ಚಾಮರಾಜನಗರ: ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನ ಕಾಯಿ ಚಿಪ್ಪು, ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್

2020ರಲ್ಲಿ ರೈತರು ಸರ್ಕಾರದ ಸಹಕಾರದೊಂದಿಗೆ ತೆಂಗು ಸಂಸ್ಕರಣಾ ಘಟವನ್ನ ಸ್ಥಾಪಿಸಿದ್ರು. ಆಗಿನಿಂದ ಕರಟಗಳನ್ನ ಶೇಖರಿಸಿಡಲಾಗಿತ್ತು. ಈ ಚಿಪ್ಪುಗಳನ್ನ ಹಂಗ್ರಹಿಸಿ ಕೆಜಿಗೆ 9 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದೆ. ಅರಸೀಕೆರೆ ಹಾಗೂ ನಂಜನಗೂಡಿನ ಉದ್ಯಮಿಗಳಂತೆ ರಾಜ್ಯದ ಬೇರೆ ಭಾಗಗಳಿಂದ ಕರಟಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ.

ಚಾಮರಾಜನಗರ: ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನ ಕಾಯಿ ಚಿಪ್ಪು, ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್
ತೆಂಗಿನ ಕಾಯಿ ಚಿಪ್ಪು
Edited By:

Updated on: Oct 26, 2023 | 7:23 PM

ಚಾಮರಾಜನಗರ, ಅಕ್ಟೋಬರ್ 26: ರೈತರ ಪಾಲಿಗೆ ಕಲ್ಪವೃಕ್ಷ (Coconut Tree) ದೊಡ್ಡ ಆದಾಯ ಮೂಲವಾಗಿ ಹೊರ ಹೊಮ್ಮಿದೆ. ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆಯೇ ತೆಂಗಿಯ ಕಾಯಿ ಚಿಪ್ಪುಗಳಿಗೆ (Coconut shell) ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ತೆಂಗಿನ ಕಾಯಿ ಖಾಲಿ ಚಿಪ್ಪುಗಳು ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿದೆ. ಈ ಚಿಪ್ಪನ್ನು ಖರೀದಿಸಿ ಏನನ್ನು ತಯಾರಿಸುತ್ತಾರೆ? ತೆಂಗಿನ ಚಿಪ್ಪು ಈಗ ರೈತರ ಆದಾಯ ಮೂಲವಾಗಿದ್ದು ಹೇಗೆ ಎಂಬ ವಿವರ ಇಲ್ಲಿದೆ.

ರಾಶಿ ರಾಶಿಯಾಗಿ ಬಿದ್ದಿರುವ ತೆಂಗಿನಕಾಯಿ ಚಿಪ್ಪುಗಳು, ತೆಂಗಿನ ಖಾಲಿ ಚಿಪ್ಪುಗಳನ್ನ ಒಂದೆಡೆ ಡಂಪ್ ಮಾಡುತ್ತಿರುವ ಜನರು, ಈ ಚಿತ್ರಣ ಕಾಣಸಿಗುವುದು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ. ಸಾಮಾನ್ಯವಾಗಿ ತೆಂಗಿನ ಕಾಯಿ ಚಿಪ್ಪುಗಳನ್ನ ಬೀದಿಯಲ್ಲಿ ಬಿಸಾಡುವುದೇ ಹೆಚ್ಚು. ಅದೇ ರೀತಿ ಸೌದೆ ಒಲೆಗೂ ಸಹ ಇದನ್ನ ಬಳಸುತ್ತಾರೆ. ಆದ್ರೆ ಈ ಚಿಪ್ಪುಗಳು ಈಗ ರೈತನ ಆದಾಯ ಮೂಲವಾಗಿವೆ. ಚಿಪ್ಪುಗಳನ್ನ ನಂಜನಗೂಡು ಹಾಗೂ ಅರಸೀಕೆರೆಯ ಉದ್ಯಮಿಗಳು ಖರೀದಿಸುತ್ತಿದ್ದಾರೆ. ನಂಜನಗೂಡಿನಲ್ಲಿರುವ ಪ್ರತಿಷ್ಠಿತ ಚಾಕೋಲೆಟ್ ಕಂಪನಿಯು ಈ ತೆಂಗಿನ ಕರಟ ಖರೀದಿಸಿ ಬಾಯ್ಲರ್ ಕಾಯಲು ಬಳಸುತ್ತಿದ್ದಾರೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ: ಪಾದಯಾತ್ರೆ ಮೂಲಕ ನಡೆದು ಬರುವ ಭಕ್ತರಿಗೆ ಶಾಕ್

2020ರಲ್ಲಿ ರೈತರು ಸರ್ಕಾರದ ಸಹಕಾರದೊಂದಿಗೆ ತೆಂಗು ಸಂಸ್ಕರಣಾ ಘಟವನ್ನ ಸ್ಥಾಪಿಸಿದ್ರು. ಆಗಿನಿಂದ ಕರಟಗಳನ್ನ ಶೇಖರಿಸಿಡಲಾಗಿತ್ತು. ಈ ಚಿಪ್ಪುಗಳನ್ನ ಹಂಗ್ರಹಿಸಿ ಕೆಜಿಗೆ 9 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದೆ. ಅರಸೀಕೆರೆ ಹಾಗೂ ನಂಜನಗೂಡಿನ ಉದ್ಯಮಿಗಳಂತೆ ರಾಜ್ಯದ ಬೇರೆ ಭಾಗಗಳಿಂದ ಕರಟಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದ್ದು, ಮತ್ತೆ ರಾಜ್ಯದ ಬೇರೆಡೆಯಲ್ಲಿ ತೆಂಗು ಸಂಸ್ಕರಣಾ ಘಟಕವನ್ನ ಸ್ಥಾಪಿಸಲು ಸರ್ಕಾರ ಯೋಚಿಸುತ್ತಿದೆ. ಈ ತೆಂಗಿನ ಚಿಪ್ಪನ್ನ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಫ್ಯಾಕ್ಟರಿಯಲ್ಲಿರುವ ಬಾಯ್ಲರ್ ಗಳಿಗೆ ಬೆಂಕಿ ಕಾಯಲು ಬಳಸಿದ್ರೆ ಇನ್ನು ಕೆಲವರು ಈ ಚಿಪ್ಪಿನಿಂದ ಇದ್ದಿಲು ಹಾಗೂ ಸೆಲ್ ಉತ್ಪಾದನೆ ಮಾಡುತ್ತಿದ್ದಾರೆ.

ಒಟ್ಟಾರೆ ತೆಂಗಿನ ಕಾಯಿಗಳ ಚಿಪ್ಪಿಗೂ ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದ್ದು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us