AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ತಪ್ಪಾದ ಚಿಕಿತ್ಸೆಯಿಂದ ಜೀವಂತ ಶವವಾದ ವೃದ್ಧೆ: ದಂತ ವೈದ್ಯನಿಗೆ 9 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​

ದಂತ ವೈದ್ಯನ ತಪ್ಪಾದ ಚಿಕಿತ್ಸೆಯಿಂದ ಚಾಮರಾಜನಗರದ ವೃದ್ಧೆಯೊಬ್ಬರು ಜೀವಂತ ಶವದರೀತಿಯಾಗಿದ್ದಾರೆ. ಹೌದು ಚಾಮರಾಜನಗರದ ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್​​ಗೆ ಹೋದ ವದ್ಧೆಗೆ ವೈದ್ಯ ಹೆಚ್ಚಿನ ಡೋಸೆಜ್ ಅನಸ್ಥೇಶಿಯಾ ಇಂಜೆಕ್ಷನ್​​ ನೀಡಿದ ಪರಿಣಾಮ ದೇಹದ ಎಡಭಾಗಕ್ಕೆ ಸ್ವಾಧೀನ ಇಲ್ಲದಂತಾಗಿದೆ.

ಚಾಮರಾಜನಗರ: ತಪ್ಪಾದ ಚಿಕಿತ್ಸೆಯಿಂದ ಜೀವಂತ ಶವವಾದ ವೃದ್ಧೆ: ದಂತ ವೈದ್ಯನಿಗೆ 9 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​
ಡಾ. ಮಂಜುನಾಥ (ಎಡಚಿತ್ರ) ವುದ್ಧೆ ಸುಕನ್ಯ (ಬಲಚಿತ್ರ)
Shivaraj
| Updated By: ವಿವೇಕ ಬಿರಾದಾರ|

Updated on:Oct 06, 2023 | 3:11 PM

Share

ಚಾಮರಾಜನಗರ ಅ.06: ದಂತ ವೈದ್ಯನ (Dental Doctor) ತಪ್ಪಾದ ಚಿಕಿತ್ಸೆಯಿಂದ ಚಾಮರಾಜನಗರದ (Chamarajnagar) ವೃದ್ಧೆಯೊಬ್ಬರು ಜೀವಂತ ಶವದರೀತಿಯಾಗಿದ್ದಾರೆ. ಹೌದು ಚಾಮರಾಜನಗರ ನಗರ ನಿವಾಸಿಯಾಗಿರುವ ವೃದ್ಧೆ ಸುಕನ್ಯ ಅವರು 2021ರ ಫೆಬ್ರವರಿ 3 ನೇ ತಾರೀಖಿನಂದಯ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ಚಾಮರಾಜನಗರದ ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್​​ಗೆ ಹೋಗಿದ್ದರು. ದಂತ ವೈದ್ಯ ಹೆಚ್.ಎಸ್ ಮಂಜುನಾಥ್ ಸುಕನ್ಯರಿಗೆ ರೂಟ್ ಕೆನಲ್ ಚಿಕಿತ್ಸೆ ನೀಡುವ ಸಲುವಾಗಿ ಎಡ ದವಡೆಗೆ ಮರಗಟ್ಟುವ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ್ದನು.

ಅನಸ್ಥೇಶಿಯಾ ಇಂಜೆಕ್ಷನ್​​ನ ಡೋಸೆಜ್ ಹೆಚ್ಚಾದ ಪರಿಣಾಮ ವೃದ್ಧೆ ಸುಕನ್ಯ ಸ್ಥಳದಲ್ಲೇ ಕುಸಿದು ಬಿದ್ದು 20 ದಿನ ಕೋಮಗೆ ಜಾರಿದ್ದರು. ಕೋಮದಿಂದ ಹೊರಬಂದ ಬಳಿಕ ಸುಕನ್ಯ ಅವರು ದೇಹದ ಎಡಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾರೆ. ಎಡಭಾಗ ಸ್ವಾಧೀನ ಕಳೆದುಕೊಂಡ ಸುಕನ್ಯ ಕಳೆದ ಎರಡುವರೆ ವರ್ಷದಿಂದ ಮಾಡದ ತಪ್ಪಿಗೆ ನೋವು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಗುರುತಿನ ಚೀಟಿ ವಿಚಾರಕ್ಕೆ ಕಂಡಕ್ಟರ್ ಜೊತೆ ಮಾತಿನ ಚಕಮಕಿ: ದಂತ ವೈದ್ಯ ವಿದ್ಯಾರ್ಥಿ ವಿರುದ್ಧ ಎಫ್​ಐಆರ್

ಇನ್ನು ತಾಯಿಗೆ ಹೀಗಾಗುತ್ತಿದ್ದಂತೆ ಸುಕನ್ಯರ ಪುತ್ರ ಸುಮನ್ ಗಿರಿಜಾ ಡೆಂಟಲ್ ಕೇರ್​ನ ವೈದ್ಯ ಮಂಜುನಾಥ್ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈಗ ಒಂದುವರೆ ವರ್ಷದ ಬಳಿಕ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದ್ದು, ವೈದ್ಯನಿಗೆ 9 ಲಕ್ಷದ 24 ಸಾವಿರ 605 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಆದರೆ ಸುಕನ್ಯ ಖರ್ಚು ಮಾಡಿದ್ದು ಮಾತ್ರ 15 ರಿಂದ 20 ಲಕ್ಷ ರೂ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Fri, 6 October 23

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ