AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್; ಕಳ್ಳಾಟ ಆಡುವ ಸವಾರರ ಬೆನ್ನಿಗೆ ಬಿದ್ದ ಬೆಂಗಳೂರು ಸಂಚಾರಿ ಪೊಲೀಸರು

ಗಾಡಿಯ ನಂಬರ್ ಪ್ಲೇಟ್​ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಲಾಕ್ ಮಾಡ್ತಾರೆ. ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ನಂಬರ್ ಬದಲಾಯಿಸಿಕೊಂಡು ಓಡಾಡುವ ಸವಾರರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಾರೆ.

ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್; ಕಳ್ಳಾಟ ಆಡುವ ಸವಾರರ ಬೆನ್ನಿಗೆ ಬಿದ್ದ ಬೆಂಗಳೂರು ಸಂಚಾರಿ ಪೊಲೀಸರು
ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್
TV9 Web
| Edited By: |

Updated on:Dec 25, 2022 | 11:42 AM

Share

ಬೆಂಗಳೂರು: ರಸ್ತೆ ಬದಿ ಬೈಕ್​ ಪಾರ್ಕ್​ ಮಾಡುವ ಸಿಲಿಕಾನ್ ಸಿಟಿ ಮಂದಿ ಇನ್ನುಮುಂದೆ ಸ್ವಲ್ಪ ಎಚ್ಚರದಿಂದಿರಿ. ನಿಮ್ಮ ವಾಹನಗಳ ನಂಬರ್ ಪ್ಲೇಟ್​ ಸರಿಯಾಗಿ ಇಲ್ಲದಿದ್ದರೆ ಈ ಕೂಡಲೇ ಸರಿ ಮಾಡಿಸಿಕೊಳ್ಳಿ. ಏಕೆಂದರೆ ಬೆಂಗಳೂರು ಪೊಲೀಸರು ನಿಮ್ಮ ವಾಹನಗಳ ನಂಬರ್ ಪ್ಲೇಟ್​ಗಳ ಮೇಲೆ ಕಣ್ಣಿಟ್ಟಿದ್ದಾರೆ. ದೋಷಪೂರಿತ ನಂಬರ್ ಪ್ಲೇಟ್​ ಕಂಡು ಬಂದರೆ ನಿಮ್ಮ ವಾಹನಗಳ ವ್ಹೀಲ್ ಲಾಕ್ ಮಾಡಿ ಹೋಗ್ತಾರೆ.

ಗಾಡಿಯ ನಂಬರ್ ಪ್ಲೇಟ್​ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಲಾಕ್ ಮಾಡ್ತಾರೆ. ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ನಂಬರ್ ಬದಲಾಯಿಸಿಕೊಂಡು ಓಡಾಡುವ ಸವಾರರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಾರೆ. ನಗರದಲ್ಲಿ ದೋಷಪೂರಿತ ನಂಬರ್ ಪ್ಲೇಟ್​ಗಳ ಗಾಡಿಗಳು ಹೆಚ್ಚಾಗಿವೆ. ಕೆಲ ಕ್ರಿಮಿನಲ್​ಗಳು ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಗಾಡಿ ಬಳಸುತ್ತಿದ್ದಾರೆ. ಫೇಕ್ ನಂಬರ್ ಪ್ಲೇಟ್, ದೋಷಪೂರಿತ ನಂಬರ್ ಪ್ಲೇಟ್ ಬಳಸಿ ವಾಹನ ಓಡಿಸುತ್ತಿದ್ದಾರೆ. ಮತ್ತೊಂದೆಡೆ ಯುವಕರು ಸ್ಟೈಲಿಷ್ ಆಗಿ ನಂಬರ್ ಪ್ಲೇಟ್ ಹಾಕಿಸಿಕೊಳ್ತಿದ್ದಾರೆ. ನಂಬರ್ ಸ್ಟೈಲಿಷ್, ಎಕ್ಸ್‌ಟ್ರಾ ಸ್ಟಿಕ್ಕರ್ ಹಾಕಿಸಿ ವಾಹನ ಬಳಕೆ ಮಾಡುತ್ತಿರುವ ಬಗ್ಗೆ ಸಂಚಾರಿ ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿ ಮಾಡೋರ ಮೇಲೆ ಸಂಚಾರಿ ಪೊಲೀಸರು ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಪೊಲೀಸರ ಕಾರ್ಯಕ್ಕೂ ನೀಡಬಹುದು ಸ್ಟಾರ್​​ ರೇಟಿಂಗ್​; ಬೆಂಗಳೂರು ಪೊಲೀಸ್ ಠಾಣೆ ಮುಂದೆ ಇರಲಿದೆ ಕ್ಯೂ ಆರ್ ಕೋಡ್ ಬೋರ್ಡ್

ಒಮ್ಮೆ ಗಾಡಿ ಲಾಕ್​ ಆದ್ರೆ ಕೋರ್ಟ್​ನಲ್ಲೇ ಪಡೀಬೇಕು

ಈಗಾಗಲೇ ಕೆಲಸ ಶುರು ಮಾಡಿರೋ ಪಶ್ಚಿಮ‌ ವಿಭಾಗದ ಸಂಚಾರಿ ಪೊಲೀಸರು ಒಮ್ಮೆ ಗಾಡಿ ಲಾಕ್ ಮಾಡಿದ್ರೆ ಅದನ್ನು ಕೋರ್ಟ್ ನಲ್ಲಿಯೇ ಇತ್ಯಾರ್ಥ ಮಾಡಿ ದಂಡ ಕಟ್ಟಿ ಗಾಡಿ ಪಡೀಬೇಕು. ಯಾಕೆ ಆ ರೀತಿ ಸ್ಟಿಕ್ಕರ್ ಹಾಕಿಸಿದ್ದು, ದೋಷಪೂರಿತ ಪ್ಲೇಟ್ ಯಾಕೆ? ಈ ಎಲ್ಲಾ ಉತ್ತರದ ಜೊತೆಗೆ ಪಕ್ಕಾ ಡಾಕ್ಯುಮೆಂಟ್, ಲೈಸೆನ್ಸ್ ತೋರಿಸಿ ಗಾಡಿ ಹಿಂಪಡೆಯಬಹುದು. ಸದ್ಯ ದೋಷಪೂರಿತ ನಂಬರ್ ಪ್ಲೇಟ್ ಬಳಸೋ ವಾಹನ ಸವಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:42 am, Sun, 25 December 22

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ