AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಕೇಪ್ ಕಾರ್ತಿಕ್ ಸಹವಾಸದಿಂದ ಬೈಕ್ ಕಳ್ಳತನದಿಂದ ಮನೆಗಳ್ಳತನಕ್ಕೆ ಅಪ್ಡೇಟ್ ಆದ ಕಳ್ಳನ ಬಂಧನ

ಜೈಲಿನಲ್ಲಿದ್ದಾಗ ಎಸ್ಕೇಪ್ ಕಾರ್ತಿಕ್ ಪರಿಚಯವಾಗಿದ್ದ. ಬಿಡುಗಡೆ ಬಳಿಕ ಜೊತೆಯಾಗಿ ತುಮಕೂರಿನಲ್ಲಿ ಇಬ್ಬರು ಸೇರಿ ಮನೆಗಳ್ಳತನ ಮಾಡಿದ್ದಾರೆ. ಬಂದ ಚಿನ್ನದಲ್ಲಿ ಸಮವಾಗಿ ಹಂಚಿಕೊಂಡು ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ.

ಎಸ್ಕೇಪ್ ಕಾರ್ತಿಕ್ ಸಹವಾಸದಿಂದ ಬೈಕ್ ಕಳ್ಳತನದಿಂದ ಮನೆಗಳ್ಳತನಕ್ಕೆ ಅಪ್ಡೇಟ್ ಆದ ಕಳ್ಳನ ಬಂಧನ
ಆರೋಪಿ ರಘು ಬಂಧಿಸಿ ೧೩೦ ಗ್ರಾಂಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 30, 2022 | 9:01 AM

Share

ಬೆಂಗಳೂರು: ಕುಖ್ಯಾತ ಕಳ್ಳರಿಬ್ಬರು ಮನೆಗಳ್ಳತನ ಮಾಡಿ, 300 ಗ್ರಾಂ ಕ್ಕೂ ಅಧಿಕ ಚಿನ್ನಾಭರಣಗಳನ್ನು ಕದ್ದು ಪರಿಯಾಗಿರುವಂತಹ ಘಟನೆ ನಡೆದಿದೆ. ಎಸ್ಕೇಪ್ ಕಾರ್ತಿಕ್, ಪೆಪ್ಸಿ ರಘು ಬಂಧಿತರು. 14ಕ್ಕೂ ಅಧಿಕ ಬೈಕ್ ಕಳ್ಳತನ ಕೇಸ್ ರಘು ಹೊಂದಿದ್ದ. ಕಳೆದ ವರ್ಷ ತಲಘಟ್ಟಪುರ ಪೊಲೀಸರಿಂದಲೇ ಬಂಧಿಸಲ್ಪಟ್ಟಿದ್ದ. ನಂತರ ಜೈಲಿನಲ್ಲಿದ್ದಾಗ ಎಸ್ಕೇಪ್ ಕಾರ್ತಿಕ್ ಪರಿಚಯವಾಗಿದ್ದ. ಬಿಡುಗಡೆ ಬಳಿಕ ಜೊತೆಯಾಗಿ ತುಮಕೂರಿನಲ್ಲಿ ಇಬ್ಬರು ಸೇರಿ ಮನೆಗಳ್ಳತನ ಮಾಡಿದ್ದಾರೆ. ಬಂದ ಚಿನ್ನದಲ್ಲಿ ಸಮವಾಗಿ ಹಂಚಿಕೊಂಡು ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ. ಆದರೇ ಬೆಂಗಳೂರು ಪೊಲೀಸರ ಪರಿಶೀಲನೆ ವೇಳೆ ರಘು ಸಿಕ್ಕಿ ಬಿದಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಿಂದ ಕಾರ್ತಿಕ್ ಎಸ್ಕೇಪ್ ಆದ ಕುಖ್ಯಾತ ಹೊಂದಿದ್ದ. ಸದ್ಯ ರಘು ಬಳಿಕ ಎಸ್ಕೇಪ್ ಆದ ಕಾರ್ತಿಕ್​ಗಾಗಿ ಶೋಧ ನಡೆಸಲಾಗುತ್ತಿದೆ. ತಪಾಸಣೆ ವೇಳೆ ತಲಘಟ್ಟಪುರ ಪೊಲೀಸರಿಗೆ ರಘು ಅಲಿಯಾಸ್ ಪೆಪ್ಸಿ ಸಿಕ್ಕಿ ಬಿದಿದ್ದಾನೆ. ಸದ್ಯ ಆರೋಪಿ ರಘು ಬಂಧಿಸಿ 130 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲಘಟ್ಟಪುರ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.

ಕುಳ್ಳರಿಜ್ವಾನ್ ಸಹಚರ ಸಾಗರ್ ಗೂಂಡಾ ಕಾಯ್ದೆ ಅಡಿ ಬಂಧನ 

ಬೆಂಗಳೂರು: ಕುಳ್ಳರಿಜ್ವಾನ್ ಸಹಚರ ಸಾಗರ್ ಗೂಂಡಾ ಕಾಯ್ದೆ ಅಡಿ ಬಂಧನ ಮಾಡಲಾಗಿದೆ. ಕಾಮಾಕ್ಷಿ ಪಾಳ್ಯದ ಸಾಗರ್ ಎಲ್ ಅಲಿಯಾಸ್ ವೀರು ಬಂಧಿತ ಆರೋಪಿ. 4 ಕೊಲೆಯತ್ನ ಸೇರಿದಂತೆ 8ಕ್ಕೂ ಅಧಿಕ ಪ್ರಕರಣ ಹೊಂದಿದ್ದು, ಬೆಂಗಳೂರಿನ ದಕ್ಷಿ ವಿಭಾಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದ. ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿ ಬಂಧನ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ.

ಬ್ರೂಟಲ್ ಮರ್ಡರ್​ಗೆ ಸಾಕ್ಷಿಯಾದ ಸಕ್ಕರೆ ನಗರಿ ಮಂಡ್ಯ

ಮಂಡ್ಯ: ಎಣ್ಣೆ ಏಟಲ್ಲಿ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ. ಧನುಷ್ ಮೃತ ವ್ಯಕ್ತಿ. ಡಾಬಾದಲ್ಲಿ ಕುಡಿಯಲು ಕುಳಿತಿದ್ದ ಎರೆಡು ಗುಂಪುಗಳ ನಡುವೆ ಕಿರಿಕ್ ಉಂಟಾಗಿದೆ. ಗುರಾಯಿಸಿದ ಅನ್ನೋ ಕಾರಣಕ್ಕೆ ಎರೆಡು ಗುಂಪುಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ವೇಳೆ ಅಲ್ಲೆ ಇದ್ದ ಚಾಕು ಹಾಗೂ ಡ್ಯಾಗರ್​ನಿಂದ ದಾಳಿ ಮಾಡಲಾಗಿದೆ. ಸ್ದಳಕ್ಕೆ ಪಾಂಡವಪುರ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಮತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪಾಂಡವಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?