AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್​​: ಇಲ್ಲಿದೆ ಮಾಹಿತಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಒತ್ತಾಯದ ಮೇರೆಗೆ ಎರಡು ಹೊಸ ಬಸ್ ಮಾರ್ಗಗಳಲ್ಲಿ ಬಸ್​ ಓಡಿಸಲು ಮುಂದಾಗಿದೆ.

ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್​​: ಇಲ್ಲಿದೆ ಮಾಹಿತಿ
ಬಿಎಂಟಿಸಿ
ವಿವೇಕ ಬಿರಾದಾರ
|

Updated on: Jul 18, 2023 | 3:24 PM

Share

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ (Shakti Yojana) ಜಾರಿಯಾದಾಗಿನಿಂದ ಸರ್ಕಾರಿ ಬಸ್‌ಗಳಲ್ಲಿ (Government Bus) ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಹೆಚ್ಚಿನ ಬಸ್‌ಗಳನ್ನು ರಸ್ತೆಗೆ ಇಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಪ್ರಯಾಣಿಕರ ಒತ್ತಾಯದ ಮೇರೆಗೆ ಎರಡು ಹೊಸ ಬಸ್ ಮಾರ್ಗಗಳಲ್ಲಿ ಬಸ್​ ಓಡಿಸಲು ಮುಂದಾಗಿದೆ. ಹೌದು ಮೊದಲ ಮಾರ್ಗವು ಶಿವಾಜಿನಗರದಿಂದ ಯಲಹಂಕ ಸ್ಯಾಟಲೈಟ್ ಟೌನ್‌ಗೆ ಮತ್ತು ಎರಡನೇ ಮಾರ್ಗವು ಶಿವಾಜಿನಗರದಿಂದ ಬ್ಯಾಟರಾಯನಪುರಕ್ಕೆ ಸಂಪರ್ಕ ಕಲ್ಪಿಸಲಿದೆ. ಶಿವಾಜಿನಗರದಿಂದ ಈ ಎರಡು ಮಾರ್ಗಗಳಲ್ಲಿ ನಾನ್ ಎಸಿ ಬಸ್ಸುಗಳು ಮಾತ್ರ ಸಂಚರಿಸುತ್ತವೆ.

ಬಿಎಂಟಿಸಿ ಬಸ್ ಸಂಖ್ಯೆ 290-EB ಶಿವಾಜಿನಗರ ಬಸ್ ನಿಲ್ದಾಣದಿಂದ ಹೊರಟು ಯಲಹಂಕ ಸ್ಯಾಟಲೈಟ್ ಟೌನ್ ತಲುಪಲಿದೆ. ಟ್ಯಾನರಿ ರಸ್ತೆ, ನಾಗವಾರ, ಆರ್‌ಕೆ ಹೆಗಡೆ ನಗರ, ಚೊಕ್ಕನಹಳ್ಳಿ, ಅಗ್ರಹಾರ ಲೇಔಟ್ ಮತ್ತು ಕೋಗಿಲು ಕ್ರಾಸ್‌ನಲ್ಲಿಯೂ ಬಸ್ ನಿಲುಗಡೆಯಾಗಲಿದೆ.

ಬಸ್ ಸಂಖ್ಯೆ 290-EB ಶಿವಾಜಿನಗರದಿಂದ 9:35, 1:05, 5:00 ಗಂಟೆಗೆ ಹೊರಡಲಿದೆ. ಮತ್ತು ಯಲಹಂಕ ಸ್ಯಾಟಲೈಟ್ ಟೌನ್​ನಿಂದ 8:20, 11:35, 3:30ಕ್ಕೆ ಹೊರಡಲಿದೆ.

ಇದನ್ನೂ ಓದಿ: BMTC: ವ್ಹೀಲ್​ಚೇರ್ ಬಳಸುವ ವಿಶೇಷ ಚೇತನರಿಗೂ ಬಿಎಮ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ಅವಕಾಶ?

ಶಿವಾಜಿನಗರ ಬಸ್ ನಿಲ್ದಾಣದಿಂದ ಬ್ಯಾಟರಾಯನಪುರಕ್ಕೆ ಹೋಗುವ ಎರಡನೇ ಮಾರ್ಗದಲ್ಲಿ ಸಾಗುವ ಎರಡು ಬಸ್‌ಗಳಿಗೆ ಬಸ್ ಸಂಖ್ಯೆ 290-S. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಟ್ಯಾನರಿ ರಸ್ತೆ, ನಾಗವಾರ, ಥಣಿಸಂದ್ರ, ಮೇಸ್ತ್ರಿ ಪಾಳ್ಯ, ಶ್ರೀರಾಂಪುರ ಮತ್ತು ಜಕ್ಕೂರು ಲೇಔಟ್‌ನಲ್ಲಿಯೂ ನಿಲುಗಡೆಯಾಗಲಿವೆ.

ಈ ಮಾರ್ಗದ ಬಸ್‌ಗಳು ಶಿವಾಜಿನಗರದಿಂದ 5:45, 6:50, 8:05, 9:20, 11:00, 4:05, 5:25, 7:00, 7:55, 9:30 ಗಂಟೆಗೆ ಮತ್ತು ಬ್ಯಾಟರಾಯನಪುರದಿಂದ 5:45, 6:50, 8:05, 9:20, 11:00, 4:10, 5:45, 6:40, 8:15, 9:10 ನಿಮಿಷಕ್ಕೆ ಹೊರಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್