20 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ; ಇಲ್ಲಿದೆ ಪಟ್ಟಿ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ 20 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿ(DYSP) ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದ್ದು, ಯಾರ್ಯಾರಿಗೆ ಬಡ್ತಿ ಸಿಕ್ಕಿದೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು, ಮಾ.07: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ 20 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿ(DYSP) ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.

ಬಡ್ತಿ ಹೊಂದಿದ ಅಧಿಕಾರಿಗಳ ಪಟ್ಟಿ ಇಲ್ಲಿದೆ
- ಸುಲೇಮಾನ್ ಎಂ.ತಹಸೀಲ್ದಾರ್
- ಜಿ.ಟಿ.ಸ್ವಾಮಿ
- ಎಸ್.ಡಿ.ಸನಾದಿ
- ಬಿ.ಎಂ.ಕನಕಲಕ್ಷ್ಮೀ
- ಆರ್.ವಸಂತಕುಮಾರ್
- ಮಾದಪ್ಪ
- ಸುನೀಲ್ ವೈ.ನಾಯಕ್
- ಗಿರೀಶ್ ಪಾಂಡು ರೋಡ್ಕರ್
- ನಾಗೇಶ್ ಸುಬ್ಬಯ್ಯ ಹಸ್ಲರ್
- ಸಿ.ವಸಂತ್
- ರವೀಂದ್ರ ಕುರುಬಗಟ್ಟಿ
- ಬರಮಪ್ಪ ಸಿದ್ದಪ್ಪ ಲೋಕಾಪುರ
- ಮೊಹಮ್ಮದ್ ಇರ್ಷಾದ್
- ಎಸ್.ಶ್ರೀಧರ್, ಜಿ.ಪ್ರಭಾಕರ್
- ಎಲ್.ವೈ.ರಾಜೇಶ್
- ಮಲ್ಲನಗೌಡ ಎಸ್.ನಾಯ್ಕರ್
- ಎನ್.ಜಿ.ಕೃಷ್ಣಪ್ಪ
- ಹರೀಶ್ ಕುಮಾರ್ ಡಿವೈಎಸ್ಪಿ ಹುದ್ದೆಗೆ ಬಡ್ತಿ
- ವಸಂತ್ ಕುಮಾರ್ ಆರ್
- ಶಿವಮಲವಯ್ಯ
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ
ಇನ್ನು ಜನವರಿ 04 ರಂದು 371(ಜೆ) ಅಡಿ ಖಾಲಿ ಹುದ್ದೆಗಳ ಮುಂಬಡ್ತಿ ಪ್ರಕ್ರಿಯೆ ಆರಂಭಿಸಲು ಸಚಿವ ಸಂಪುಟ ಉಪ ಸಮಿತಿ ಸೂಚನೆ ನೀಡಿತ್ತು. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ಅಡಿ 46 ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದೆ ಬಾಕಿ ಇರುವ ಒಟ್ಟು 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇಕಡ 8ರಷ್ಟು ಮೀಸಲಾತಿಯಂತೆ ಮುಂಬಡ್ತಿ ನೀಡಬೇಕಾದ 8,278 ಹುದ್ದೆಗಳನ್ನು, ಬಡ್ತಿ ಮೂಲಕ ತುಂಬಿಸಲು ತಕ್ಷಣ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸೂಚಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



