ಮರಗಳಿಗೆ ಮೊಳೆ ಹೊಡೆಯುತ್ತಿದ್ದರೂ ಕುರುಡಾಗಿರುವ ಬಿಬಿಎಂಪಿ, ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!

Nailing trees in BBMP parks: ಪಾರ್ಕ್ ನಲ್ಲಿರೋ ಮರಗಳ ಅಲಂಕಾರಕ್ಕೆ ಅಂತಾ ಪ್ರತಿ ಮರದಲ್ಲೂ 100 ವೋಲ್ಟ್ ಸಾಮರ್ಥ್ಯದ ವಿದ್ಯುತ್ ದೀಪ (BBMP Lighting) ಅಳವಡಿಸಲಾಗಿದೆ. ವಿದ್ಯುತ್ ದೀಪ ಹಾಗೂ ಜಂಕ್ಷನ್ ಬಾಕ್ಸ್ ಹಾಕಲು ಮರಗಳಿಗೆ ಮೊಳೆ ಹೊಡೆದಿದ್ದು, ಗುತ್ತಿಗೆದಾರರ ಯಡವಟ್ಟಿನಿಂದ ಮರಗಳ ಮೇಲೆ ಪರಿಣಾಮ ಬೀರ್ತಿದೆ.

ಮರಗಳಿಗೆ ಮೊಳೆ ಹೊಡೆಯುತ್ತಿದ್ದರೂ ಕುರುಡಾಗಿರುವ ಬಿಬಿಎಂಪಿ, ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!
ಬಿಬಿಎಂಪಿ ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!
Follow us
|

Updated on: May 18, 2024 | 11:08 AM

ರಾಜ್ಯ ರಾಜಧಾನಿ ಬೆಂಗಳೂರಿನ ಅಂದವನ್ನು ಹೆಚ್ಚಿಸೋ ಮರಗಳಿಗೆ ಇದೀಗ ಪಾಲಿಕೆಯಿಂದಲೇ ಕುತ್ತು ಬಂದಿದೆ ಅನ್ನೋ ಆರೋಪ ದೃಶ್ಯಾಂತವಾಗಿ ಕಾಣಿಬರುತ್ತಿದೆ. ಮರಗಳಿಗೆ ಮೊಳೆ ಹೊಡೆಯಬಾರದು ಅಂತಾ ರೂಲ್ಸ್ ಮಾಡಿದ್ದ ಪಾಲಿಕೆಯೇ ಇದೀಗ ತಮ್ಮ ವ್ಯಾಪ್ತಿಯ ಪಾರ್ಕ್ ನಲ್ಲಿ ನೂರಾರು ಮರಗಳಿಗೆ ಮೊಳೆ ಹೊಡೆದಿದ್ದರೂ ಸೈಲೆಂಟ್ ಆಗಿರೋದಕ್ಕೆ ಪರಿಸರಪ್ರೇಮಿಗಳು ಕಿಡಿಕಾರುತ್ತಿದ್ದಾರೆ. ವೃಕ್ಷೋ ರಕ್ಷತಿ ರಕ್ಷಿತಃ ಅಂತಾ ಪಾಠ ಹೇಳೋ ಪಾಲಿಕೆ ಬೆಂಗಳೂರಿನ ಹಲವೆಡೆ ಪಾರ್ಕ್ ಗಳ ನಿರ್ಮಾಣದ ಮೂಲಕ ಮರ ಬೆಳಸಿ ಅನ್ನೋ ಸಂದೇಶ ನೀಡ್ತಿದೆ. ಬೆಂಗಳೂರಿನ ರಸ್ತೆ ಬದಿಯಲ್ಲಿರೋ ಮರಗಳಿಗೆ ಜಾಹೀರಾತು ಫಲಕ ಅಥವಾ ಬೇರೆ ಉದ್ದೇಶಕ್ಕೆ ಮೊಳೆ ಹೊಡೆಯಬಾರದು ಅಂತಾ ರೂಲ್ಸ್ ಕೂಡ ಮಾಡಿದೆ. ಆದ್ರೆ ಇದೀಗ ಗಿರಿನಗರದಲ್ಲಿರೋ ರಾಮಕೃಷ್ಣ ಉದ್ಯಾನವನ ಅಂತಾ ಕರೆಯಲ್ಪಡುವ ವಿವೇಕಾನಂದ ಪಾರ್ಕ್ ನಲ್ಲಿ ವಿದ್ಯುತ್ ದೀಪ ಹಾಕೋಕೆ ನೂರಾರು ಮರಗಳಿಗೆ ಮೊಳೆ ಹೊಡೆದಿದ್ದು ಪರಿಸರ ಪ್ರೇಮಿಗಳನ್ನ ಕೆರಳಿಸಿದೆ (Nailing trees in BBMP parks).

ಪಾರ್ಕ್ ನಲ್ಲಿರೋ ಮರಗಳ ಅಲಂಕಾರಕ್ಕೆ ಅಂತಾ ಪ್ರತಿ ಮರದಲ್ಲೂ 100 ವೋಲ್ಟ್ ಸಾಮರ್ಥ್ಯದ ವಿದ್ಯುತ್ ದೀಪ (BBMP Lighting) ಅಳವಡಿಸಲಾಗಿದೆ. ವಿದ್ಯುತ್ ದೀಪ ಹಾಗೂ ಜಂಕ್ಷನ್ ಬಾಕ್ಸ್ ಹಾಕಲು ಮರಗಳಿಗೆ ಮೊಳೆ ಹೊಡೆದಿದ್ದು, ಗುತ್ತಿಗೆದಾರರ ಯಡವಟ್ಟಿನಿಂದ ಮರಗಳ ಮೇಲೆ ಪರಿಣಾಮ ಬೀರ್ತಿದೆ. ಮೊಳೆಯಿಂದ ಮರಗಳಿಗೆ ಸೋಂಕು ತಗುಲೋದಲ್ಲದೇ, ಪಕ್ಷಿಗಳಿಗೂ ಎಫೆಕ್ಟ್ ತಟ್ಟುತ್ತೆ ಅಂತಿರೋ ಪರಿಸರ ಪ್ರೇಮಿಗಳು ಇದನ್ನ ಕೂಡಲೇ ತೆರವು ಮಾಡಲು ಆಗ್ರಹ ಮಾಡ್ತಿದ್ದಾರೆ.

ಇತ್ತ ಮರಗಳಿಗೆ ಮೊಳೆ ಹೊಡೆಬಾರದು ಅಂತಾ ರೂಲ್ಸ್ ಮಾಡಿರೋ ಪಾಲಿಕೆಯ ಅರಣ್ಯಾಧಿಕಾರಿಗಳು, ಪಾರ್ಕ್ ನಲ್ಲಿ ಮರಗಳಿಗೆ ಮೊಳೆ ಹೊಡೆದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಅಲ್ಲದೇ ಯಾರೇ ಮರಗಳಿಗೆ ಹಾನಿ ಮಾಡಿದರೂ ಕ್ರಮ ತೆಗೆದುಕೊಳ್ತೀವಿ ಅಂತಾ ಜಿ.ಎಲ್.ಜಿ. ಸ್ವಾಮಿ, ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಆಟೋ ಡ್ರೈವರುಗಳದ್ದೇ ಹವಾ! ಮಹಿಳಾ ಆಟೋ ಪ್ರಯಾಣಿಕರೂ ನಿರಾಳ

ಒಟ್ಟಿನಲ್ಲಿ ಗ್ರೀನ್ ಸಿಟಿ ಬೆಂಗಳೂರಿನ ಜನರಿಗೆ ಉಸಿರು ನೀಡ್ತಿರೋ ಮರಗಳಿಗೆ ಕೇಡು ಮಾಡುವವರ ಮೇಲೆ ಕ್ರಮ ಆಗಬೇಕಿದೆ. ಕಾಂಕ್ರೀಟ್ ಕಾಡಿನಲ್ಲಿ ಅಳಿದುಳಿದ ಮರಗಳನ್ನ ರಕ್ಷಿಸಲು ಪಾಲಿಕೆ ಜೊತೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ. ಸದ್ಯ ಮರಗಳಿಗೆ ಹೊಡೆದಿರೋ ಮೊಳೆಗಳ ತೆರವಿನ ಭರವಸೆ ನೀಡಿರೋ ಪಾಲಿಕೆ, ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

(ವರದಿ: ಶಾಂತಮೂರ್ತಿ, ಟಿವಿ9, ಬೆಂಗಳೂರು)

ತಾಜಾ ಸುದ್ದಿ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ