ಬೆಂಗಳೂರು ಮಡ್​ಪೈಪ್ ರೆಸ್ಟೋರೆಂಟ್ ಅಗ್ನಿ ಅವಘಡಕ್ಕೆ ಕಾರಣವೇನು? ಬೆಂಕಿ ಹೊತ್ತಿಕೊಂಡ 15 ನಿಮಿಷದಲ್ಲಿ ಆಗಿದ್ದೇನು? ಇಲ್ಲಿದೆ ವಿವರ

ಬೆಂಗಳೂರಿನ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್​ಪೈಪ್​ನ ಆರನೇ ಮಹಡಿಯಲ್ಲಿ ಬುಧವಾರ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಮಹಡಿಯಿಂದ ಪ್ರೇಮ್ ಸಿಂಗ್ ಜಿಗಿಯಲು ಕಾರಣವೇನು? ಬೆಂಕಿ ಬಿದ್ದ ತಕ್ಷಣ ಅಲ್ಲಿಂದ ಪರಾರಿಯಾಗಲು ಜಾಗ ಇರಲಿಲ್ಲವೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ಬೆಂಗಳೂರು ಮಡ್​ಪೈಪ್ ರೆಸ್ಟೋರೆಂಟ್ ಅಗ್ನಿ ಅವಘಡಕ್ಕೆ ಕಾರಣವೇನು? ಬೆಂಕಿ ಹೊತ್ತಿಕೊಂಡ 15 ನಿಮಿಷದಲ್ಲಿ ಆಗಿದ್ದೇನು? ಇಲ್ಲಿದೆ ವಿವರ
ಬೆಂಗಳೂರು ಅಗ್ನಿ ಅವಘಡ
Follow us
| Updated By: ವಿವೇಕ ಬಿರಾದಾರ

Updated on: Oct 19, 2023 | 9:20 AM

ಬೆಂಗಳೂರು ಅ.​​​19: ಬುಧವಾರ ಕೊರಮಂಗಲದ (Kormangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್​ಪೈಪ್ ಆರನೇ ಮಹಡಿಯಲ್ಲಿ 8 ರಿಂದ10 ಸಿಲಿಂಡರ್​ಗಳು ಸ್ಫೋಟಗೊಂಡು ಅಗ್ನಿ ಅವಘಡ (Fire Accident) ಸಂಭವಿಸಿತ್ತು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಸಿಂಗ್​ ಎಂಬುವರು ಆರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಬಲಗೈ ಮೂಳೆ ಮುರಿದಿದೆ. ಅಷ್ಟಕ್ಕೂ ಆರನೇ ಮಹಡಿಯಿಂದ ಪ್ರೇಮ್ ಸಿಂಗ್ ಜಿಗಿಯಲು ಕಾರಣ ಏನು? ಬೆಂಕಿ ಬಿದ್ದ ತಕ್ಷಣ ಅಲ್ಲಿಂದ ಪರಾರಿಯಾಗಲು ಜಾಗ ಇರಲಿಲ್ಲವೇ ? ಆರನೇ ಮಹಡಿಯ ರೆಸ್ಟೋರೆಂಟ್​ನಲ್ಲಿ ಸುರಕ್ಷಿತ ಕ್ರಮಗಳು ಇರಲಿಲ್ಲವೇ ? ಬೆಂಕಿ ಬಿದ್ದ ಬಳಿಕ ನಡೆದ ಆ 15 ನಿಮಿಷದಲ್ಲಿ ಆಗಿದ್ದೇನು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಆರನೇ ಮಹಡಿಯ ಮಡ್​ಪೈಪ್ ರೆಸ್ಟೋರೆಂಟ್​ನ ರೂಫ್ ಟಾಪ್​ನಲ್ಲಿ ರಾತ್ರಿಯ ವೀವ್​ ಅನುಭವಿಸುತ್ತಾ ಊಟ ಮಾಡುವ ರೀತಿ 12 ಟೇಬಲ್​ಗಳನ್ನು ಬುಧವಾರ ಮಧ್ಯಾಹ್ನ ತಯಾರಿಸಲಾಗುತ್ತಿತ್ತು. ಕಳೆದ ಒಂದು ವಾರದಿಂದ ರೂಫ್ ಟಾಪ್​​ನಲ್ಲೇ ಅಡುಗೆ ಮಾಡುತ್ತಾ ಇದ್ದರು. ಹೀಗಾಗಿ ಆರು ಸಿಲಿಂಡರ್​ಗಳನ್ನು ರೂಫ್​ ಟಾಪ್​ನಲ್ಲಿ ಇಡಲಾಗಿತ್ತು. ಇದೇ ರೂಫ್​ಟಾಪ್​ನ ಅಡುಗೆ ಮನೆ ಬಳಿ ಪ್ರೇಮ್ ಸಿಂಗ್ ಇದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಅಗ್ನಿ ದುರಂತ: ಅಪಾರ್ಟ್ಮೆಂಟ್, ಅಂಗಡಿ, ಹೋಟೆಲ್, ರೆಸ್ಟೋರೆಂಟ್​ಗಳನ್ನು ಪರಿಶೀಲಿಸುವಂತೆ ಸೂಚನೆ

ಮಧ್ಯಾಹ್ನ 12 ಗಂಟೆ ಮಡ್​ಪೈಪ್ ರೆಸ್ಟೋರೆಂಟ್​​ನ ಅಡುಗೆ ಮನೆಯಲ್ಲಿ ನಾಲ್ಕು ಜನ ಸಿಬ್ಬಂದಿಗಳು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಲಿಂಡರ್ ಸೋರಿಕೆಯಾಗಿದೆ. ಇದನ್ನು ತಿಳಿಯದ ಸಿಬ್ಬಂದಿ ಲೈಟ್ ಹಾಕಿದಾಗ ಬೆಂಕಿ ಹತ್ತಿಕೊಂಡಿದೆ. ಕೂಡಲೆ ಸಿಬ್ಬಂದಿ ಅಲ್ಲಿಂದ ಓಡುತ್ತಾ ಕೆಳಗಡೆ ಬಂದಿದ್ದಾರೆ. ಆದರೆ ರೂಫ್​ ಟಾಪ್​ನ ಕಿಚನ್ ಬಳಿ ಇದ್ದ ಪ್ರೇಮ್ ಸಿಂಗ್​ಗೆ ಕೆಳಗೆ ಬರಲು ಆಗಲಿಲ್ಲ. ಈ ವೇಳೆ ಬೆಂಕಿಯ ಜ್ವಾಲೆ ಇಡೀ ಮಹಡಿಯನ್ನು ಆವರಿಸಿಕೊಂಡಿದೆ.

ಬೆಂಕಿ ರೂಫ್​ ಟಾಪ್​​ಗೂ ಆವರಿಸಿಕೊಂಡು ಸಿಲಿಂಡರ್ ಸ್ಪೋಟಗೊಳ್ಳುತ್ತದೆ ಎಂದು ತಪ್ಪಿಸಿಕೊಳ್ಳಲು ಸುಮಾರು 15 ನಿಮಿಷಗಳ ಕಾಲ ರೂಪ್ ಟಾಪ್​ನ ಎಲ್ಲ ಕಡೆ ಓಡಾಡಿದ್ದಾನೆ. ಆದರೆ ತಪ್ಪಿಸಿಕೊಳ್ಳಲು ಜಾಗ ಸಿಗಲಿಲ್ಲ. ಕೊನೆಗೆ ಭಯದಿಂದ ಪ್ರೇಮ್ ಸಿಂಗ್ ಮೇಲಿಂದ ಜಿಗಿದಿದ್ದಾನೆ. ಸದ್ಯ ಪ್ರೇಮ್​ ಸಿಂಗ್ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುದ್ದುಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ರೆಸ್ಟೋರೆಂಟ್ ಮಾಲೀಕ ಕರಣ್ ಜೈನ್ ವಿರುದ್ಧ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ