AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಶಂಕರ್​​ಗೆ ಕಾಲ್​ಗರ್ಲ್ಸ್, ವೇಶ್ಯೆಯರ ಸಹವಾಸ ಇತ್ತು; ಶಂಕರ್ ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದ: ಪುತ್ರನ ವರಸೆ

ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಧುಸಾಗರ್, ದೂರಿನ ಪ್ರತಿಗಳನ್ನು ಜೆರಾಕ್ಸ್ ಮಾಡಿ ಹಂಚಿದ್ದನಂತೆ. ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಂದೆಯ ಬಗ್ಗೆ ಮಗ ಆರೋಪಗಳ ಸುರಿ ಮಳೆಯಲ್ಲೇ ಮಾಡಿದ್ದ.

ಅಪ್ಪ ಶಂಕರ್​​ಗೆ ಕಾಲ್​ಗರ್ಲ್ಸ್, ವೇಶ್ಯೆಯರ ಸಹವಾಸ ಇತ್ತು; ಶಂಕರ್ ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದ: ಪುತ್ರನ ವರಸೆ
ಆತ್ಮಹತ್ಯಗೆ ಶರಣಾಗಿರುವ ಶಂಕರ್ ಕುಟುಂಬ
TV9 Web
| Updated By: ಆಯೇಷಾ ಬಾನು|

Updated on:Sep 20, 2021 | 9:57 AM

Share

ಬೆಂಗಳೂರು: ನಗರದ ಬಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಕುತೂಹಲಕಾರಿ ಸಂಗತಿ ಹೊರ ಬಿದ್ದಿದೆ. ನಿನ್ನೆ ಸಿಕ್ಕ ಮೃತರ ಡೆತ್ನೋಟ್ನಲ್ಲಿ ತಂದೆ ವಿರುದ್ಧವೇ ಆರೋಪಿಸಿ ಆತ್ಮಹತ್ಯೆಗೆ ಅವರೇ ಕಾರಣ ಎಂದು ಮಕ್ಕಳು ತಮ್ಮ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು. ಈಗ ಮತ್ತೊಂದು ಕಡೆ ಮೃತ ಮಧು ಆತ್ಮಹತ್ಯೆಗೂ ಕೆಲ ದಿನಗಳ ಹಿಂದೆ ತಂದೆ ಶಂಕರ್ ವಿರುದ್ಧ ದೂರು ನೀಡಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಶಂಕರ್ ಪುತ್ರ ಮಧುಸಾಗರ್ ತಂದೆ ವಿರುದ್ಧ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದನಂತೆ.

ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಧುಸಾಗರ್, ದೂರಿನ ಪ್ರತಿಗಳನ್ನು ಜೆರಾಕ್ಸ್ ಮಾಡಿ ಹಂಚಿದ್ದನಂತೆ. ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಂದೆಯ ಬಗ್ಗೆ ಮಗ ಆರೋಪಗಳ ಸುರಿ ಮಳೆಯಲ್ಲೇ ಮಾಡಿದ್ದ. ಮಹಿಳಾಪೀಡಕ, ಸೈಕೋಪಾಥ್ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದನಂತೆ. ಶಂಕರ್ ಸಮಾಜದಲ್ಲಿ ‘ಪ್ರತಿಷ್ಠೆ’ಗಾಗಿ ಏನು ಬೇಕಾದರೂ ಮಾಡಬಲ್ಲರು. ನನ್ನ ತಾಯಿಗೆ ಹಲವು ವರ್ಷಗಳಿಂದ ಕಿರುಕುಳ ಕೊಟ್ಟಿದ್ದಾನೆ. ಶಂಕರ್‌ನದ್ದು ದುರ್ವರ್ತನೆಯಿಂದ ಕೂಡಿದ ಜೀವನವಾಗಿತ್ತು. ಶಂಕರ್ ಹೊರ ಜಗತ್ತಿಗೆ ‘ಮುಖವಾಡ’ ಹಾಕಿ ಬದುಕುತ್ತಿದ್ದ. ಅಪ್ಪ ಶಂಕರ್ ತುಂಬಾ ಸ್ವಾರ್ಥಿ ಅಂತಾ ಮಧುಸಾಗರ್ ದೂರಿನಲ್ಲಿ ಉಲ್ಲೇಖಿಸಿದ್ದ.

ಅಪ್ಪ ಶಂಕರ್ಗೆ ಅನೈತಿಕ ಸಂಬಂಧ ಇತ್ತು ಅಂತಾ ಮಗ ಮಧುಸಾಗರ್ ಆರೋಪ ಮಾಡಿದ್ದ. ಶಂಕರ್ಗೆ ಕಾಲ್ಗರ್ಲ್ಸ್, ವೇಶ್ಯೆಯರ ಸಹವಾಸ ಇತ್ತು. ‘ರಾಜಾಜಿನಗರದ ಕಚೇರಿಯಲ್ಲೇ ಅನೈತಿಕ ಚಟುವಟಿಕೆ’ ನಡೆಸುತ್ತಿದ್ದರು ಎಂದು ದೂರಿನ ಪ್ರತಿಯಲ್ಲಿ 3-4 ಮಹಿಳೆಯರ ಹೆಸರು ಕೂಡ ಉಲ್ಲೇಖ ಮಾಡಿದ್ದ. ಹಾಗೂ ಈನ ಆರೋಪಗಳಿಗೆ ವಾಟ್ಸಾಪ್ ಸ್ಕ್ರೀನ್ ಶಾಟ್ ಸಾಕ್ಷಿ ಇದೆಯೆಂದು ದೂರಿನಲ್ಲಿ ಮಧು ಉಲ್ಲೇಖಿಸಿದ್ದಾನೆ. ಐವರು ಮಹಿಳೆಯರ ಜೊತೆ ಅಪ್ಪನಿಗೆ ಅಕ್ರಮ ಸಂಬಂಧ ಇದೆ. ಅಪ್ಪ ಶಂಕರ್ ಕಾಮುಕ ಅನ್ನೋದು ಅಮ್ಮನಿಗೆ ಗೊತ್ತಿತ್ತು. ನನ್ನ ಅಮ್ಮನನ್ನ ಕೆಲಸದವರಂತೆ ಅಪ್ಪ ನೋಡಿಕೊಂಡಿದ್ದಾನೆ. ಅಮ್ಮನ ವಿರುದ್ಧ ಸೇಡು ತೀರಿಸಿಕೊಳ್ತಿದ್ದ ಅಪ್ಪ ಎಂದು ದೂರಿನಲ್ಲಿ ಮೃತ ಮಧು ಉಲ್ಲೇಖಿಸಿ ಈ ಹಿಂದೆಯೇ ತಂದೆಯ ವಿರುದ್ಧ ದೂರು ನೀಡಿದ್ದ.

ಇದನ್ನೂ ಓದಿ: ಒಂದೇ ಕುಟುಂಬದ ಐವರ ಸಾವು ಪ್ರಕರಣ; ಅಪ್ಪನ ವಿರುದ್ಧ ಆರೋಪಿಸಿ ಡೆತ್​ನೋಟ್ ಬರೆದ ಶಂಕರ್ ಮಕ್ಕಳು, ಏನಿದೆ ಅದರಲ್ಲಿ?

Published On - 9:54 am, Mon, 20 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ