AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಾರ್ಕ್​ಗಳಿಗೆ ಸಾಕು ನಾಯಿ ಕೊಂಡೊಯ್ಯುವವರು ಇದನ್ನು ಗಮನಿಸಿ; ತೋಟಗಾರಿಕೆ ಇಲಾಖೆಯಿಂದ ಕೆಲ ನಿಯಮಗಳು ಜಾರಿ

ಮಾಲೀಕರು ಪಾರ್ಕ್​ಗಳಿಗೆ ನಾಯಿಗಳನ್ನ ಕರೆತರುವಾಗ 6 ಅಡಿ ಉದ್ದದ ಸರಪಳಿ ಹಾಕಿರಬೇಕು. ನಾಯಿಗಳನ್ನ ಕೈಯಲ್ಲಿ ಹಿಡಿದುಕೊಂಡು ನಿಯಂತ್ರಿಸಬೇಕು. ತಮ್ಮ ನಾಯಿಗೆ ರೇಬಿಸ್ ಚುಚ್ಚು ಮದ್ದು ಹಾಕಿರುವ ಬಗ್ಗೆ ದಾಖಲೆ ತೋರಿಸಬೇಕು.

ಬೆಂಗಳೂರಿನಲ್ಲಿ ಪಾರ್ಕ್​ಗಳಿಗೆ ಸಾಕು ನಾಯಿ ಕೊಂಡೊಯ್ಯುವವರು ಇದನ್ನು ಗಮನಿಸಿ; ತೋಟಗಾರಿಕೆ ಇಲಾಖೆಯಿಂದ ಕೆಲ ನಿಯಮಗಳು ಜಾರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 18, 2021 | 12:24 PM

Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ವಾಯು ವಿಹಾರಕ್ಕೆ ಹೋಗುವುದು ಸಹಜ. ವಾಕಿಂಗ್ ಹೋಗುವ ಜನರು ತಮ್ಮ ತಮ್ಮ ಮನೆಗಳಲ್ಲಿ ಸಾಕಿದ ನಾಯಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ. ಆದರೆ ನಾಯಿಗಳು ಹಲವು ಕಾರಣಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತವೆ. ಹೀಗಾಗಿ ತೋಟಗಾರಿಕೆ ಇಲಾಖೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ನಾಯಿ ಕಾಟದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದ ಹಿನ್ನೆಲೆ ತೋಟಗಾರಿಕೆ ಇಲಾಖೆ ಕೆಲ ನಿಯಮಗಳನ್ನ ಜಾರಿಗೆ ತಂದು ಆದೇಶ ನೀಡಿದೆ.

ಮಾಲೀಕರು ಪಾರ್ಕ್​ಗಳಿಗೆ ನಾಯಿಗಳನ್ನ ಕರೆತರುವಾಗ 6 ಅಡಿ ಉದ್ದದ ಸರಪಳಿ ಹಾಕಿರಬೇಕು. ನಾಯಿಗಳನ್ನ ಕೈಯಲ್ಲಿ ಹಿಡಿದುಕೊಂಡು ನಿಯಂತ್ರಿಸಬೇಕು. ತಮ್ಮ ನಾಯಿಗೆ ರೇಬಿಸ್ ಚುಚ್ಚು ಮದ್ದು ಹಾಕಿರುವ ಬಗ್ಗೆ ದಾಖಲೆ ತೋರಿಸಬೇಕು. ಪಾರ್ಕ್​ಗಳಲ್ಲಿ ನಾಯಿಗಳು ಮಲವಿಸರ್ಜನೆ ಮಾಡದಂತೆ ಕ್ರಮ ವಹಿಸಬೇಕು. ಒಂದು ವೇಳೆ ಮಲವಿಸರ್ಜನೆ ಮಾಡಿದರೆ ಮಾಲೀಕರೇ ಸ್ವಚ್ಚಗೊಳಿಸಬೇಕು. ಸಾಕು ನಾಯಿಗಳಿಗೆ ಪಾರ್ಕ್​ಗಳ್ಲಿ ಯಾವುದೇ ಕಾರಣಕ್ಕೂ ಆಹಾರ ನೀಡಬಾರದು ಅಂತ ತೋಟಗಾರಿಕೆ ಇಲಾಖೆ ನಿಯಮಗಳನ್ನ ಜಾರಿಗೆ ತಂದಿದೆ.

ಅಲ್ಲದೇ ಉಗ್ರ ಸ್ವರೂಪ ಹಾಗೂ ದೊಡ್ಡ ಗಾತ್ರದ ನಾಯಿಗಳನ್ನ ತರಬಾರದು. ತೋಟಾಗಾರಿಕೆ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ನಾಯಿಗಳಿಂದ ತೊಂದರೆಯಾದರೆ ಅದಕ್ಕೆ ಮಾಲೀಕರೆ ಜವಾಬ್ದಾರಿ. ಪಾರ್ಕ್​ನಲ್ಲಿ ಮಕ್ಕಳು, ಹಿರಿಯ ನಾಗರಿಕರು ವಾಯುವಿಹಾರ ನಡೆಸುವ ಉದ್ಯಾನವನಗಳಲ್ಲಿ ನಾಯಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ತೋಟಗಾರಿಗೆ ಇಲಾಖೆ ಗುರುತುಪಡಿಸಿರುವ ಕಡೆ ಮಾತ್ರ ನಾಯಿಗಳಿಗೆ ಊಟ ನೀಡಬೇಕು ಅಂತ ತೋಟಗಾರಿಕೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ

ಟ್ರಿನಿಡಾಡ್​ನಲ್ಲಿ 12, ಚೀನಾದಲ್ಲಿ 20; ಮಹಿಳೆಯರ ವಿವಾಹ ವಯೋಮಿತಿ ವಿವಿಧ ದೇಶಗಳಲ್ಲಿ ಹೇಗಿದೆ? ಕುತೂಹಲಕಾರಿ ಮಾಹಿತಿ ಇಲ್ಲಿದೆ

Kohli vs BCCI: ಬಿಸಿಸಿಐ ಆಯ್ಕೆ ಸಮಿತಿಯವರು ವಿರಾಟ್ ಕೊಹ್ಲಿಯ ಅರ್ಧದಷ್ಟು ಪಂದ್ಯವನ್ನೂ ಆಡಿಲ್ಲ ಎಂದ ಕೀರ್ತಿ ಆಜಾದ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್