ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಗ್ಯಾಲರಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಹೊಸ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನವನ್ನು ಅನಾವರಣಗೊಳಿಸಿದೆ. ಈ ಸುಂದರ ಹಸಿರು ಪ್ರದೇಶವು ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಮತ್ತು "ಉದ್ಯಾನ ನಗರ" ಬೆಂಗಳೂರಿನ ಖ್ಯಾತಿಯನ್ನು ಎತ್ತಿಹಿಡಿಯಲು ಅವಕಾಶ ನೀಡುತ್ತದೆ. ನೈಸರ್ಗಿಕ ವಿನ್ಯಾಸಗಳು ಮತ್ತು ಮೃದುವಾದ ಬೆಳಕು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತವೆ, ವಿಮಾನ ನಿಲ್ದಾಣದ ಗದ್ದಲದಿಂದ ಮುಕ್ತಿ ನೀಡುತ್ತವೆ.

ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಗ್ಯಾಲರಿ
ಬೆಂಗಳೂರು ವಿಮಾನ ನಿಲ್ದಾಣ

Updated on: Dec 17, 2025 | 12:33 PM

ಬೆಂಗಳೂರು, ಡಿ.17: ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಲ್ಲಿ ಹೊಸ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನ ಮಾಡಲಾಗಿದೆ. ಇನ್ನು ಈ ಗ್ಯಾಲರಿಯಿಂದಲ್ಲೇ ವಿಮಾನ ನಿಲ್ದಾಣದ ಒಳಗೆ ಹೋಗಬಹುದು. ಇದು ಜನರಿಗೆ ಹೆಚ್ಚಿನ ಕಾಲ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ. ಈ ಗ್ಯಾಲರಿಯನ್ನು ತುಂಬಾ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಸಂಪೂರ್ಣ ಹಸಿರಿನಿಂದ ಇದು ಕಂಗೊಳಿಸುತ್ತದೆ. ಇದು ಭಾರತದ “ಉದ್ಯಾನ ನಗರ” ಎಂಬ ಖ್ಯಾತಿಯನ್ನು ಕೂಡ ಪಡೆದುಕೊಂಡಿದೆ. ಈಗಾಗಲೇ ಬೆಂಗಳೂರಿನ ವಿಮಾನ ನಿಲ್ದಾಣದ ಎರಡು ಟರ್ಮಿನಲ್ ಅದ್ಭುತ ವಿನ್ಯಾಸಗಳನ್ನು ಹೊಂದಿದೆ.

ಸಸ್ಯಗಳು, ನೈಸರ್ಗಿಕ ವಿನ್ಯಾಸಗಳು ಮತ್ತು ಹಿತವಾದ ದೃಶ್ಯಗಳು ಪ್ರಯಾಣಿಕರನ್ನು ಸೆಳೆಯುತ್ತದೆ. ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಅಥವಾ ಒಂದು ವೇಳೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬೇಗ ಬಂದರೆ, ಇಲ್ಲಿ ಕಾಲ ಕಳೆಯಬಹುದು. ಜತೆಗೆ ಬೆಳಕಿನ ವಿನ್ಯಾಸವನ್ನು ಕೂಡ ಅದ್ಭುತವಾಗಿ ಮಾಡಲಾಗಿದೆ. ಜತೆಗೆ ವಿಮಾನ ನಿಲ್ದಾಣಗಳಾಗುವ ಗದ್ದಲಗಳನ್ನು ತಪ್ಪಿಸಲು ಕೂಡ ಇದು ಸಹಾಯಕವಾಗಿದೆ. ಗಾರ್ಡನ್ ಟ್ರಯಲ್​​ನ್ನು ಕೂಡ ವಿನ್ಯಾಸ ಮಾಡಲಾಗಿದೆ. ಪ್ರಕೃತಿ ಆಧಾರಿತ ವಿನ್ಯಾಸ, ಮೃದುವಾದ ಬೆಳಕು ಮತ್ತು ವಿಶಾಲ ಕಾರಿಡಾರ್​​ಗಳನ್ನು ಕೂಡ ಮಾಡಲಾಗಿದೆ.

ಇದನ್ನೂ ಓದಿ: ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿ ಗುಣಮಟ್ಟ ಭಾರೀ ಕುಸಿತ: ಪ್ರವಾಸಿಗರೇ ಎಚ್ಚರ

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇದರ ವಿನ್ಯಾಸ ಹಾಗೂ ಈ ಗ್ಯಾಲರಿ ಹೇಗಿದೆ ಎಂಬುದನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ವಿಮಾನ ನಿಲ್ದಾಣದಲ್ಲಿರುವ ಈ  ವ್ಯವಸ್ಥೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟರ್ಮಿನಲ್ 2 ಈಗಾಗಲೇ ತನ್ನ ಪರಿಸರ ಸ್ನೇಹಿ ಕಲಾಕೃತಿ ಹಾಗೂ ಬಿದಿರಿನಿಂದ ಮಾಡಿದ ವಿನ್ಯಾಸವನ್ನು ಹೊಂದಿದೆ. ಇದೀಗ ಹೊರಾಂಗಣ ಕೂಡ ಅದ್ಭುತವಾಗಿ ಕಾಣುತ್ತಿದೆ. ಇದು ಪ್ರಯಾಣಿಕರಿಗೆ ಮತ್ತಷ್ಟು ಅನುಭವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us