AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 4 ಎಮ್ಮೆ ಸಾವು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 4 ಎಮ್ಮೆಗಳು ಪ್ರಾಣ ಕಳೆದುಕೊಂಡಿವೆ. ಕುಂಬೇನ ಅಗ್ರಹಾರ ಬಳಿ 12KV ವಿದ್ಯುತ್ ವಯರ್ ಮುರಿದು ಬಿದ್ದಿತ್ತು. ವಿದ್ಯುತ್ ತಂತಿ ದುರಸ್ತಿಗೆ ಬೆಸ್ಕಾಂ ಸಿಬ್ಬಂದಿ ಉದಾಸೀ‌ನ ತೋರಿದ್ದಾರೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 4 ಎಮ್ಮೆ ಸಾವು
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 4 ಎಮ್ಮೆ ಸಾವು
TV9 Web
| Updated By: ಆಯೇಷಾ ಬಾನು|

Updated on: Aug 27, 2021 | 10:58 AM

Share

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ(BESCOM) ನಿರ್ಲಕ್ಷ್ಯದಿಂದ ಎಮ್ಮೆಗಳು ಮೃತಪಟ್ಟ ಅಮಾನವೀಯ ಘಟನೆ ನಡೆದಿದೆ. ಬೆಂಗಳೂರಿನ ಕುಂಬೇನ ಅಗ್ರಹಾರ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 4 ಎಮ್ಮೆಗಳು ಸಾವನ್ನಪ್ಪಿವೆ.

ಎಂದಿನಂತೆ ಬೆಳಗಾಗೆದ್ದು ಎಮ್ಮೆ ಮೇಯಿಸಲು ಯುವಕ ತನ್ನ ಎಮ್ಮೆಗಳನ್ನು ಕರೆದುಕೊಂಡು ಕುಂಬೇನ ಅಗ್ರಹಾರ ಬಳಿ ಹೋಗಿದ್ದಾನೆ. ಆದ್ರೆ ಅಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಗಮನಿಸದೆ ಎಮ್ಮೆಗಳನ್ನು ಮೇಯಲು ಬಿಟ್ಟಿದ್ದಾನೆ. ವಿದ್ಯುತ್ ತಂತಿ ಸ್ಪರ್ಶಿಸಿ 4 ಎಮ್ಮೆಗಳು ಸಾವನ್ನಪ್ಪಿವೆ. ಅದೃಷ್ಟವಶಾತ್ ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ಯುವಕ ತಂತಿ ನೋಡಿ ಹಿಂದೆ ಸರಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 4 ಎಮ್ಮೆಗಳು ಪ್ರಾಣ ಕಳೆದುಕೊಂಡಿವೆ. ಕುಂಬೇನ ಅಗ್ರಹಾರ ಬಳಿ 12KV ವಿದ್ಯುತ್ ವಯರ್ ಮುರಿದು ಬಿದ್ದಿತ್ತು. ವಿದ್ಯುತ್ ತಂತಿ ದುರಸ್ತಿಗೆ ಬೆಸ್ಕಾಂ ಸಿಬ್ಬಂದಿ ಉದಾಸೀ‌ನ ತೋರಿದ್ದಾರೆ. ಹುಲ್ಲು‌ ಮೇಯಲು ಹೋಗಿದ್ದ ನಾಲ್ಕು ಎಮ್ಮೆ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ತಿಂಗಳಿಗೆ 20,401 ರೂಪಾಯಿ ವಿದ್ಯುತ್​ ಬಿಲ್​; ತುಮಕೂರಿನ ವ್ಯಕ್ತಿಗೆ ಬಿಲ್​ ಮೂಲಕವೇ ಶಾಕ್​ ಕೊಟ್ಟ ಬೆಸ್ಕಾಂ

Viral Video: ಕೋಯಿ ಲಡ್ಕೀ ಹೈ ಹಾಡಿಗೆ 63 ವರ್ಷದ ಅಜ್ಜಿಯ ಸಕತ್ ಸ್ಟೆಪ್; ವಿಡಿಯೋ ನೋಡಿ