ಹುಲಿಗಳ ಜೊತೆಗೆ ಅತಿ ಹೆಚ್ಚು ಆನೆಗಳೂ ಇರುವುದು ಬಂಡಿಪುರದಲ್ಲೇ!

ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಹೆಮ್ಮೆಯ ಮುಕುಟ. ಹುಲಿ (Tiger) ಆಯ್ತು ಈಗ ಆನೆಗಳ (Elephant) ಸಂಖ್ಯೆಯಲ್ಲಿಯೂ ಬಂಡಿಪುರಕ್ಕೆ ನಂಬರ್ ಓನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳು ಹೊಂದಿರುವ ಪ್ರದೇಶ ಎಂಬ ಖ್ಯಾತಿ ಸಂದಿದೆ.

ಹುಲಿಗಳ ಜೊತೆಗೆ ಅತಿ ಹೆಚ್ಚು ಆನೆಗಳೂ ಇರುವುದು ಬಂಡಿಪುರದಲ್ಲೇ!
ಅತಿ ಹೆಚ್ಚು ಆನೆಗಳೂ ಇರುವುದು ಬಂಡಿಪುರದಲ್ಲೇ!
Edited By: ಸಾಧು ಶ್ರೀನಾಥ್​

Updated on: Aug 10, 2023 | 11:54 AM

ಚಾಮರಾಜನಗರ, ಆಗಸ್ಟ್​ 10: ಬಂಡಿಪುರ ಅಭಯಾರಣ್ಯಕ್ಕೆ ರಾಜ್ಯದಲ್ಲೇ ನಂಬರ್ ಒನ್ ಸ್ಥಾನ ಪ್ರಾಪ್ತಿಯಾಗಿದೆ. ಹುಲಿ ಸಂಖ್ಯೆಯಲ್ಲಿ ಅಗ್ರ ಸ್ಥಾನ ಪಡೆದಿದ್ದ ಬಂಡಿಪುರ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ (Bandipur) ಮತ್ತೊಂದು ಹೆಮ್ಮೆಯ ಮುಕುಟ ಇದಾಗಿದೆ. ಹುಲಿ (Tiger) ಆಯ್ತು ಈಗ ಆನೆಗಳ (Elephant) ಸಂಖ್ಯೆಯಲ್ಲಿಯೂ ಬಂಡಿಪುರಕ್ಕೆ ನಂಬರ್ ಓನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳು ಹೊಂದಿರುವ ಪ್ರದೇಶ ಎಂಬ ಖ್ಯಾತಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂದಿದೆ.

ರಾಜ್ಯದಲ್ಲಿ ಒಟ್ಟು ಆನೆಗಳ ಸಂಖ್ಯೆ ಬರೋಬ್ಬರಿ 6395 ಇದೆ. ಚಾಮರಾಜನಗರ ಜಿಲ್ಲೆಯ (Chamarajanagar) ಬಂಡಿಪುರ ಒಂದರಲ್ಲೇ 1116 ಆನೆಗಳು ಪತ್ತೆಯಾಗಿವೆ. 1116 ಆನೆಗಳುಳ್ಳ ಬಂಡಿಪುರಕ್ಕೆ ಸಿಕ್ಕಿದೆ ಅಗ್ರಜ ಸ್ಥಾನ ದೊರೆತಿದೆ. ಒಟ್ಟಾರೆ ಆನೆಗಳ ಸಂಖ್ಯೆ ವಿಚಾರವಾಗಿ ಬಂಡಿಪುರ ಹಾಗೂ ನಾಗರಹೊಳೆ ಅಭಯಾರಣ್ಯದ ನಡುವೆ ಭಾರಿ ಪೈ ಪೋಟಿ ಇತ್ತು. 831 ಆನೆಗಳುಳ್ಳ ನಾಗರಹೊಳೆ ಎರಡನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೊನ್ನೆಯಷ್ಟೆ ‘ಹೌದು ಹುಲಿಯಾ’ ನಮ್ಮಲ್ಲಿ ಹುಲಿಗಳು ಜಾಸ್ತಿಯಿವೆ ಎಂದು ಸಂಭ್ರಮಿಸಿದ್ದೆವು! ಆದರೆ ಈಗ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಆನೆಗಣತಿ ಇದಾಗಿದೆ. ಆನೆಗಳ ನೇರ ಎಣಿಕೆ, ಲದ್ದಿ ಎಣಿಕೆ ಹಾಗೂ ವಾಟರ್ ಹೋಲ್ ಎಣಿಕೆ ಮೂಲಕ ನಡೆಯುವ ಗಣತಿ ಪ್ರಕ್ರಿಯೆ ಇದಾಗಿದೆ. ಬಿಡುಗಡೆಯಾದ ಆನೆಗಣತಿಯಲ್ಲಿ ಬಂಡಿಪುರಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ. ಈ ಹಿಂದೆ 191 ಹುಲಿಗಳನ್ನ ಹೊಂದಿರುವ ಬಂಡಿಪುರಕ್ಕೆ ಪ್ರಥಮ ಸ್ಥಾನ ಲಭ್ಯವಾಗಿತ್ತು. ಈಗ 1116 ಆನೆಗಳನ್ನ ಹೊಂದಿರುವ ಬಂಡಿಪುರಕ್ಕೆ ಮತ್ತೆ ಮೊದಲ ಸ್ಥಾನ ಲಭ್ಯವಾಗಿದೆ.

ಚಾಮರಾಜನಗರ ಜಿಲ್ಲೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us