ಬೆಂಗಳೂರು, ರಾಮನಗರದ ಈ ಪ್ರದೇಶಗಳಲ್ಲಿ ಇಂದು ಸಾಯಂಕಾಲವರೆಗೆ ವಿದ್ಯುತ್​ ಕಟ್

|

Updated on: Jun 26, 2024 | 9:43 AM

ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು (ಜೂ.26) ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ಬೆಂಗಳೂರು, ರಾಮನಗರದ ಈ ಪ್ರದೇಶಗಳಲ್ಲಿ ಇಂದು ಸಾಯಂಕಾಲವರೆಗೆ ವಿದ್ಯುತ್​ ಕಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜೂನ್​ 26: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (KPTCL) ದುರಸ್ತಿ ಅಥವಾ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು (ಜೂ.26) ವಿದ್ಯುತ್​ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (BESCOM) ಮಾದ್ಯಮ ಪ್ರಕಟಣೆ ಹೊರಡಿಸಿದೆ. ಹಾಗೆ, ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 10:30 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್​​ ವ್ಯತ್ಯಯವಾಗಲಿದೆ. ರಾಮನಗರ ಮತ್ತು ಮಾಗಡಿಯಲ್ಲಿ ಬೆಳಗ್ಗೆ 10:30 ರಿಂದ 3 ಗಂಟೆಯವರೆಗೆ ಮತ್ತು ಕನಕಪುರದಲ್ಲಿ 4 ಗಂಟೆಯವರೆಗೆ ವಿದ್ಯುತ್​ ಕಡಿತವಾಗಲಿದೆ.

ವಿದ್ಯುತ್​ ವ್ಯತ್ಯಯವಾಗುವ ಏರಿಯಾಗಳು

ಬೆಂಗಳೂರಿನ, ಆರ್​ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುವಲ್​ ರಸ್ತೆ, ಕರಿಯಪ್ಪ ಲೇಔಟ್​, ಆಶ್ರಮ ರಸ್ತೆ, ಆನಂದನಗರ ಮೊದಲನೇ ಬ್ಲಾಕ್​​, ಗುಡ್ಡಪ್ಪರೆಡ್ಡಿ ಲೇಔಟ್​, ಹೆಬ್ಬಾಳ, ಜಯಮಹಲ್ ಮೊದಲನೇ ಬ್ಲಾಕ್​​, ನಂದಿದುರ್ಗ ರಸ್ತೆ, ಮರಪ್ಪ ಗಾರ್ಡನ್​​, ಜೆಸಿನಗರ, ಮಿಲ್ಲರ್ಸ್​ ರಸ್ತೆ, ಗಂಗಾನಗರ, ಚಾಮುಂಡಿನಗರ, ದಿನ್ನುರ, ಪಿ&ಟಿ ಕಾಲೋನಿ, ಇಎಕ್ಸ್​​ ಸರ್ವಿಸ್​​ ಮೆನ್​ ಕಾಲೋನಿ, ಎಮ್​ಎಲ್​​ಎ ಲೇಔಟ್​, ಗಂಗಾನಗರ, ಆರ್​ಬಿವೈ ಕಾಲೋನಿ, ಹೆಚ್​ಎಮ್​​ಟಿ ಲೇಔಟ್​, ವಸಂತಪ್ಪ ಬ್ಲಾಕ್​​ ಇತ್ಯಾದಿ.

ಇದನ್ನೂ ಓದಿ: ಜಮೀನಲ್ಲಿ ಕರೆಂಟ್ ಕಂಬ ಹಾಕಿಸಿದ್ದರೆ ಪರಿಹಾರ ಸಿಗುತ್ತೆ ಎಂಬ ಸುದ್ದಿ ಸುಳ್ಳು -ಬೆಸ್ಕಾಂ ಸ್ಪಷ್ಟನೆ

ರಾಮನಗರ ವಿದ್ಯುತ್​ ವ್ಯತ್ಯಯ

ಮಾಗಡಿ ಉಪವಿಭಾಗ ಪ್ರದೇಶದ ಮತ್ತೀಕೆರೆ, ಹೆಲಿಗೆಹಳ್ಳಿ ಉಪವಿಭಾಗ, ಬಸಪಾನ ದೊಡ್ಡಿ, ಎಲಿಗೆಹಳ್ಳಿ, ಗೆಜ್ಜೆಗರಗುಪ್ಪೆ.

ಕನಕಪುರ: ಕೊಳ್ಳಿಗನಹಳ್ಳಿ ಪಂಚಾಯಿತಿ, ಟಿ-ಹೊಸಹಳ್ಳಿ ಪಂಚಾಯತಿ ಮತ್ತು ಚೇಳೂರು ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಟೌನ್​, ಹಾರೋಹಳ್ಳಿ ಕೈಗಾರಿಗಾ ಪ್ರದೇಶ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

ರಾಮನಗರ: ಹುನ್ನಾಸಹನಹಳ್ಳಿ, ಕೊನಗಲ, ಯರಬನಗರದಲ್ಲಿ ವಿದ್ಯುತ್​ ಕಟ್​ ಆಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Wed, 26 June 24