AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಂದ ಅಧಿಕ ವಿದ್ಯುತ್​ ಬಿಲ್​ ವಸೂಲಿ, ಆದ್ರೆ ಸರ್ಕಾರಿ ಇಲಾಖೆ-ಸಂಸ್ಥೆಗಳ ಸಾವಿರಾರು ಕೋಟಿ ಬಿಲ್​​ ಬಾಕಿ, ಮೌನವಹಿಸಿದ ಸರ್ಕಾರ

ಎಸ್ಕಾಂ ಅಧಿಕಾರಿಗಳು ಜನರಿಗೊಂದು, ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೊಂದು ನಿಯಮ ಮಾಡಲು ಹೊರಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಎಸ್ಕಾಂಗಳಿಗೆ ಕಟ್ಟಬೇಕಾದ ಕೋಟಿ ಕೋಟಿ ಬಿಲ್​​ ಅನ್ನು ಬಾಕಿ ಉಳಿಸಿಕೊಂಡರೂ, ಅಧಿಕಾರಿಗಳು ಮಾತ್ರ ಧ್ವನಿ ಎತ್ತದೆ ಶಾಂತರೂಪಿಗಳಾಗಿದ್ದಾರೆ.

ಜನರಿಂದ ಅಧಿಕ ವಿದ್ಯುತ್​ ಬಿಲ್​ ವಸೂಲಿ, ಆದ್ರೆ ಸರ್ಕಾರಿ ಇಲಾಖೆ-ಸಂಸ್ಥೆಗಳ ಸಾವಿರಾರು ಕೋಟಿ ಬಿಲ್​​ ಬಾಕಿ, ಮೌನವಹಿಸಿದ ಸರ್ಕಾರ
ಕೆಪಿಟಿಸಿಎಲ್​​​​
ವಿವೇಕ ಬಿರಾದಾರ
|

Updated on:Jun 12, 2023 | 12:08 PM

Share

ಬೆಂಗಳೂರು: ಗೃಹ ಜ್ಯೋತಿ (Gruha Jyoti) ಯೋಜನೆ ಅಡಿ ರಾಜ್ಯ ಸರ್ಕಾರ 200 ಯುನಿಟ್​​ವರೆಗು ಪ್ರತಿ ಮನೆಗೆ ಉಚಿತ ವಿದ್ಯುತ್​​ (Free Electricity) ಅಂತ ಘೋಷಿಸಿದೆ. ಆದರೆ ಇದಕ್ಕೂ ಮುನ್ನ ಜನರು ಏರಿಕೆಯಾದ ವಿದ್ಯುತ್​ ಬಿಲ್ (Electricity Bill)​​ ದರದಿಂದ ಪರದಾಡುತ್ತಿದ್ದಾರೆ. ಈ ಬಿಲ್​​​ ಗ್ರಾಹಕರು ಕಡ್ಡಾಯವಾಗಿ ಕಟ್ಟಬೇಕಾಗಿದ್ದು, ಇಲ್ಲವಾದಲ್ಲಿ 200 ಯುನಿಟ್​ ಉಚಿತ ವಿದ್ಯುತ್​ ಸಿಗುವುದಿಲ್ಲ ಎಂದು ಎಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಎಸ್ಕಾಂ ಅಧಿಕಾರಿಗಳು ಜನರಿಗೊಂದು, ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೊಂದು ನಿಯಮ ಮಾಡಲು ಹೊರಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಎಸ್ಕಾಂಗಳಿಗೆ ಕಟ್ಟಬೇಕಾದ ಕೋಟಿ ಕೋಟಿ ಬಿಲ್​​ ಅನ್ನು ಬಾಕಿ ಉಳಿಸಿಕೊಂಡರೂ, ಅಧಿಕಾರಿಗಳು ಮಾತ್ರ ಧ್ವನಿ ಎತ್ತದೆ ಶಾಂತರೂಪಿಗಳಾಗಿದ್ದಾರೆ.

ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಕರೆಂಟ್ ಬಳಸಿ ಬೆಸ್ಕಾಂಗೆ ಬಿಲ್‌ಕಟ್ಟದೆ ನಿರ್ಲಕ್ಷ್ಯ ವಹಿಸಿದ್ದು, ವಿವಿಧ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೆ 5 ಸಾವಿರ ಕೋಟಿಗೂ ಹೆಚ್ಚು ಬಿಲ್ ಬಾಕಿ ಇದೆ. ಪ್ರತಿ ವರ್ಷ ಕರೆಂಟ್ ಬಿಲ್ ಬಾಕಿ ಹೆಚ್ಚುತ್ತಲೇ ಇದ್ದು, ಜೊತೆಗೆ ಬಡ್ಡಿಯೂ ಏರುತ್ತಿದೆ. ಆದರೂ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಬಿಲ್ ಕಟ್ಟಲು ಮೀನಾಮೇಷ ಎಣಿಸುತ್ತಿವೆ.

ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಬಗ್ಗೆ ಟೀಕೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸ್ಪಷ್ಟನೆ

ಕಳೆದ ವರ್ಷ ಮಾರ್ಚ್ ತಿಂಗಳಿಂದ 2023ವರೆಗೆ ಬರಬೇಕಾದ ಬಿಲ್ ಬಾಕಿ ಇದ್ದು, ಇದೀಗ ಗೃಹಜ್ಯೋತಿ ಉಚಿತ ವಿದ್ಯುತ್​ ಹಿನ್ನೆಲೆ ಬಾಕಿ ಉಳಿಸಿಕೊಂಡ ಬಿಲ್​​ಗಳನ್ನು ಕ್ಲಿಯರ್ ಮಾಡುವಂತೆ ಬೆಸ್ಕಾಂ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೆ ನೋಟೀಸ್ ನೀಡಿದೆ.

ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಂದ ಬರಬೇಕಾದ ಬಾಕಿ

  1. BBMP (ವಾರ್ಡ್​​ಗಳ ಬೀದಿ ದೀಪಗಳು) – 640 ಕೋಟಿ
  2. BBMP (ಬೀದಿ ದೀಪ) – 52.56 ಕೋಟಿ
  3. BWSSB ಬೋರ್ ವೆಲ್ – 468.25 ಕೋಟಿ
  4. ನೀರಾವರಿ ಇಲಾಖೆ – 46.91 ಕೋಟಿ
  5. ಸ್ಲಮ್ ಬೋರ್ಡ್ – 16.69 ಕೋಟಿ
  6. ಪವರ್ ಲೂಮ್ ಕಚೇರಿ – 4.52 ಕೋಟಿ
  7. ಸ್ಥಳೀಯ ಗ್ರಾಮೀಣ ಸಂಸ್ಥೆಗಳು – 3,785.87 ಕೋಟಿ
  8. ಸ್ಥಳೀಯ ನಗರ ಸಂಸ್ಥೆಗಳು – 113.16 ಕೋಟಿ
  9. ಇತರೆ ಸರ್ಕಾರಿ ಇಲಾಖೆ ಕಚೇರಿ – 43.49 ಕೋಟಿ
  10. ಕೇಂದ್ರ ಸರ್ಕಾರ – 33.02 ಕೋಟಿ

ಒಟ್ಟು 5,246.64 ಕೋಟಿ ಬಾಕಿ ಇದೆ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Mon, 12 June 23

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?