ಬೆಂಗಳೂರು ಏಪ್ರಿಲ್ 20: ರೌಡಿಶೀಟರ್ ಜೊತೆ ಲಿಂಕ್ ಹೊಂದಿದ್ದ ಅಪರಾಧ ಕೇಂದ್ರ ವಿಭಾಗ (CCB)ಯ ರೌಡಿ ನಿಗ್ರಹದಳದ ಇನ್ಸ್ಪೆಕ್ಟರ್ (Inspector) ಜ್ಯೋತಿರ್ಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಪ್ರತಿ ವಿಭಾಗದ ನಟೋರಿಯಸ್ ರೌಡಿಗಳ ಮಾಹಿತಿ ಕಲೆ ಹಾಕಿ, ವರದಿ ನೀಡುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು.
ಹಾಗೆ ಅಧಿಕಾರಿಗಳು ರೌಡಿಶೀಟರ್ ಕಾಡುಬೀಸನಹಳ್ಳಿ ರೋಹಿತ್ ಚಲನವನ ಬಗ್ಗೆ ವರದಿ ಕೇಳಿದ್ದರು.
ಆದರೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಅವರು ರೌಡಿಶೀಟರ್ ರೋಹಿತ್ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದೆ, ವರದಿ ನೀಡಿರಲಿಲ್ಲ. ಹೀಗಾಗಿ ಸಿಸಿಬಿ ಅಧಿಕಾರಿಗಳು ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ವಿರುದ್ಧ ಪೊಲೀಸ್ ಆಯುಕ್ತ ವರದಿ ನೀಡುತ್ತಾರೆ. ವರದಿ ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸುತ್ತಾರೆ.
ಜೈಲಿನಲ್ಲಿ ಇದ್ದುಕೊಂಡೇ ಕುಖ್ಯಾತ ರೌಡಿಶೀಟರ್ ಕುಣಿಗಲ್ ಗಿರಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ. ಸಿಲಿಂಡರ್ ಸುನೀಲ, ಅವಿನಾಶ್ ಬಂಧಿತ ಆರೋಪಿಗಳು. ಸೂರಿ ಕೊಲೆ ಪ್ರಕರಣದಲ್ಲಿ ರಾಬರಿ ಕಿಟ್ಟಿ ಕ್ಯಾಪ್ಟರ್ ಜೈಲಿನಲ್ಲಿದ್ದಾನೆ. ಜೈಲಿನಲ್ಲಿರುವ ರಾಬರಿ ಕಿಟ್ಟಿ, ಕಾಮಾಕ್ಷಿಪಾಳ್ಯದ ರೌಡಿಶೀಟರ್ ಆಗಿರುವ ಕುಣಿಗಲ್ ಗಿರಿ ಕೊಲೆಗೆ ಸಂಚು ರೂಪಿಸಿದ್ದನು.
ಇದನ್ನೂ ಓದಿ: CCB Raid: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ
ಕುಣಿಗಲ್ ಗಿರಿಯನ್ನು ಕೊಲೆ ಮಾಡಲು ರಾಬರಿ ಕಿಟ್ಟಿ ಶಿಷ್ಯನಾದ ಸಿಲಿಂಡರ್ ಸುನೀಲನಿಗೆ ಸುಪಾರಿ ನೀಡಿದ್ದನು. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಸುನೀಲ ಅಡ್ಡೆ ಮೇಲೆ ದಾಳಿ ಮಾಡಿ ಸಿಲಿಂಡರ್ ಸುನೀಲ ಮತ್ತು ಈತನ ಸಹಚರ ಅವಿನಾಶ್ನನ್ನು ಬಂಧಿಸಿದ್ದಾರೆ. ಸಿಲಿಂಡರ್ ಸುನೀಲ ಕೆಂಗೇರಿ ಪೊಲೀಸ್ ಠಾಣೆ ವ್ಯಪ್ತಿಯ ರೌಡಿಶೀಟರ್ ಆಗಿದ್ದಾನೆ.
ದಾಳಿ ವೇಳೆ ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ