ಕೆ ಕರೆದುಕೊಂಡು ಬರುವ ಪೋಷಕರ ಸಂಖ್ಯೆ ಹೆಚ್ಚಾಗಿದೆ.

ಪ್ರಕೃತಿ ಪ್ರಿಯರು ಭೇಟಿ ನೀಡಲೇಬೇಕಾದ ಆಕರ್ಷಣೀಯ ಸ್ಥಳವಾಗಿರುವ ಬೆಂಗಳೂರು ನಗರ ಜಿಲ್ಲೆಯ ‌ಆನೇಕಲ್ ತಾಲೂಕಿನ ಬನ್ನೇರುಘಟ್ಟಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಉತ್ತಮ ಆದಾಯ ಕೂಡ ಬರುತ್ತಿದೆ. ಕಳೆದ‌ ವರ್ಷ 2 ಕೋಟಿ ಆದಾಯ ಬಂದಿತ್ತು. 2020 ರಲ್ಲಿ 1‌‌ ಕೋಟಿ 53 ಲಕ್ಷ ಆದಾಯ ಬಂದಿತ್ತು. ಕೋವಿಡ್ ಕಾಲದ ಮುಂಚೆ ಅಂದ್ರೆ 2019-20 ರಲ್ಲಿ 3 ಕೋಟಿ 19 ಲಕ್ಷ ಆದಾಯ ಬಂದಿತ್ತು. ಆದರೆ‌ ಈ ಬಾರಿ ಬನ್ನೇರುಘಟ್ಟ ಪಾರ್ಕ್ ದಾಖಲೆ ಆದಾಯ ಗಳಿಸಿದೆ. ಈ ಬಾರಿ 2‌ ಕೋಟಿಗೂ ಅಧಿಕ ಲಾಭ ಬಂದಿದೆ. 2022-23 ರಲ್ಲಿ ಒಟ್ಟು 20,22,997 ಪ್ರವಾಸಿಗರು ಭೇಟಿ ನೀಡಿದ್ದಾರೆ. 2021-22 ರಲ್ಲಿ 9,41,613 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಕೊರೊನಾ ಹಿನ್ನೆಲೆ ನಷ್ಟು ಅನುಭವಿಸಿದ್ದ ಪಾರ್ಕ್ ಕೊರೊನಾ ನಂತರ ಟಿಕೆಟ್ ದರ ಹೆಚ್ಚಿಸಿತ್ತು. ಸದ್ಯ ಈಗ ಉತ್ತಮ ಆದಾಯ ಗಳಿಸಿದೆ.

ಇದನ್ನೂ ಓದಿ: ಬಂಡೀಪುರ ಹುಲಿ ಯೋಜನೆಗೆ 50 ವರ್ಷ: ಇಂದಿರಾ ಗಾಂಧಿ ಇದ್ದಾಗ ಇದ್ದದ್ದು 12 ಹುಲಿ, ಈಗ ಎಷ್ಟು?

ಜೀಪ್ ಸಫಾರಿಗೆ 3500ರೂ (ಇದು ಮೃಗಾಲಯ + ಸಫಾರಿ + ಬಟರ್‌ಫ್ಲೈ ಪಾರ್ಕ್ + ಕ್ಯಾಮೆರಾವನ್ನು ಒಳಗೊಂಡಿರುತ್ತದೆ), ಎಸಿ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 650 ಮತ್ತು ಮಕ್ಕಳಿಗೆ 450 ರೂ ಇದೆ(ಇದರಲ್ಲಿ ಮೃಗಾಲಯ + ಸಫಾರಿ + ಬಟರ್‌ಫ್ಲೈ ಪಾರ್ಕ್ + ಕ್ಯಾಮೆರಾವನ್ನು ಒಳಗೊಂಡಿರುತ್ತದೆ). ಎಸಿ ಅಲ್ಲದ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 330 ರೂ ಮತ್ತು ಮಕ್ಕಳಿಗೆ 180 ರೂ ಇದೆ. (ಇದು ಮೃಗಾಲಯ ಮತ್ತು ಸಫಾರಿಗಳನ್ನು ಒಳಗೊಂಡಿರುತ್ತದೆ). ಬೆಳಿಗ್ಗೆ 9:30 ರಿಂದ ಸಂಜೆ 5 ರವರೆಗೆ ಉದ್ಯಾನವನ ತೆರೆದಿರುತ್ತದೆ. ಸಫಾರಿ ಸಮಯ ಬೆಳಿಗ್ಗೆ 10 ರಿಂದ 4: 30 ರವರೆಗೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:25 pm, Wed, 5 April 23

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ