AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್​ ತಂದಿಟ್ಟಿದ್ದಾರೆ: ಶಂಕಿತ ಉಗ್ರ ಸಹೋದರನ ಆರೋಪ

ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ನಿನ್ನೆ ಬಂಧನಕ್ಕೊಳಗಾದ ಶಂಕಿತ ಐವರು ಉಗ್ರರರ ಪೈಕಿ ಜಾಹಿದ್ ತಬ್ರೇಜ್​ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್​ ತಂದಿಟ್ಟಿದ್ದಾರೆ. ಎಂದು ಶಂಕಿತ ಉಗ್ರ ಜಾಹಿದ್​​ ತಬ್ರೇಜ್ ಸಹೋದರ ಹೇಳಿದ್ದಾರೆ.

ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್​ ತಂದಿಟ್ಟಿದ್ದಾರೆ: ಶಂಕಿತ ಉಗ್ರ ಸಹೋದರನ ಆರೋಪ
ಗ್ರೆನೇಡ್​, ಬಂಧಿತ ಶಂಕಿತ ಉಗ್ರ ಜಾಹಿದ್ ತಬ್ರೇಜ್
Jagadisha B
| Edited By: |

Updated on:Jul 20, 2023 | 5:16 PM

Share

ಬೆಂಗಳೂರು, ಜುಲೈ 20: ನಿನ್ನೆ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರರ (Suspected terrorist) ಪೈಕಿ ಜಾಹಿದ್ ತಬ್ರೇಜ್​ ಎಂಬಾತನ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್​ ತಂದು ಇಟ್ಟಿದ್ದಾರೆ ಎಂದು ಶಂಕಿತ ಉಗ್ರ ಜಾಹಿದ್​​ ತಬ್ರೇಜ್ ಸಹೋದರ ಅವೇಜ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಪೊಲೀಸರು ತಮ್ಮನನ್ನು ಕರೆದುಕೊಂಡು ಬಂದಿದ್ದು, ಗ್ರೆನೇಡ್​ ತಂದು ಇಟ್ಟಿದ್ದಾರೆ ಎಂದರು.

ನನ್ನ ಸಹೋದರ ಅಂತಹ ಕೆಲಸ ಮಾಡುವವನಲ್ಲ.​ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ತಾನಿದ್ದ. ನಾನು ಮತ್ತು ಸಹೋದರ ಇಬ್ಬರೇ ಮನೆಯಲ್ಲಿ ದುಡಿಯವವರು ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹ್ಯಾಂಡ್​​ ಗ್ರೆನೇಡ್ ಪತ್ತೆ; ಪೊಲೀಸರಲ್ಲಿ ಹೆಚ್ಚಿದ ಆತಂಕ, ಎಲ್ಲೆಡೆ ಕಟ್ಟೆಚ್ಚರ

2017ರಲ್ಲಿ ಜುನೈದ್​ ಜೊತೆ ಕೇಸ್​​ವೊಂದರಲ್ಲಿ ಅರೆಸ್ಟ್​ ಆಗಿದ್ದ. ಕ್ಯಾಬ್ ಓಡಿಸುವಾಗ ಜುನೈದ್ ಕರೆದೊಯ್ದು ಹೀಗೆ ಮಾಡಿದ್ದ. ಬಳಿಕ ಜುನೈದ್​​ ಸಹವಾಸವನ್ನೇ ಜಾಹಿದ್ ತಬ್ರೇಜ್ ಬಿಟ್ಟಿದ್ದ. ನಾವು ಸಂಸಾರಸ್ಥರು, ನಾವು ಏಕೆ ಗ್ರೆನೇಡ್ ಇಟ್ಟುಕೊಳ್ಳುತ್ತೇವೆ. ನನ್ನ ತಮ್ಮ ಈ ರೀತಿಯ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಗ್ರೆನೇಡ್​ ಅಷ್ಟೇ ಅಲ್ಲ, 45 ಜೀವಂತ ಗುಂಡುಗಳು, ಏಳು ಪಿಸ್ತೂಲ್​​ಗಳು ಪತ್ತೆ

ಸದ್ಯ ಅರೆಸ್ಟ್ ಆಗಿರುವ ಐವರ ಬಳಿ ಒಟ್ಟು 45 ಜೀವಂತ ಗುಂಡುಗಳು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್​ಗಳು ಸಿಕ್ಕಿವೆ. ಇದೆಲ್ಲವನ್ನು ಹೊಂದಿಸಬೇಕು ಅಂದರೆ ಅದಕ್ಕೆ ಹಣ ಬೇಕು. ಈ ಹಣದ ವ್ಯವಸ್ಥೆ ಯನ್ನು ಖುದ್ದು ಎ2 ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಮಾಡುತ್ತಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್​ ಪತ್ತೆ, ಸಿಸಿಬಿ ಶಾಕ್

2017 ರಲ್ಲಿ ಕೊಲೆ ಕೇಸ್,​ 2020 ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಕೇಸ್​ನಲ್ಲಿ ಜೈಲು ಸೇರಿದ್ದ. ನಂತರ ಜೈಲಿನಿಂದ ಹೊರ ಬಂದ ಜುನೈದ್ ನಾಪತ್ತೆ ಆಗಿದ್ದ, ಜುನೈದ್ ಮಿಡಲ್ ಈಸ್ಟ್​ನ ಒಂದು ದೇಶದಲ್ಲಿ ಕುಳಿತು ಏನು ಏನು ಮಾಡಬೇಕು ಎಂದು ಮಾಹಿತಿ ನೀಡುತ್ತಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:08 pm, Thu, 20 July 23

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!