AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಗಳಿಗೆ ಮೊಳೆ ಹೊಡೆಯುತ್ತಿದ್ದರೂ ಕುರುಡಾಗಿರುವ ಬಿಬಿಎಂಪಿ, ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!

Nailing trees in BBMP parks: ಪಾರ್ಕ್ ನಲ್ಲಿರೋ ಮರಗಳ ಅಲಂಕಾರಕ್ಕೆ ಅಂತಾ ಪ್ರತಿ ಮರದಲ್ಲೂ 100 ವೋಲ್ಟ್ ಸಾಮರ್ಥ್ಯದ ವಿದ್ಯುತ್ ದೀಪ (BBMP Lighting) ಅಳವಡಿಸಲಾಗಿದೆ. ವಿದ್ಯುತ್ ದೀಪ ಹಾಗೂ ಜಂಕ್ಷನ್ ಬಾಕ್ಸ್ ಹಾಕಲು ಮರಗಳಿಗೆ ಮೊಳೆ ಹೊಡೆದಿದ್ದು, ಗುತ್ತಿಗೆದಾರರ ಯಡವಟ್ಟಿನಿಂದ ಮರಗಳ ಮೇಲೆ ಪರಿಣಾಮ ಬೀರ್ತಿದೆ.

ಮರಗಳಿಗೆ ಮೊಳೆ ಹೊಡೆಯುತ್ತಿದ್ದರೂ ಕುರುಡಾಗಿರುವ ಬಿಬಿಎಂಪಿ, ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!
ಬಿಬಿಎಂಪಿ ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!
ಸಾಧು ಶ್ರೀನಾಥ್​
|

Updated on: May 18, 2024 | 11:08 AM

Share

ರಾಜ್ಯ ರಾಜಧಾನಿ ಬೆಂಗಳೂರಿನ ಅಂದವನ್ನು ಹೆಚ್ಚಿಸೋ ಮರಗಳಿಗೆ ಇದೀಗ ಪಾಲಿಕೆಯಿಂದಲೇ ಕುತ್ತು ಬಂದಿದೆ ಅನ್ನೋ ಆರೋಪ ದೃಶ್ಯಾಂತವಾಗಿ ಕಾಣಿಬರುತ್ತಿದೆ. ಮರಗಳಿಗೆ ಮೊಳೆ ಹೊಡೆಯಬಾರದು ಅಂತಾ ರೂಲ್ಸ್ ಮಾಡಿದ್ದ ಪಾಲಿಕೆಯೇ ಇದೀಗ ತಮ್ಮ ವ್ಯಾಪ್ತಿಯ ಪಾರ್ಕ್ ನಲ್ಲಿ ನೂರಾರು ಮರಗಳಿಗೆ ಮೊಳೆ ಹೊಡೆದಿದ್ದರೂ ಸೈಲೆಂಟ್ ಆಗಿರೋದಕ್ಕೆ ಪರಿಸರಪ್ರೇಮಿಗಳು ಕಿಡಿಕಾರುತ್ತಿದ್ದಾರೆ. ವೃಕ್ಷೋ ರಕ್ಷತಿ ರಕ್ಷಿತಃ ಅಂತಾ ಪಾಠ ಹೇಳೋ ಪಾಲಿಕೆ ಬೆಂಗಳೂರಿನ ಹಲವೆಡೆ ಪಾರ್ಕ್ ಗಳ ನಿರ್ಮಾಣದ ಮೂಲಕ ಮರ ಬೆಳಸಿ ಅನ್ನೋ ಸಂದೇಶ ನೀಡ್ತಿದೆ. ಬೆಂಗಳೂರಿನ ರಸ್ತೆ ಬದಿಯಲ್ಲಿರೋ ಮರಗಳಿಗೆ ಜಾಹೀರಾತು ಫಲಕ ಅಥವಾ ಬೇರೆ ಉದ್ದೇಶಕ್ಕೆ ಮೊಳೆ ಹೊಡೆಯಬಾರದು ಅಂತಾ ರೂಲ್ಸ್ ಕೂಡ ಮಾಡಿದೆ. ಆದ್ರೆ ಇದೀಗ ಗಿರಿನಗರದಲ್ಲಿರೋ ರಾಮಕೃಷ್ಣ ಉದ್ಯಾನವನ ಅಂತಾ ಕರೆಯಲ್ಪಡುವ ವಿವೇಕಾನಂದ ಪಾರ್ಕ್ ನಲ್ಲಿ ವಿದ್ಯುತ್ ದೀಪ ಹಾಕೋಕೆ ನೂರಾರು ಮರಗಳಿಗೆ ಮೊಳೆ ಹೊಡೆದಿದ್ದು ಪರಿಸರ ಪ್ರೇಮಿಗಳನ್ನ ಕೆರಳಿಸಿದೆ (Nailing trees in BBMP parks).

ಪಾರ್ಕ್ ನಲ್ಲಿರೋ ಮರಗಳ ಅಲಂಕಾರಕ್ಕೆ ಅಂತಾ ಪ್ರತಿ ಮರದಲ್ಲೂ 100 ವೋಲ್ಟ್ ಸಾಮರ್ಥ್ಯದ ವಿದ್ಯುತ್ ದೀಪ (BBMP Lighting) ಅಳವಡಿಸಲಾಗಿದೆ. ವಿದ್ಯುತ್ ದೀಪ ಹಾಗೂ ಜಂಕ್ಷನ್ ಬಾಕ್ಸ್ ಹಾಕಲು ಮರಗಳಿಗೆ ಮೊಳೆ ಹೊಡೆದಿದ್ದು, ಗುತ್ತಿಗೆದಾರರ ಯಡವಟ್ಟಿನಿಂದ ಮರಗಳ ಮೇಲೆ ಪರಿಣಾಮ ಬೀರ್ತಿದೆ. ಮೊಳೆಯಿಂದ ಮರಗಳಿಗೆ ಸೋಂಕು ತಗುಲೋದಲ್ಲದೇ, ಪಕ್ಷಿಗಳಿಗೂ ಎಫೆಕ್ಟ್ ತಟ್ಟುತ್ತೆ ಅಂತಿರೋ ಪರಿಸರ ಪ್ರೇಮಿಗಳು ಇದನ್ನ ಕೂಡಲೇ ತೆರವು ಮಾಡಲು ಆಗ್ರಹ ಮಾಡ್ತಿದ್ದಾರೆ.

ಇತ್ತ ಮರಗಳಿಗೆ ಮೊಳೆ ಹೊಡೆಬಾರದು ಅಂತಾ ರೂಲ್ಸ್ ಮಾಡಿರೋ ಪಾಲಿಕೆಯ ಅರಣ್ಯಾಧಿಕಾರಿಗಳು, ಪಾರ್ಕ್ ನಲ್ಲಿ ಮರಗಳಿಗೆ ಮೊಳೆ ಹೊಡೆದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಅಲ್ಲದೇ ಯಾರೇ ಮರಗಳಿಗೆ ಹಾನಿ ಮಾಡಿದರೂ ಕ್ರಮ ತೆಗೆದುಕೊಳ್ತೀವಿ ಅಂತಾ ಜಿ.ಎಲ್.ಜಿ. ಸ್ವಾಮಿ, ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಆಟೋ ಡ್ರೈವರುಗಳದ್ದೇ ಹವಾ! ಮಹಿಳಾ ಆಟೋ ಪ್ರಯಾಣಿಕರೂ ನಿರಾಳ

ಒಟ್ಟಿನಲ್ಲಿ ಗ್ರೀನ್ ಸಿಟಿ ಬೆಂಗಳೂರಿನ ಜನರಿಗೆ ಉಸಿರು ನೀಡ್ತಿರೋ ಮರಗಳಿಗೆ ಕೇಡು ಮಾಡುವವರ ಮೇಲೆ ಕ್ರಮ ಆಗಬೇಕಿದೆ. ಕಾಂಕ್ರೀಟ್ ಕಾಡಿನಲ್ಲಿ ಅಳಿದುಳಿದ ಮರಗಳನ್ನ ರಕ್ಷಿಸಲು ಪಾಲಿಕೆ ಜೊತೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ. ಸದ್ಯ ಮರಗಳಿಗೆ ಹೊಡೆದಿರೋ ಮೊಳೆಗಳ ತೆರವಿನ ಭರವಸೆ ನೀಡಿರೋ ಪಾಲಿಕೆ, ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

(ವರದಿ: ಶಾಂತಮೂರ್ತಿ, ಟಿವಿ9, ಬೆಂಗಳೂರು)

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?