ಬೆಂಗಳೂರು: ಒಂಟಿತನ ಕಾಡುತ್ತಿದೆ ಎಂದು ಆಸ್ಪತ್ರೆಯಿಂದ ಮಗು ಕಳ್ಳತನ, 600 ಸಿಸಿಟಿವಿ ಪರಿಶೀಲನೆ ಬಳಿಕ ಸಿಕ್ಕ ಕಳ್ಳಿ

ವಾಣಿ ವಿಲಾಸ ಆಸ್ಪತ್ರೆಯಿಂದ ಒಂದು ವಾರದ ಮಗುವನ್ನು ಕಿಡ್ನಾಪ್ ಮಾಡಿದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಆಕೆಯ ಸುಳಿವು ಸಿಕ್ಕಿದ್ದೇ ರೋಚಕ.

ಬೆಂಗಳೂರು: ಒಂಟಿತನ ಕಾಡುತ್ತಿದೆ ಎಂದು ಆಸ್ಪತ್ರೆಯಿಂದ ಮಗು ಕಳ್ಳತನ, 600 ಸಿಸಿಟಿವಿ ಪರಿಶೀಲನೆ ಬಳಿಕ ಸಿಕ್ಕ ಕಳ್ಳಿ
ಆರೋಪಿ ಮಹಿಳೆ ದಿವ್ಯ ರಶ್ಮಿ ಸಿಸಿಟಿವಿ ದೃಶ್ಯಗಳು
Follow us
|

Updated on:Apr 19, 2023 | 10:46 AM

ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ(Vani Vilas Hospital) ಒಂದು ವಾರದ ಮಗು ಕಿಡ್ನಾಪ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ ಎರಡು ದಿನಗಳ ಬಳಿಕ ಕಿಡ್ನಾಪ್(Kidnap) ಮಾಡಿದ್ದ ಮಹಿಳೆಯನ್ನು ವಿವಿಪುರಂ ಪೊಲೀಸರು(V V Puram Police) ಬಂಧಿಸಿದ್ದಾರೆ. ದಿವ್ಯ ರಶ್ಮಿ ಬಂಧಿತ ಆರೋಪಿ. ವಿವಿಪುರಂ ಪೊಲೀಸರು ಆರೋಪಿ ದಿವ್ಯ ರಶ್ಮಿಯನ್ನು ರಾಮನಗರದಲ್ಲಿ ಅರೆಸ್ಟ್ ಮಾಡಿದ್ದಾರೆ.

ಕಿಡ್ನಾಪ್ ಆಗಿದ್ದ ಮಗು ಸಿಕ್ಕಿದ್ದೇ ರೋಚಕ ಕಥೆ

ಒಂದು ವಾರದ ಮಗು ಕಿಡ್ನಾಪ್ ಆದ ಬಳಿಕ ಮಗು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಬಳಿಕ ವಾಣಿ ವಿಲಾಸ ಆಸ್ಪತ್ರೆ, ಮೈಸೂರು ರಸ್ತೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗಿತ್ತು. ದಾರಿಯುದ್ದಕ್ಕೂ 600 ಸಿಸಿಟಿವಿಗಳನ್ನ ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಒಂದು ಕ್ಲೂ ಸಿಕ್ತು. ಆರೋಪಿ ಮಹಿಳೆ ಆಸ್ಪತ್ರೆಗೆ ಬಂದು ಮಗುವನ್ನು ಕದ್ದು ಆಕೆ ತನ್ನ ಮನೆಗೆ ತೆಗೆದುಕೊಂಡು ಹೋಗುವವರೆಗಿನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 600 ಸಿಸಿ ಕ್ಯಾಮರಾಗಳ ಪರಿಶೀಲನೆ ಬಳಿಕ ಕಿಡ್ನಾಪ್ ಆಗಿದ್ದ ಮಗುವಿನ ಸುಳಿವು ಸಿಕ್ಕಿದೆ.

ಒಂಟಿತನ ಕಾಡುತ್ತಿತ್ತು ಅಂತ ಮಗುವನ್ನು ಕಿಡ್ನಾಪ್ ಮಾಡಿದ್ದ ಮಹಿಳೆ

ದಿವ್ಯಾ ರಶ್ಮಿಗೆ ಮದುವೆಯಾಗಿದ್ದು ಗಂಡ ಕೆಲ ವರ್ಷಗಳ ಬಳಿಕ ಸಾವನ್ನಪ್ಪಿದ್ದ. ಮಕ್ಕಳಿಲ್ಲದ ಕಾರಣ ರಶ್ಮಿಗೆ ಯಾವಾಗಲೂ ಒಂಟಿತನ ಕಾಡ್ತಾ ಇತ್ತು. ಬೇರೆ ಮದುವೆ ಆಗಲು ಮನಸ್ಸು ಒಪ್ಪಲಿಲ್ಲ ಅಂತ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಳು. ಆಗಷ್ಟೇ ಹುಟ್ಟಿದ ಮಗು ಆದ್ರೆ ನಾನೇ ಸಾಕಬಹುದು, ನಂದೇ‌ ಮಗು ಎಂಬಂತೆ ಆಗುತ್ತೆ ಎಂದು ನಿರ್ಧರಿಸಿ ಏಪ್ರಿಲ್ 15ರಂದು ವಾಣಿ ವಿಲಾಸ ಆಸ್ಪತ್ರೆಗೆ ಬಂದು ಎಲ್ಲಾ ವಾರ್ಡ್​ಗಳನ್ನು ಸುತ್ತಾಡಿದಳು. ಬಳಿಕ ವಾರ್ಡ್​ನಲ್ಲಿದ್ದ ಮಗು ನೋಡಿ ಕಿಡ್ನಾಪ್ ಮಾಡಿದ್ದಳು. ತಾಯಿ ಮಗುವನ್ನು ಬಿಟ್ಟು ವಾಶ್ ರೂಂಗೆ ಹೋಗಿದ್ದಾಗ ಆರೋಪಿ ರಶ್ಮಿ ಮಗು ಕದ್ದು ಎಸ್ಕೇಪ್ ಆಗಿದ್ದಳು. ಸದ್ಯ ವಿವಿಪುರಂ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:46 am, Wed, 19 April 23