AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆ.ಗುಡಿ ಕ್ಯಾಂಪ್​ನಲ್ಲಿ ಮರೆಯಾಗುತ್ತಾ ಮದಗಜಗಳ ಮೆರುಗು..!

ಸ್ವರ್ಗವನ್ನೇ ಸೃಷ್ಟಿಸಿರೋ ನಿಸರ್ಗ. ಭೂರಮೆಯ ತುಂಬೆಲ್ಲಾ ಹಸಿರಿನ ಹಾಸಿಗೆ. ಮಧುವಣಗಿತ್ತಿಯಂತೆ ಎಲೆಗಳಿಂದ ತುಂಬಿರೋ ಮರಗಿಡಗಳು. ಇಂಥ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರು ಬರ್ತಿದ್ರು. ಆದ್ರೀಗ ಅದೇ ಸೌಂದರ್ಯಕ್ಕೆ ಮೆರುಗಂತಿದ್ದ ಆನೆ ಶಿಬಿರ ಮರೆಯಾಗೋ ಲಕ್ಷಣ ಕಾಣ್ತಿದೆ. ಪದಗಳಿಗೆ ನಿಲುಕದ ಪ್ರಕೃತಿ ಸೌಂದರ್ಯ. ನಡುವೆ ಸ್ವಚ್ಛಂದ ಜೀವಸಂಕುಲ. ನೋಡೋಕೆ ಎರಡು ಕಣ್ಣು ಸಾಲಲ್ಲ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್​ನಲ್ಲಿ ಬರುವ ಕ್ಯಾತೆರ ದೇವರ ಗುಡಿ ವನ್ಯಜೀವಿ ಪ್ರಿಯರ ಅಚ್ಚುಮೆಚ್ಚಿನ ಸ್ಪಾಟ್. ಹೀಗಾಗೇ ರಜಾ ದಿನಗಳು […]

ಕೆ.ಗುಡಿ ಕ್ಯಾಂಪ್​ನಲ್ಲಿ ಮರೆಯಾಗುತ್ತಾ ಮದಗಜಗಳ ಮೆರುಗು..!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 29, 2019 | 8:27 AM

Share

ಸ್ವರ್ಗವನ್ನೇ ಸೃಷ್ಟಿಸಿರೋ ನಿಸರ್ಗ. ಭೂರಮೆಯ ತುಂಬೆಲ್ಲಾ ಹಸಿರಿನ ಹಾಸಿಗೆ. ಮಧುವಣಗಿತ್ತಿಯಂತೆ ಎಲೆಗಳಿಂದ ತುಂಬಿರೋ ಮರಗಿಡಗಳು. ಇಂಥ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರು ಬರ್ತಿದ್ರು. ಆದ್ರೀಗ ಅದೇ ಸೌಂದರ್ಯಕ್ಕೆ ಮೆರುಗಂತಿದ್ದ ಆನೆ ಶಿಬಿರ ಮರೆಯಾಗೋ ಲಕ್ಷಣ ಕಾಣ್ತಿದೆ.

ಪದಗಳಿಗೆ ನಿಲುಕದ ಪ್ರಕೃತಿ ಸೌಂದರ್ಯ. ನಡುವೆ ಸ್ವಚ್ಛಂದ ಜೀವಸಂಕುಲ. ನೋಡೋಕೆ ಎರಡು ಕಣ್ಣು ಸಾಲಲ್ಲ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್​ನಲ್ಲಿ ಬರುವ ಕ್ಯಾತೆರ ದೇವರ ಗುಡಿ ವನ್ಯಜೀವಿ ಪ್ರಿಯರ ಅಚ್ಚುಮೆಚ್ಚಿನ ಸ್ಪಾಟ್. ಹೀಗಾಗೇ ರಜಾ ದಿನಗಳು ಬಂದ್ರೆ ಫ್ಯಾಮಿಲಿ ಸಮೇತ ಪ್ರವಾಸಕ್ಕೆ ಬರ್ತಾರೆ.

ಆನೆ ಶಿಬಿರ ಬಂದ್ ಮಾಡಲು ನಿರ್ಧಾರ: ಅದ್ರಲ್ಲೂ ಕಳೆದ ಒಂದು ದಶಕದ ಹಿಂದೆ ಕೆ.ಗುಡಿ ಆನೆ ಶಿಬಿರದಲ್ಲಿ 15ಆನೆಗಳಿದ್ದು ಪ್ರವಾಸಿಗರು ಆನೆ ಮೇಲೆ ಕುಳಿತು ಸಫಾರಿ ಮಾಡ್ತಿದ್ರು. ಜೊತೆಗೆ ವಿಶ್ವವಿಖ್ಯಾತ ಮೈಸೂರು ದಸರೆಯಲ್ಲೂ ಇಲ್ಲಿಂದ ಮೂರು ಆನೆಗಳು ಭಾಗಿಯಗ್ತಿದ್ವು. ಆದ್ರೀಗ ಸಫಾರಿ ಮಾಯವಾಗಿದ್ದು, ದುರ್ಗಾ ಪರಮೇಶ್ವರಿ ಮತ್ತು ಗಜೇಂದ್ರ ಆನೆ ಮಾತ್ರ ಇವೆ. ಅದೇ ಆನೆಗಳನ್ನ ನೋಡಿ ಖುಷಿ ಪಡ್ತಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಲು ಮುಂದಾಗಿದೆ. ಆನೆ ಶಿಬಿರವನ್ನ ಬಂದ್ ಮಾಡುವುದರ ಜೊತೆಗೆ ಇರುವ ಆನೆಗಳನ್ನ ಬೇರೆ ಶಿಬಿರಕ್ಕೆ ಕಳುಹಿಸಲು ಪ್ಲ್ಯಾನ್ ಮಾಡಿದೆ.

ಅರಣ್ಯ ಇಲಾಖೆ ಕ್ರಮಕ್ಕೆ ಸ್ಥಳೀಯರ ವಿರೋಧ: ಆನೆ ಶಿಬಿರ ಬಂದ್ ಮಾಡಿ ಆನೆಗಳನ್ನ ಎತ್ತಂಗಡಿ ಮಾಡಲು ಹೊರಟಿರುವ ಅರಣ್ಯ ಇಲಾಖೆ ಕ್ರಮಕ್ಕೆ ವನ್ಯಜೀವಿ ಪ್ರಿಯರ ಜೊತೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ. ಕೆ.ಗುಡಿಯಲ್ಲಿ ಸಫಾರಿ ಮಾಡುವುದು ಒಂದು ಭಾಗವಾಗಿದ್ರೆ ಆನೆ ಶಿಬಿರವೂ ಆಕರ್ಷಣೀಯವಾಗಿತ್ತು. ಸಫಾರಿ ವೇಳೆ ವನ್ಯಜೀವಿಗಳು ಕಾಣದೇ ಇದ್ದಾಗ ಶಿಬಿರದಲ್ಲಿದ್ದ ಆನೆ ಮತ್ತು ಜಿಂಕೆಗಳನ್ನ ನೋಡಿ ಖುಷಿ ಪಡ್ತಿದ್ರು. ಆದ್ರೆ ಇನ್ಮುಂದೆ ಅವೂ ಇರಲ್ಲ ಅನ್ನೋದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.

ಅರಣ್ಯ ಇಲಾಖೆಗೆ ಆದಾಯದ ಚಿಂತೆ. ಪ್ರವಾಸಿಗರಿಗೆ ಪ್ರಕೃತಿಯ ಆಸೆ. ಆದ್ರೀಗ ಇದ್ದ ಎರಡು ಆನೆಗಳನ್ನೂ ಬೇರೆಡೆ ಕಳುಹಿಸಲು ಪ್ಲ್ಯಾನ್ ರೆಡಿಯಾಗಿದೆ. ಹೀಗಾಗಿ ಇನ್ಮುಂದೆ ಆನೆಗಳು ನೋಡೋಕೆ ಸಿಗಲ್ವಲ್ಲ ಅನ್ನೋ ನಿರಾಸೆ ಪ್ರವಾಸಿಗರಿಗೆ ಶುರುವಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ