ಇಂದಿನಿಂದ ಗ್ರೀನ್ ಜೋನ್​ಗಳಲ್ಲಿ ಬಸ್ ಸಂಚಾರ ಶುರು

ಬೆಂಗಳೂರು: ಲಾಕ್​ಡೌನ್ ಪಾರ್ಟ್ 2 ಮುಗಿದು ಇಂದಿನಿಂದ ಮೂರನೇ ಪಾರ್ಟ್ ಆರಂಭವಾಗಿದೆ. ಆದ್ರೆ ಲೌಕ್​ಡೌನ್ ಇಷ್ಟು ದಿನ ಇದ್ದಂತೆ ಇರೋದಿಲ್ಲ. ರಾಜ್ಯ ಸರ್ಕಾರ ಸಡಿಲಿಕೆಯನ್ನು ಮಾಡಿದೆ. ರಾಜ್ಯದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರವಿರಬೇಕು, ಮಾಸ್ಕ್ ಕಡ್ಡಾಯ, ಒಂದು ಬಸ್ ಗೆ 20ರಿಂದ 25 ಜನರು ಮಾತ್ರ ಪ್ರಯಾಣ ಮಾಡಬಹುದಾಗಿದೆ. ಪ್ರತಿ ಟ್ರಿಪ್ ಗೂ ಸ್ಯಾನಿಟೈಸ್ ಮಾಡುವ […]

ಇಂದಿನಿಂದ ಗ್ರೀನ್ ಜೋನ್​ಗಳಲ್ಲಿ ಬಸ್ ಸಂಚಾರ ಶುರು
ಸಾಧು ಶ್ರೀನಾಥ್​

Updated on: May 04, 2020 | 6:45 AM

ಬೆಂಗಳೂರು: ಲಾಕ್​ಡೌನ್ ಪಾರ್ಟ್ 2 ಮುಗಿದು ಇಂದಿನಿಂದ ಮೂರನೇ ಪಾರ್ಟ್ ಆರಂಭವಾಗಿದೆ. ಆದ್ರೆ ಲೌಕ್​ಡೌನ್ ಇಷ್ಟು ದಿನ ಇದ್ದಂತೆ ಇರೋದಿಲ್ಲ. ರಾಜ್ಯ ಸರ್ಕಾರ ಸಡಿಲಿಕೆಯನ್ನು ಮಾಡಿದೆ. ರಾಜ್ಯದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರವಿರಬೇಕು, ಮಾಸ್ಕ್ ಕಡ್ಡಾಯ, ಒಂದು ಬಸ್ ಗೆ 20ರಿಂದ 25 ಜನರು ಮಾತ್ರ ಪ್ರಯಾಣ ಮಾಡಬಹುದಾಗಿದೆ. ಪ್ರತಿ ಟ್ರಿಪ್ ಗೂ ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಗ್ರೀನ್ ಜೋನ್ ಜಿಲ್ಲೆಗಳಾದ ಕೋಲಾರ, ಹಾವೇರಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಚಾಮರಾಜನಗರ, ಯಾದಗಿರಿ, ಉಡುಪಿ, ರಾಮನಗರ, ಮಂಡ್ಯ, ತುಮಕೂರು, ಗದಗ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಶಿವಮೊಗ್ಗ, ಹಾಸನ ಸೇರಿದಂತೆ ಗ್ರೀನ್ ಜೋನ್​ನಲ್ಲಿ ಬಸ್ ಸಂಚಾರ ಶುರುವಾಗಲಿದೆ.

Published On - 6:44 am, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us