AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ಗಳನ್ನು ಕದ್ದು ತಮಿಳುನಾಡು, ಕೇರಳಾಗೆ ಸಾಗಿಸುತ್ತಿದ್ದ ಗೋರಿಪಾಳ್ಯ ಗ್ಯಾಂಗ್ ಅರೆಸ್ಟ್, ಖದೀಮರಿಂದ 1037 ಫೋನ್ ವಶ

ಬೆಂಗಳೂರಲ್ಲಿ ಪ್ರತಿನಿತ್ಯ ನೂರಾರು ಫೋನ್​ಗಳು ಕಳ್ಳತನವಾಗುತ್ತವೆ. ಆದರೆ ಅವೆಲ್ಲಾ ಎಲ್ಲಿ ಹೋಗುತ್ತವೆ ಅಂತ ಯಾರಿಗೂ ಗೊತ್ತಿಲ್ಲ. ಅಂತಹ ನಿಗೂಢ ಪ್ರಕರಣ ಭೇದಿಸಿರೋ ಬನ್ನೇರುಘಟ್ಟ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ 1037 ಫೋನ್ ಗಳನ್ನ ವಶಪಡಿಸಿಕೊಂಡಿದ್ದಾರೆ.

ಮೊಬೈಲ್​ಗಳನ್ನು ಕದ್ದು ತಮಿಳುನಾಡು, ಕೇರಳಾಗೆ ಸಾಗಿಸುತ್ತಿದ್ದ ಗೋರಿಪಾಳ್ಯ ಗ್ಯಾಂಗ್ ಅರೆಸ್ಟ್, ಖದೀಮರಿಂದ 1037 ಫೋನ್ ವಶ
ಬಂಧನ
TV9 Web
| Edited By: |

Updated on: Oct 29, 2023 | 7:06 AM

Share

ಬೆಂಗಳೂರು, ಅ.29: ಬೆಂಗಳೂರು ಸಿಟಿಯಲ್ಲಿ ಪ್ರತಿನಿತ್ಯ ನೂರಾರು ಫೋನ್ ಗಳ ಕಳುವಾಗುತ್ವೆ (Stealing  Mobile Phones).‌ ನಡೆದು ಕೊಂಡು ಹೋಗುತಿದ್ರೆ ಬೈಕ್​ನಲ್ಲಿ ಹಿಂದೆಯಿಂದ ಬಂದು ಮೊಬೈಲ್ ಎಗರಿಸುತ್ತಾರೆ, ಬಸ್ ಗಳಲ್ಲಿ ಅಟೆನ್ಷನ್ ಡೈವರ್ಶನ್ ಮಾಡಿ ಪ್ರಯಾಣಿಕರ ಜೇಬಿನಿಂದ ಮೊಬೈಲ್ ಎಗರಿಸಿ ಎಸ್ಕೇಪ್ ಆಗ್ತಾರೆ. ಅಷ್ಟೇ ಅಲ್ಲದೇ ಕಿಟಕಿ ಪಕ್ಕದಲ್ಲಿದ್ದ ಫೋನ್ ಗಳನ್ನ ಕದಿಯೋದು ಹೀಗೆ ನಾನಾ ರೀತಿಯ ಪ್ರಕರಣಗಳು ಪ್ರತಿ ನಿತ್ಯ ದಾಖಲಾಗ್ತಾನೆ ಇರ್ತಾವೆ.

ಆದರೆ ಹಾಗೇ ಕದ್ದ ಫೋನ್​ಗಳು ಎಲ್ಲಿ ಹೋಗ್ತಾವೆ ಅನ್ನೋದು ಜನ ಸಾಮಾನ್ಯರಿಗೆ ಇಲ್ಲಿಯವರೆಗೂ ಗೊತ್ತಾಗ್ತಿಲ್ಲ. ಅಂತಹ ಪ್ರಕರಣವನ್ನ ಭೇದಿಸಿರೋ ಬನ್ನೇರುಘಟ್ಟ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಗೋರಿಪಾಳ್ಯದ ಮಹಮ್ಮದ್ ಮಮೂದ್ ಪಾಷಾ, ಮಹಮ್ಮದ್ ಉಮರ್, ಮಹಮ್ಮದ್ ಸಲೀಮ್ ಹಾಗೂ ಐಯಾನ್ ಬಂಧಿತ ಆರೋಪಿಗಳು. ಇವರೆಲ್ಲ 40-50 ವರ್ಷದವರು.

ಮೊದಲಿಗೆ ಅಕ್ಟೋಬರ್ 21 ರಂದು ಬನ್ನೇರುಘಟ್ಟ ರಸ್ತೆಯ ಎಎಂಸಿ ಇಂಜಿನಿಯರಿಂಗ್ ಕಾಲೇಜು ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮಮೂದ್ ಪಾಷಾ ಮತ್ತು ಉಮರ್​ನನ್ನು ಪೊಲೀಸರು ಬಂಧಿಸಿದ್ದರು. ಇವರಿಬ್ಬರು ಒಂದು ರಟ್ಟಿನ ಬಾಕ್ಸ್ನಲ್ಲಿ ಸುಮಾರು 100 ಮೊಬೈಲ್ ಫೋನ್‌ಗಳನ್ನು ಸಾಗಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಇನ್ನು ಅಕ್ಟೋಬರ್ 26 ರಂದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಒಬ್ಬನಿಂದ 82 ಮತ್ತು ಮತ್ತೊಬ್ಬ ಆರೋಪಿಯಿಂದ 185 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡರು. ಹೆಗ್ಡೆನಗರದ ಬಾಡಿಗೆ ಮನೆಯೊಂದರಲ್ಲಿ 770 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಇದನ್ನೂ ಓದಿ: ದೇವನಹಳ್ಳಿ: ಒಂಟಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚೈನ್ ಎಗರಿಸಿದ್ದ ಸಾಪ್ಟ್ ವೇರ್ ಉದ್ಯೋಗಿ ಅರೆಸ್ಟ್​

ಈ ಆರೋಪಿಗಳು, ಪಾದಚಾರಿಗಳಿಂದ ಮೊಬೈಲ್ ಸ್ಯಾಚಿಂಗ್ ಮಾಡೋದು, ಕಿಟಕಿಯಲ್ಲಿ ಫೋನ್ ಇಟ್ಟು ನಿದ್ದೆ ಮಾಡೋರ ಬಳಿ ಹಾಗೂ ಬಸ್ ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಸಾವಿರಾರು ರೂಪಾಯಿ ಬೆಲೆಯ ಮೊಬೈಲ್ ಗಳನ್ನ ಕಳವು ಮಾಡ್ತಿದ್ರು. ಬಳಿಕ ಅದನ್ನ ಗೋರಿಪಾಳ್ಯದ ರೂಂನಲ್ಲಿ ಸಂಗ್ರಹ ಮಾಡಿ ಸಣ್ಣ ಪುಟ್ಟ ರಿಪೇರಿ ಮಾಡಿ ಬಳಿಕ‌ ಕಾಟನ್ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಚೆನ್ನೈ ಹಾಗೂ ಕೇರಳಕ್ಕೆ ಶಿಫ್ಟ್ ಮಾಡ್ತಿದ್ರಂತೆ

ಇನ್ನು ಮೊಬೈಲ್ ಗಳ ಮಾರಾಟದಿಂದ ಬಂದ ಹಣವನ್ನ ಎರಡು ಬ್ಯಾಂಕ್ ಖಾತೆಗಳಲ್ಲಿ ನಿರ್ವಹಣೆ ಮಾಡುತ್ತಿದ್ದು, ಹಣ ಯಾವ ಉದ್ದೇಶಕ್ಕಾಗಿ ಬಳಕೆ‌ಮಾಡ್ತಿದ್ರು ಅನ್ನೋ‌ ಶಂಕೆ ವ್ಯಕ್ತವಾಗಿದೆ . ಸದ್ಯ ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ವಿವಿಧ ಬ್ರ್ಯಾಂಡ್ ನ 1037 ಫೋನ್ ಗಳನ್ನ ವಶಪಡಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು ಮೊಬೈಲ್ ಕಳವು ಪ್ರಕರಣಗಳ ಹಿಂದೆ ಇನ್ಯಾರ್ಯಾರು ಇದ್ದಾರೆ ಅನ್ನೋದನ್ನ ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!