ವಕೀಲೆ ಜೀವಾ ಆತ್ಮಹತ್ಯೆ: Dysp ಕನಕಲಕ್ಷ್ಮಿ ಬಂಧನಕ್ಕೆ ಸಿಕ್ಕ ಮಹತ್ವದ ಸಾಕ್ಷ್ಯ ಏನು ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 12, 2025 | 3:09 PM

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಡಿವೈಎಸ್​ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಲಾಗಿದೆ. ಜೀವಾ ವಿಚಾರಣೆ ವೇಳೆ ಚಿತ್ರೀಕರಿಸಿದ್ದ ವೀಡಿಯೋ ದೃಶ್ಯಗಳು ಬಂಧನಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಜೀವಾ ಡೆತ್ ನೋಟ್​​ನಲ್ಲಿ ಆರೋಪಿಸಿದ್ದ ವಿಷಯಗಳು ದೃಢಪಟ್ಟಿವೆ. 15ಕ್ಕೂ ಹೆಚ್ಚು ಜನ ಕನಕಲಕ್ಷ್ಮಿ ಪರವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ವಿಡಿಯೋದಲ್ಲಿನ ಸಾಕ್ಷ್ಯಗಳು ಕನಕಲಕ್ಷ್ಮಿ ವಿರುದ್ಧವಾಗಿರುವುದು ಪತ್ತೆಯಾಗಿದೆ.

ವಕೀಲೆ ಜೀವಾ ಆತ್ಮಹತ್ಯೆ: Dysp ಕನಕಲಕ್ಷ್ಮಿ ಬಂಧನಕ್ಕೆ ಸಿಕ್ಕ ಮಹತ್ವದ ಸಾಕ್ಷ್ಯ ಏನು ಗೊತ್ತಾ?
Advocate Jeeva
Follow us on

ಬೆಂಗಳೂರು, ಮಾರ್ಚ್​ 12: ವಕೀಲೆ ಜೀವಾ (advocate jeeva) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎಸ್​​ಐಟಿ ಅಧಿಕಾರಿಗಳು ಡಿವೈಎಸ್ಪಿ ಕನಕಲಕ್ಷ್ಮಿ (Dysp Kanaka Lakshmi) ಅವರನ್ನು ಬಂಧಿಸಿದ್ದಾರೆ. ಜೀವಾ ವಿಚಾರಣೆ ವೇಳೆ ಡಿವೈಎಸ್​​ಪಿ ಕನಕಲಕ್ಷ್ಮಿ ಶೂಟ್ ಮಾಡಿಸಿದ್ದ ವಿಡಿಯೋಗ್ರಫಿಯೇ ಅವರ ಬಂಧನಕ್ಕೆ ಅಸ್ತ್ರವಾಗಿದೆ. ಎಸ್​​ಐಟಿ ತನಿಖೆ ವೇಳೆ ಈ ಸಾಕ್ಷ್ಯ ಪತ್ತೆ ಆಗಿದೆ. ವಿಚಾರಣೆ ಪ್ರಕ್ರಿಯೆ ವೇಳೆ ಕಿರುಕುಳ ಕೊಟ್ಟಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದಲ್ಲಿ ಸದ್ಯ ಅವರುನ್ನು ಬಂಧಿಸಲಾಗಿದೆ. ಒಟ್ಟಾರೆ ಪ್ರಕರಣದಲ್ಲಿ 32 ಮಂದಿಯ ಹೇಳಿಕೆಯನ್ನು ಎಸ್​​ಐಟಿ ದಾಖಲಿಸಿದೆ.

ವಕೀಲೆ ಜೀವಾ ಡೆತ್ ನೋಟ್​​ನಲ್ಲಿ ಮಾಡಿದ್ದ ಗಂಭೀರ ಆರೋಪಗಳಲ್ಲಿ ಶೇಕಡ 90% ವಿಡಿಯೋದಲ್ಲೇ ಬೆಳಕಿಗೆ ಬಂದಿದೆ. ಇನ್ನು ವಿಡಿಯೋ ಚಿತ್ರೀಕರಣವನ್ನು ಸುದೀರ್ಘವಾಗಿ ಮಾಡದೆ, ಕಟ್ ಕಟ್ ಮಾಡಿ ಮುಂದುವರೆಸಿರುವುದು ಕೂಡ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಕೇಸ್: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅರೆಸ್ಟ್!

ಇದನ್ನೂ ಓದಿ
ವಕೀಲೆ ಜೀವಾ ಆತ್ಮಹತ್ಯೆ ಕೇಸ್: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅರೆಸ್ಟ್
ಜೀವಾ ಆತ್ಮಹತ್ಯೆ ಪ್ರಕರಣ: ಡಿವೈಎಸ್​ಪಿ ಬಂಧನಕ್ಕೆ ಆಗ್ರಹ
ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ
ಭೋವಿ ನಿಗಮದ ಅವ್ಯವಹಾರದಲ್ಲಿ ಹೆಸರು ಪ್ರಸ್ತಾಪ: ಆರೋಪ ಹಿಂಪಡೆಯುವಂತೆ ಪತ್ರ

ಈ ನಡುವೆ 15 ಕ್ಕೂ ಹೆಚ್ಚು ಮಂದಿಯು ಕನಕಲಕ್ಷ್ಮಿ ಪರವಾಗಿಯೇ ಹೇಳಿಕೆ ದಾಖಲಿಸಿದ್ದಾರೆ. ಆದರೆ ವಿಡಿಯೋ ಚಿತ್ರೀಕರಣದಲ್ಲೇ ಜೀವಾ ಡೆತ್ ನೋಟ್​​ನಲ್ಲಿನ ಆರೋಪ ಸಂಬಂಧಿತ ವಿಚಾರಗಳು ಬೆಳಕಿಗೆ ಬಂದಿದ್ದು, ಈ ಮೂಲಕ ಎಸ್​​ಐಟಿ ತಂಡ ಬಂಧಿಸಿ ತನಿಖೆ ಕೈಗೊಂಡಿದೆ.

ವಿವಸ್ತ್ರಗೊಳಿಸಿ ವಿಚಾರಣೆ: 25 ಲಕ್ಷ ರೂ. ಲಂಚಕ್ಕೆ ಬೇಡಿಕೆ

ಬೆಂಗಳೂರಿನ ಪದ್ಮನಾಭ ನಗರದ ನಿವಾಸಿ ವಕೀಲೆ ಜೀವಾ 2024ರ ನವೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2021-22ರಲ್ಲಿ ಬೆಳಕಿಗೆ ಬಂದ ಭೋವಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿವಸ್ತ್ರಗೊಳಿಸಿ ವಿಚಾರಣೆ ಮಾಡಿದ್ದಲ್ಲದೇ 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ವಕೀಲೆ ಜೀವಾ ತಮ್ಮ ಡೆತ್ ನೋಟ್​​ನಲ್ಲಿ ಕನಕಲಕ್ಷ್ಮಿ ವಿರುದ್ಧ ಆರೋಪ ಮಾಡಿದ್ದರು.

ನವೆಂಬರ್ 14 ರಂದು ಹೈಕೋರ್ಟ್ ನಿರ್ದೇಶನದ ಮೇರೆಗೆ ಜೀವಾ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು ಎಂದು ವರದಿಯಾಗಿದೆ. ಡಿವೈಎಸ್​​ಪಿ ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ, ವಿಚಾರಣೆಯ ಸಮಯದಲ್ಲಿ ತನ್ನ ಬಟ್ಟೆ ಬಿಚ್ಚಿಟ್ಟಿದ್ದಾರೆ ಮತ್ತು ಸೈನೈಡ್ ಸಾಗಿಸುತ್ತಿದ್ದಾಳೆ ಎಂದು ವಿಚಾರಣೆ ಮಾಡಿರುವುದಾಗಿ ಜೀವಾ ಡೆತ್ ನೋಟ್​​ನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ, ಡಿವೈಎಸ್​​ಪಿ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ಜೀವಾ ಸಲ್ಲಿಸಿದ ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ, ಕನಕಲಕ್ಷ್ಮೀ ಬಂಧನ ಆಗಬೇಕು: ವಕೀಲರ ಸಂಘದ ಅಧ್ಯಕ್ಷ ವಿವೇಕ್ ಆಗ್ರಹ

ಎಫ್‌ಐಆರ್ ಪ್ರಕಾರ, ನವೆಂಬರ್ 14 ರಿಂದ 21 ರವರೆಗೆ ಕಿರುಕುಳ ನೀಡಲಾಗಿದೆ. ಇನ್ನು ಜೀವಾ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಡಿವೈಎಸ್​​ಪಿ ಅವರ ಅಂಗಡಿ ಬಳಿ ತೆರಳಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಜೀವಾ ಸಹೋದರಿ ಸಂಗೀತ್ ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:08 pm, Wed, 12 March 25