ಮೊನ್ನೆಯಷ್ಟೆ ‘ಹೌದು ಹುಲಿಯಾ’ ನಮ್ಮಲ್ಲಿ ಹುಲಿಗಳು ಜಾಸ್ತಿಯಿವೆ ಎಂದು ಸಂಭ್ರಮಿಸಿದ್ದೆವು! ಆದರೆ ಈಗ ಅನುಮಾನ ಹುಟ್ಟಿಕೊಂಡಿದೆ, ಯಾಕೆ?

ಕರ್ನಾಟಕದಲ್ಲಿ ಕೇವಲ 39 ಹುಲಿಗಳು ಹೆಚ್ಚಾಗಿದ್ರೆ, ಮಧ್ಯಪ್ರದೇಶದಲ್ಲಿ 259 ಹುಲಿಗಳು ಹೆಚ್ಚಾಗಿರೋದು ಹೇಗೆ ಅಂತ ಅನುಮಾನ ಮೂಡಿದೆ. ಈ ಬಗ್ಗೆ ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Follow us
| Updated By: ಸಾಧು ಶ್ರೀನಾಥ್​

Updated on:Aug 03, 2023 | 9:56 AM

ಮೊನ್ನೆ‌ ಮೊನ್ನೆಯಷ್ಟೆ ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರ ಹುಲಿಗಣತಿ ವರದಿ ಬಿಡುಗಡೆ ಮಾಡಿದೆ.‌ ಆದ್ರೆ ಆ ವರದಿ ಬಿಡುಗಡೆಯಾದ ಮೇಲೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ನಂಬರ್ ಒನ್ ಪಟ್ಟಕ್ಕೆ ಪೈಪೋಟಿ ಇದ್ದ ಕರ್ನಾಟಕಕ್ಕೆ ಮತ್ತೆ ನಿರಾಸೆಯಾಗಿದೆ. ಅದಷ್ಟೆ ಅಲ್ಲದೆ ವರದಿಯಲ್ಲಿರುವ ಅಂದಾಜು ಹುಲಿಗಳ ಸಂಖ್ಯೆಯೆ (Tigers) ಬಗ್ಗೆ ಹಲವು ಅನುಮಾನಗಳು ಮೂಡಿದೆ. ಹೌದು, ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನ ಆಚರಣೆ ( International Tiger Day 2023) ಮಾಡಲಾಗುತ್ತೆ.‌ಈ ದಿನ ಭಾರತದಲ್ಲಿ 2022 ರಲ್ಲಿ ನಡೆಸಿದ ಹುಲಿ ಗಣತಿ ವರದಿಯನ್ನ ಕೇಂದ್ರ ಪರಿಸರ ಇಲಾಖೆ ಬಿಡುಗಡೆ ಮಾಡಿದೆ. ಇಲಾಖೆ ಬಿಡುಗಡೆ ಮಾಡಿರುವ ಹುಲಿ ಗಣತಿ ವರದಿ ಖುಷಿ ಪಡುವ ವಿಚಾರವಾಗಿದೆ. ಆದ್ರೆ ಕರ್ನಾಟಕದ (Karnataka Forest Department) ವಿಚಾರಕ್ಕೆ ಬಂದ್ರೆ ಈ ವರದಿ ಒಂದಷ್ಟು ನಿರಾಸೆ ಮೂಡಿಸಿದೆ. ಈ ವರದಿ ಬಗ್ಗೆಯೇ ಅನುಮಾನ‌ವೂ ಮೂಡುವಂತಾಗಿದೆ.

ಇಷ್ಟಕ್ಕೆಲ್ಲ ಕಾರಣ ಅಂದ್ರೆ‌ 2018 ರ ವರದಿ ಹಾಗೂ 2022 ರ ವರದಿಯಲ್ಲಿ ಕಂಡು ಬಂದ ಹುಲಿಗಳ ಸಂಖ್ಯೆಯಲ್ಲಿನ ವ್ಯತ್ಯಾಸ. 2018 ರಲ್ಲಿ ಕರ್ನಾಟಕದಲ್ಲಿ 524 ಹುಲಿಗಳಿಂದ ದೇಶದಲ್ಲಿ ಎರಡನೇ ಅತಿ ಹೆಚ್ಚು ಹುಲಿ ಹೊಂದಿರುವ ರಾಜ್ಯ ಎನಿಸಿಕೊಂಡಿತು. ಅದ್ರಲ್ಲು ನಂಬರ್ 1 ಪಡೆದ ಮಧ್ಯಪ್ರದೇಶಕ್ಕೂ ರಾಜ್ಯಕ್ಕೂ ಕೇವಲ 2 ಹುಲಿಗಳಷ್ಟೆ ವ್ಯತ್ಯಾಸ ಇತ್ತು. 2018 ರಲ್ಲಿ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದವು. ‌

ಈ ಬಾರಿ ಬಿಡುಗಡೆ ಮಾಡಿದ ವರದಿಯಲ್ಲಿ ರಾಜ್ಯಕ್ಕೂ ಮಧ್ಯಪ್ರದೇಶಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಕರ್ನಾಟಕದಲ್ಲಿ 563 ಹುಲಿಗಳಿದ್ರೆ ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ ಅಂತ ವರದಿ ತಿಳಿಸಿದೆ. ಕರ್ನಾಟಕದಲ್ಲಿ ಕೇವಲ 39 ಹುಲಿಗಳು ಹೆಚ್ಚಾಗಿದ್ರೆ, ಮಧ್ಯಪ್ರದೇಶದಲ್ಲಿ 259 ಹುಲಿಗಳು ಹೆಚ್ಚಾಗಿರೋದು ಹೇಗೆ ಅಂತ ಅನುಮಾನ ಮೂಡಿದೆ. ಈ ಬಗ್ಗೆ ಪರಿಸರವಾದಿ, ಹಿರಿಯ ಪತ್ರಕರ್ತ ಜೋಸೆಫ್ ಹೂವರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tiger Census 2022: ಹುಲಿ ಗಣತಿ 2022ರ ವರದಿ ಬಿಡುಗಡೆ: ಕರ್ನಾಟಕಕ್ಕೆ ಮತ್ತೆ 2ನೇ ಸ್ಥಾನ

ಇದು ಒಂದು ಬಗೆಯ ಅನುಮಾನವಾಗಿದ್ರೆ ಮತ್ತೊಂದು ಅನುಮಾನಕ್ಕೆ ಕಾರಣ ಅಂದ್ರೆ ಗಣತಿ ವರದಿಯಲ್ಲಿ ಕಂಡು ಬಂದಿರುವ ವ್ಯತ್ಯಾಸ.‌ ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ‌ ಬಂಡೀಪುರ ಸಫಾರಿ ನಡೆಸಿ, ಮೈಸೂರಿನ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ರು. ಈ ವೇಳೆ ಒಟ್ಟಾರೆ ಹುಲಿಗಳ ಸಂಖ್ಯೆ ಬಿಡುಗಡೆ ಮಾಡಿದ್ರು. ಅಂದು ಬಿಡುಗಡೆ ಮಾಡಿದ ವರದಿಯಲ್ಲಿ 3167 ಹುಲಿ ಇದೆ ಎಂದು ಹೇಳಲಾಗಿತ್ತು. ಇದೀಗಾ ರಾಜ್ಯವಾರು ಬಿಡುಗಡೆ ಮಾಡಿರುವ ಗಣತಿ ವರದಿಯಲ್ಲಿ‌ ಈ ಸಂಖ್ಯೆ‌ 3682 ಇದೆ ಎಂದು ಬಿಡುಗಡೆಯಾಗಿದೆ.

ಓಟ್ಟಾರೆ, ಈ ಬಾರಿಯ ಗಣತಿಯಲ್ಲಿ ರಾಜ್ಯ ನಂಬರ್ ಒನ್ ಪಟ್ಟಗಳಿಸುತ್ತೆ ಎಂಬ ನಿರೀಕ್ಷೆ ಇತ್ತು.‌ ಆದ್ರೀಗಾ ನಿರೀಕ್ಷೆ ಹುಸಿಯಾಗಿರೋದು ಒಂದು ಕಡೆಯಾದ್ರೆ ವರದಿಯ ಬಗ್ಗೆ ಅನುಮಾನ ಹುಟ್ಟಿದ್ದು ರಾಜ್ಯಕ್ಕೆ ಮೋಸ ಆಗಿದಿಯಾ ಎಂಬ ಅನುಮಾನ ಮೂಡಿದೆ.

ಮೈಸೂರು ಜಿಲ್ಲಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:52 am, Thu, 3 August 23

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​