AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಾರ್ಕ್​ಗಳಿಗೆ ಸಾಕು ನಾಯಿ ಕೊಂಡೊಯ್ಯುವವರು ಇದನ್ನು ಗಮನಿಸಿ; ತೋಟಗಾರಿಕೆ ಇಲಾಖೆಯಿಂದ ಕೆಲ ನಿಯಮಗಳು ಜಾರಿ

ಮಾಲೀಕರು ಪಾರ್ಕ್​ಗಳಿಗೆ ನಾಯಿಗಳನ್ನ ಕರೆತರುವಾಗ 6 ಅಡಿ ಉದ್ದದ ಸರಪಳಿ ಹಾಕಿರಬೇಕು. ನಾಯಿಗಳನ್ನ ಕೈಯಲ್ಲಿ ಹಿಡಿದುಕೊಂಡು ನಿಯಂತ್ರಿಸಬೇಕು. ತಮ್ಮ ನಾಯಿಗೆ ರೇಬಿಸ್ ಚುಚ್ಚು ಮದ್ದು ಹಾಕಿರುವ ಬಗ್ಗೆ ದಾಖಲೆ ತೋರಿಸಬೇಕು.

ಬೆಂಗಳೂರಿನಲ್ಲಿ ಪಾರ್ಕ್​ಗಳಿಗೆ ಸಾಕು ನಾಯಿ ಕೊಂಡೊಯ್ಯುವವರು ಇದನ್ನು ಗಮನಿಸಿ; ತೋಟಗಾರಿಕೆ ಇಲಾಖೆಯಿಂದ ಕೆಲ ನಿಯಮಗಳು ಜಾರಿ
ಸಾಂದರ್ಭಿಕ ಚಿತ್ರ
TV9 Web
| Edited By: sandhya thejappa|

Updated on: Dec 18, 2021 | 12:24 PM

Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ವಾಯು ವಿಹಾರಕ್ಕೆ ಹೋಗುವುದು ಸಹಜ. ವಾಕಿಂಗ್ ಹೋಗುವ ಜನರು ತಮ್ಮ ತಮ್ಮ ಮನೆಗಳಲ್ಲಿ ಸಾಕಿದ ನಾಯಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ. ಆದರೆ ನಾಯಿಗಳು ಹಲವು ಕಾರಣಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತವೆ. ಹೀಗಾಗಿ ತೋಟಗಾರಿಕೆ ಇಲಾಖೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ನಾಯಿ ಕಾಟದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದ ಹಿನ್ನೆಲೆ ತೋಟಗಾರಿಕೆ ಇಲಾಖೆ ಕೆಲ ನಿಯಮಗಳನ್ನ ಜಾರಿಗೆ ತಂದು ಆದೇಶ ನೀಡಿದೆ.

ಮಾಲೀಕರು ಪಾರ್ಕ್​ಗಳಿಗೆ ನಾಯಿಗಳನ್ನ ಕರೆತರುವಾಗ 6 ಅಡಿ ಉದ್ದದ ಸರಪಳಿ ಹಾಕಿರಬೇಕು. ನಾಯಿಗಳನ್ನ ಕೈಯಲ್ಲಿ ಹಿಡಿದುಕೊಂಡು ನಿಯಂತ್ರಿಸಬೇಕು. ತಮ್ಮ ನಾಯಿಗೆ ರೇಬಿಸ್ ಚುಚ್ಚು ಮದ್ದು ಹಾಕಿರುವ ಬಗ್ಗೆ ದಾಖಲೆ ತೋರಿಸಬೇಕು. ಪಾರ್ಕ್​ಗಳಲ್ಲಿ ನಾಯಿಗಳು ಮಲವಿಸರ್ಜನೆ ಮಾಡದಂತೆ ಕ್ರಮ ವಹಿಸಬೇಕು. ಒಂದು ವೇಳೆ ಮಲವಿಸರ್ಜನೆ ಮಾಡಿದರೆ ಮಾಲೀಕರೇ ಸ್ವಚ್ಚಗೊಳಿಸಬೇಕು. ಸಾಕು ನಾಯಿಗಳಿಗೆ ಪಾರ್ಕ್​ಗಳ್ಲಿ ಯಾವುದೇ ಕಾರಣಕ್ಕೂ ಆಹಾರ ನೀಡಬಾರದು ಅಂತ ತೋಟಗಾರಿಕೆ ಇಲಾಖೆ ನಿಯಮಗಳನ್ನ ಜಾರಿಗೆ ತಂದಿದೆ.

ಅಲ್ಲದೇ ಉಗ್ರ ಸ್ವರೂಪ ಹಾಗೂ ದೊಡ್ಡ ಗಾತ್ರದ ನಾಯಿಗಳನ್ನ ತರಬಾರದು. ತೋಟಾಗಾರಿಕೆ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ನಾಯಿಗಳಿಂದ ತೊಂದರೆಯಾದರೆ ಅದಕ್ಕೆ ಮಾಲೀಕರೆ ಜವಾಬ್ದಾರಿ. ಪಾರ್ಕ್​ನಲ್ಲಿ ಮಕ್ಕಳು, ಹಿರಿಯ ನಾಗರಿಕರು ವಾಯುವಿಹಾರ ನಡೆಸುವ ಉದ್ಯಾನವನಗಳಲ್ಲಿ ನಾಯಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ತೋಟಗಾರಿಗೆ ಇಲಾಖೆ ಗುರುತುಪಡಿಸಿರುವ ಕಡೆ ಮಾತ್ರ ನಾಯಿಗಳಿಗೆ ಊಟ ನೀಡಬೇಕು ಅಂತ ತೋಟಗಾರಿಕೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ

ಟ್ರಿನಿಡಾಡ್​ನಲ್ಲಿ 12, ಚೀನಾದಲ್ಲಿ 20; ಮಹಿಳೆಯರ ವಿವಾಹ ವಯೋಮಿತಿ ವಿವಿಧ ದೇಶಗಳಲ್ಲಿ ಹೇಗಿದೆ? ಕುತೂಹಲಕಾರಿ ಮಾಹಿತಿ ಇಲ್ಲಿದೆ

Kohli vs BCCI: ಬಿಸಿಸಿಐ ಆಯ್ಕೆ ಸಮಿತಿಯವರು ವಿರಾಟ್ ಕೊಹ್ಲಿಯ ಅರ್ಧದಷ್ಟು ಪಂದ್ಯವನ್ನೂ ಆಡಿಲ್ಲ ಎಂದ ಕೀರ್ತಿ ಆಜಾದ್

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು