AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ತಪ್ಪಾದ ಚಿಕಿತ್ಸೆಯಿಂದ ಜೀವಂತ ಶವವಾದ ವೃದ್ಧೆ: ದಂತ ವೈದ್ಯನಿಗೆ 9 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​

ದಂತ ವೈದ್ಯನ ತಪ್ಪಾದ ಚಿಕಿತ್ಸೆಯಿಂದ ಚಾಮರಾಜನಗರದ ವೃದ್ಧೆಯೊಬ್ಬರು ಜೀವಂತ ಶವದರೀತಿಯಾಗಿದ್ದಾರೆ. ಹೌದು ಚಾಮರಾಜನಗರದ ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್​​ಗೆ ಹೋದ ವದ್ಧೆಗೆ ವೈದ್ಯ ಹೆಚ್ಚಿನ ಡೋಸೆಜ್ ಅನಸ್ಥೇಶಿಯಾ ಇಂಜೆಕ್ಷನ್​​ ನೀಡಿದ ಪರಿಣಾಮ ದೇಹದ ಎಡಭಾಗಕ್ಕೆ ಸ್ವಾಧೀನ ಇಲ್ಲದಂತಾಗಿದೆ.

ಚಾಮರಾಜನಗರ: ತಪ್ಪಾದ ಚಿಕಿತ್ಸೆಯಿಂದ ಜೀವಂತ ಶವವಾದ ವೃದ್ಧೆ: ದಂತ ವೈದ್ಯನಿಗೆ 9 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​
ಡಾ. ಮಂಜುನಾಥ (ಎಡಚಿತ್ರ) ವುದ್ಧೆ ಸುಕನ್ಯ (ಬಲಚಿತ್ರ)
Shivaraj
| Edited By: |

Updated on:Oct 06, 2023 | 3:11 PM

Share

ಚಾಮರಾಜನಗರ ಅ.06: ದಂತ ವೈದ್ಯನ (Dental Doctor) ತಪ್ಪಾದ ಚಿಕಿತ್ಸೆಯಿಂದ ಚಾಮರಾಜನಗರದ (Chamarajnagar) ವೃದ್ಧೆಯೊಬ್ಬರು ಜೀವಂತ ಶವದರೀತಿಯಾಗಿದ್ದಾರೆ. ಹೌದು ಚಾಮರಾಜನಗರ ನಗರ ನಿವಾಸಿಯಾಗಿರುವ ವೃದ್ಧೆ ಸುಕನ್ಯ ಅವರು 2021ರ ಫೆಬ್ರವರಿ 3 ನೇ ತಾರೀಖಿನಂದಯ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ಚಾಮರಾಜನಗರದ ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್​​ಗೆ ಹೋಗಿದ್ದರು. ದಂತ ವೈದ್ಯ ಹೆಚ್.ಎಸ್ ಮಂಜುನಾಥ್ ಸುಕನ್ಯರಿಗೆ ರೂಟ್ ಕೆನಲ್ ಚಿಕಿತ್ಸೆ ನೀಡುವ ಸಲುವಾಗಿ ಎಡ ದವಡೆಗೆ ಮರಗಟ್ಟುವ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ್ದನು.

ಅನಸ್ಥೇಶಿಯಾ ಇಂಜೆಕ್ಷನ್​​ನ ಡೋಸೆಜ್ ಹೆಚ್ಚಾದ ಪರಿಣಾಮ ವೃದ್ಧೆ ಸುಕನ್ಯ ಸ್ಥಳದಲ್ಲೇ ಕುಸಿದು ಬಿದ್ದು 20 ದಿನ ಕೋಮಗೆ ಜಾರಿದ್ದರು. ಕೋಮದಿಂದ ಹೊರಬಂದ ಬಳಿಕ ಸುಕನ್ಯ ಅವರು ದೇಹದ ಎಡಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾರೆ. ಎಡಭಾಗ ಸ್ವಾಧೀನ ಕಳೆದುಕೊಂಡ ಸುಕನ್ಯ ಕಳೆದ ಎರಡುವರೆ ವರ್ಷದಿಂದ ಮಾಡದ ತಪ್ಪಿಗೆ ನೋವು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಗುರುತಿನ ಚೀಟಿ ವಿಚಾರಕ್ಕೆ ಕಂಡಕ್ಟರ್ ಜೊತೆ ಮಾತಿನ ಚಕಮಕಿ: ದಂತ ವೈದ್ಯ ವಿದ್ಯಾರ್ಥಿ ವಿರುದ್ಧ ಎಫ್​ಐಆರ್

ಇನ್ನು ತಾಯಿಗೆ ಹೀಗಾಗುತ್ತಿದ್ದಂತೆ ಸುಕನ್ಯರ ಪುತ್ರ ಸುಮನ್ ಗಿರಿಜಾ ಡೆಂಟಲ್ ಕೇರ್​ನ ವೈದ್ಯ ಮಂಜುನಾಥ್ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈಗ ಒಂದುವರೆ ವರ್ಷದ ಬಳಿಕ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದ್ದು, ವೈದ್ಯನಿಗೆ 9 ಲಕ್ಷದ 24 ಸಾವಿರ 605 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಆದರೆ ಸುಕನ್ಯ ಖರ್ಚು ಮಾಡಿದ್ದು ಮಾತ್ರ 15 ರಿಂದ 20 ಲಕ್ಷ ರೂ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Fri, 6 October 23

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!