AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್; ಕಳ್ಳಾಟ ಆಡುವ ಸವಾರರ ಬೆನ್ನಿಗೆ ಬಿದ್ದ ಬೆಂಗಳೂರು ಸಂಚಾರಿ ಪೊಲೀಸರು

ಗಾಡಿಯ ನಂಬರ್ ಪ್ಲೇಟ್​ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಲಾಕ್ ಮಾಡ್ತಾರೆ. ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ನಂಬರ್ ಬದಲಾಯಿಸಿಕೊಂಡು ಓಡಾಡುವ ಸವಾರರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಾರೆ.

ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್; ಕಳ್ಳಾಟ ಆಡುವ ಸವಾರರ ಬೆನ್ನಿಗೆ ಬಿದ್ದ ಬೆಂಗಳೂರು ಸಂಚಾರಿ ಪೊಲೀಸರು
ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್
TV9 Web
| Edited By: |

Updated on:Dec 25, 2022 | 11:42 AM

Share

ಬೆಂಗಳೂರು: ರಸ್ತೆ ಬದಿ ಬೈಕ್​ ಪಾರ್ಕ್​ ಮಾಡುವ ಸಿಲಿಕಾನ್ ಸಿಟಿ ಮಂದಿ ಇನ್ನುಮುಂದೆ ಸ್ವಲ್ಪ ಎಚ್ಚರದಿಂದಿರಿ. ನಿಮ್ಮ ವಾಹನಗಳ ನಂಬರ್ ಪ್ಲೇಟ್​ ಸರಿಯಾಗಿ ಇಲ್ಲದಿದ್ದರೆ ಈ ಕೂಡಲೇ ಸರಿ ಮಾಡಿಸಿಕೊಳ್ಳಿ. ಏಕೆಂದರೆ ಬೆಂಗಳೂರು ಪೊಲೀಸರು ನಿಮ್ಮ ವಾಹನಗಳ ನಂಬರ್ ಪ್ಲೇಟ್​ಗಳ ಮೇಲೆ ಕಣ್ಣಿಟ್ಟಿದ್ದಾರೆ. ದೋಷಪೂರಿತ ನಂಬರ್ ಪ್ಲೇಟ್​ ಕಂಡು ಬಂದರೆ ನಿಮ್ಮ ವಾಹನಗಳ ವ್ಹೀಲ್ ಲಾಕ್ ಮಾಡಿ ಹೋಗ್ತಾರೆ.

ಗಾಡಿಯ ನಂಬರ್ ಪ್ಲೇಟ್​ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಲಾಕ್ ಮಾಡ್ತಾರೆ. ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ನಂಬರ್ ಬದಲಾಯಿಸಿಕೊಂಡು ಓಡಾಡುವ ಸವಾರರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಾರೆ. ನಗರದಲ್ಲಿ ದೋಷಪೂರಿತ ನಂಬರ್ ಪ್ಲೇಟ್​ಗಳ ಗಾಡಿಗಳು ಹೆಚ್ಚಾಗಿವೆ. ಕೆಲ ಕ್ರಿಮಿನಲ್​ಗಳು ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಗಾಡಿ ಬಳಸುತ್ತಿದ್ದಾರೆ. ಫೇಕ್ ನಂಬರ್ ಪ್ಲೇಟ್, ದೋಷಪೂರಿತ ನಂಬರ್ ಪ್ಲೇಟ್ ಬಳಸಿ ವಾಹನ ಓಡಿಸುತ್ತಿದ್ದಾರೆ. ಮತ್ತೊಂದೆಡೆ ಯುವಕರು ಸ್ಟೈಲಿಷ್ ಆಗಿ ನಂಬರ್ ಪ್ಲೇಟ್ ಹಾಕಿಸಿಕೊಳ್ತಿದ್ದಾರೆ. ನಂಬರ್ ಸ್ಟೈಲಿಷ್, ಎಕ್ಸ್‌ಟ್ರಾ ಸ್ಟಿಕ್ಕರ್ ಹಾಕಿಸಿ ವಾಹನ ಬಳಕೆ ಮಾಡುತ್ತಿರುವ ಬಗ್ಗೆ ಸಂಚಾರಿ ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿ ಮಾಡೋರ ಮೇಲೆ ಸಂಚಾರಿ ಪೊಲೀಸರು ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಪೊಲೀಸರ ಕಾರ್ಯಕ್ಕೂ ನೀಡಬಹುದು ಸ್ಟಾರ್​​ ರೇಟಿಂಗ್​; ಬೆಂಗಳೂರು ಪೊಲೀಸ್ ಠಾಣೆ ಮುಂದೆ ಇರಲಿದೆ ಕ್ಯೂ ಆರ್ ಕೋಡ್ ಬೋರ್ಡ್

ಒಮ್ಮೆ ಗಾಡಿ ಲಾಕ್​ ಆದ್ರೆ ಕೋರ್ಟ್​ನಲ್ಲೇ ಪಡೀಬೇಕು

ಈಗಾಗಲೇ ಕೆಲಸ ಶುರು ಮಾಡಿರೋ ಪಶ್ಚಿಮ‌ ವಿಭಾಗದ ಸಂಚಾರಿ ಪೊಲೀಸರು ಒಮ್ಮೆ ಗಾಡಿ ಲಾಕ್ ಮಾಡಿದ್ರೆ ಅದನ್ನು ಕೋರ್ಟ್ ನಲ್ಲಿಯೇ ಇತ್ಯಾರ್ಥ ಮಾಡಿ ದಂಡ ಕಟ್ಟಿ ಗಾಡಿ ಪಡೀಬೇಕು. ಯಾಕೆ ಆ ರೀತಿ ಸ್ಟಿಕ್ಕರ್ ಹಾಕಿಸಿದ್ದು, ದೋಷಪೂರಿತ ಪ್ಲೇಟ್ ಯಾಕೆ? ಈ ಎಲ್ಲಾ ಉತ್ತರದ ಜೊತೆಗೆ ಪಕ್ಕಾ ಡಾಕ್ಯುಮೆಂಟ್, ಲೈಸೆನ್ಸ್ ತೋರಿಸಿ ಗಾಡಿ ಹಿಂಪಡೆಯಬಹುದು. ಸದ್ಯ ದೋಷಪೂರಿತ ನಂಬರ್ ಪ್ಲೇಟ್ ಬಳಸೋ ವಾಹನ ಸವಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:42 am, Sun, 25 December 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು