Lokayukta Raid: BBMP ಎಡಿಟಿಪಿ ಗಂಗಾಧರಯ್ಯ ಮನೆಯಲ್ಲಿ ಕೋಟಿ ಕೋಟಿ ಹಣ, ಚಿನ್ನಾಭರಣ ಪತ್ತೆ!

|

Updated on: Apr 24, 2023 | 10:16 PM

ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಈ ಪೈಕಿ ಬಿಬಿಎಂಪಿ ADTP ಗಂಗಾಧರಯ್ಯ ಮನೆಯೂ ಒಂದು. ಇವರ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ನಗದು, ಚಿನ್ನಾಭರಣಗಳು ಪತ್ತೆಯಾಗಿವೆ.

Lokayukta Raid: BBMP ಎಡಿಟಿಪಿ ಗಂಗಾಧರಯ್ಯ ಮನೆಯಲ್ಲಿ ಕೋಟಿ ಕೋಟಿ ಹಣ, ಚಿನ್ನಾಭರಣ ಪತ್ತೆ!
BBMP ಎಡಿಟಿಪಿ ಗಂಗಾಧರಯ್ಯ ಮನೆಯಲ್ಲಿ ಪತ್ತೆಯಾದ ಹಣ, ಚಿನ್ನಾಭರಣ ಇತ್ಯಾದಿ ಸ್ವತ್ತುಗಳು
Follow us on

ಬೆಂಗಳೂರು: ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ (IT Raid) ಅಧಿಕಾರಿಗಳು, ಲೋಕಾಯುಕ್ತ (Lokayukta Raid) ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಈ ಪೈಕಿ ಬಿಬಿಎಂಪಿ (BBMP) ಎಡಿಟಿಪಿ ಗಂಗಾಧರಯ್ಯ ಮನೆಯೂ ಒಂದು. ಇವರ ಮನೆಯಲ್ಲಿ ತಲಾಷ್ ನಡೆಸಿದಾಗ ಕೋಟ್ಯಾಂತರ ರೂಪಾಯಿ ನಗದು, ಚಿನ್ನಾಭರಣ, ಆಸ್ತಿಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಗಂಗಧಾರಯ್ಯಗೆ ಸಂಬಂಧಿಸಿದ ಒಟ್ಟು 7 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಏನೆಲ್ಲಾ ಪತ್ತೆಯಾಯ್ತು? ಚಿನ್ನಾಭರಣ ಎಷ್ಟು ಸಿಕ್ಕಿತು? ಎಷ್ಟು ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ? ಇತ್ಯಾದಿ ಮಾಹಿತಿ ಇಲ್ಲಿದೆ.

ದಾಳಿ ವೇಳೆ ಗಂಗಾಧರಯ್ಯ ಅವರು ಯಲಹಂಕ, ಜೆಸಿ ನಗರ, ನಾಗವಾರ ಮತ್ತು ಹೆಬ್ಬಾಳದಲ್ಲಿ 14 ಫ್ಲಾಟ್‌ಗಳು, ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ನೆಲಮಂಗಲದಲ್ಲಿ 1.5 ಕೋಟಿ ಮೌಲ್ಯದ 5 ಎಕರೆ ಕೃಷಿ ಭೂಮಿ, ಮಲ್ಲೇಶ್ವರದಲ್ಲಿ 3.65 ಕೋಟಿ ಮೌಲ್ಯದ ನಿವೇಶನ ಇರುವುದು ತಿಳಿದುಬಂದಿದೆ. ಇದರಲ್ಲದೆ, ಎರಡು ಬ್ಯಾಂಗ್​ಗಳಲ್ಲಿ 2 ಲಾಕರ್​ಗಳನ್ನು ಹೊಂದಿದ್ದಾರೆ.

ದಾಳಿ ವೇಳೆ ಗಂಗಾಧರಯ್ಯ ನಿವಾಸದಲ್ಲಿ 1.431 ಕೆಜಿ ಚಿನ್ನ, 8.7 ಕೆಜಿ ಬೆಳ್ಳಿ, ಮತ್ತು 73 ಲಕ್ಷ ಮೌಲ್ಯದ ಡೈಮಂಡ್ ಪತ್ತೆಯಾಗಿದೆ. ಅಲ್ಲದೆ, 1,47,16,000 ರೂ. (ಒಂದು ಕೋಟಿ ನಲವತ್ತೇಳು ಲಕ್ಷ ಹದಿನಾರು ಸಾವಿರ) ಪತ್ತೆಯಾಗಿದೆ. ಮಾತ್ರವಲ್ಲದೆ, ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. USD 10,298, ಧೀರಮ್ ದುಬೈ 1180, ಈಜಿಪ್ಟ್ ಪೌಂಡ್ 35 ಪತ್ತೆಯಾಗಿವೆ. ಗಂಗಾಧರಯ್ಯ ಕಚೇರಿ, ಕುಟುಂಬಸ್ಥರು, ಅಳಿಯದಿಂರ ನಿವಾಸಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಕುಟುಂಬಸ್ಥರ ಮನೆಗಳಲ್ಲಿ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರೌಡಿಶೀಟರ್​ಗಳ ಮನೆಗಳ ಮೇಲೆ ಪೊಲೀಸರ ದಾಳಿ; 105 KG ಗಾಂಜಾ, ಮಾರಕಾಸ್ತ್ರ ವಶ

ಅಂಕಿತಾ ಬಿಲ್ಡರ್ಸ್​ ಕಚೇರಿ ಮೇಲೆ ಐಟಿ ದಾಳಿ

ಹುಬ್ಬಳ್ಳಿ: ಅಂಕಿತಾ ಬಿಲ್ಡರ್ಸ್​ ಕಚೇರಿ ಹಾಗೂ ಮನೆ ಮೇಲೆ ಮೇಲೆ ಐಟಿ ದಾಳಿ ನಡೆದಿದೆ. ನಿಲೀಜನ ರಸ್ತೆಯ ಕಚೇರಿ, ಮಂಜುನಾಥನಗರದಲ್ಲಿರುವ ಅಂಕಿತಾ ಡೆವಲಪರ್ಸ್​ ಮಾಲೀಕ ನಾರಾಯಣ ಬಿ.ಆಚಾರ್ಯ ಮನೆ ಹಾಗೂ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಪತ್ತೆಯಾದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ದಾಳಿ ನಡೆದಿದ್ದು ಹಲವು ಅಧಿಕಾರಿಗಳ ಮನೆಯಲ್ಲಿ ಚಿನ್ನ, ನಗದು, ಕಡತ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಐಟಿ ದಾಳಿ ನಡೆದಿದ್ದು ಬೆಳ್ತಂಗಡಿಯ ಮಾಜಿ ಸಚಿವ, ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಬಳಿಯಿರುವ ಗಂಗಾಧರ ಗೌಡ ಮನೆ, ಪ್ರಸನ್ನ ಇನ್ಸ್ಟಿಟ್ಯೂಷನ್​​, ಇಂದುಬೆಟ್ಟುವಿನ ಮನೆಯಲ್ಲಿ 20ಕ್ಕೂ ಅಧಿಕ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Mon, 24 April 23