AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ, ಚಾಮರಾಜನಗರ ಜಿಲ್ಲಾಡಳಿತದ ಲೆಕ್ಕಾಚಾರ ಏನು?

ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ, ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ.

ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ, ಚಾಮರಾಜನಗರ ಜಿಲ್ಲಾಡಳಿತದ ಲೆಕ್ಕಾಚಾರ ಏನು?
ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​|

Updated on: Dec 02, 2023 | 8:35 PM

Share

ಅವ್ರೆಲ್ಲಾ ರಸ್ತೆ ಅಗಲೀಕರಣಕ್ಕಾಗಿ (road widening) ತಮ್ಮ ನಿವೇಶ ಹಾಗೂ ಜಾಗವನ್ನ (land, site) ಬಿಟ್ಟು ಕೊಟ್ಟಿದ್ರು. 2016 ರಲ್ಲಿ ಚಾಮರಾಜನಗರ ನಗರ ಸಭೆ ರಸ್ತೆ ಅಗಲೀಕರಣ ಸಹ ಮಾಡಿತ್ತು. ನಿವೇಶನ ಕಳೆದು ಕೊಂಡವರಿಗೆ ಸೂಕ್ತ ಪರಿಹಾರ (Compensation) ನೀಡಿದ್ದ ಜಿಲ್ಲಾಡಳಿತ 7 ವರ್ಷ ಕಳೆದ್ರು ಇನ್ನು ಒಂದೇ ಒಂದು ಬಿಡಿಗಾಸನ್ನ ಸಹ ನೀಡಿಲ್ಲ. ಇದರಿಂದ ಬೇಸತ್ತ ಸಂತ್ರಸ್ಥರು ಜಿಲ್ಲಾಡಳಿತ ವಿರುದ್ದ (chamarajanagar) ಕೆಂಡ ಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಣ್ಣಾಡಿಸಿದ ಕಡೆಯಲ್ಲಾ ಕಾಂಕ್ರೀಟ್ ರಸ್ತೆ ಸುಸಜ್ಜಿತ ರಸ್ತೆಯ ಪಕ್ಕದಲ್ಲಿ ಇರುವ ಅರ್ಧಂಬರ್ಧ ಕೆಡವಿದ ಕಟ್ಟಡಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರದಲ್ಲಿ.

2016ರಲ್ಲಿ ರಸ್ತೆ ಅಗಲೀಕರಣ ನಡೆಸುವ ಸಲುವಾಗಿ ನಗರಸಭೆ ರಸ್ತೆಯ ಅಕ್ಕಪಕ್ಕ ಇದ್ದ ನಿವೇಶನಗಳನ್ನ ಒತ್ತುವರಿ ಮಾಡಿ ಒಡೆದು ಹಾಕಿತ್ತು. ಹೀಗೆ ರಸ್ತೆ ಅಗಲೀಕರಣ ಸಮಯದಲ್ಲಿ ನಿವೇಶನಗಳನ್ನ ಕಳೆದುಕೊಂಡವರಿಗೆ ನಗರ ಸಭೆ ಒಂದು ಅಶ್ವಾನಸೆ ನೀಡಿತ್ತು. ಬೇರೆಡೆ ನಿವೇಶ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ನಗರಸಭೆ ನೀಡಿದ ಭರವಸೆ ಬೆನ್ನಲ್ಲೆ ನಿವೇಶನ ಕಳೆದು ಕೊಂಡವರು ಪರಿಹಾರದ ಭರವಸೆಯೊಂದಿಗೆ ಸುಮ್ಮನಾಗಿದ್ರು. ಆದ್ರೆ 7 ವರ್ಷ ಕಳೆದ್ರು ನಗರಸಭೆ ಇನ್ನು ಪರಿಹಾರ ನೀಡದ ಕಾರಣ ಈಗ ಸಂತ್ರಸ್ಥರು ನಗರಸಭೆ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.

Also Read: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಅವ್ಯವಹಾರ: ಸಿಬಿಐ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಇನ್ನು ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ, ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ನಿವೇಶನವನ್ನ ಕಳೆದು ಕೊಂಡವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾಗಿ ಇನ್ನೂ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂಬುದು ನಗರಸಭೆಯ ವಾದ.

ಒಟ್ಟಾರೆ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟು ನಗರಸಭೆ ಡೆಮಾಲಿಷನ್ ಕಾರ್ಯ ಮಾಡಿದೆ. ಹೀಗೆ 7 ವರ್ಷಗಳ ಹಿಂದೆ ಡೆಮಾಲಿಷನ್ ಕಾರ್ಯ ಮಾಡಿದರೂ ಇನ್ನು ಸೂಕ್ತ ಪರಿಹಾರ ನೀಡದೆ ತಡ ಮಾಡುತ್ತಿರುವ ನಗರಸಭೆ ವಿರುದ್ದ ಸಂತ್ರಸ್ತರು ಹಿಡಿ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ನಗರಸಭೆ ನಿವೇಶನ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿದರೆ ಒಳಿತು ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ನಗರಸಭೆ ವಿರುದ್ದ ಸಂತ್ರಸ್ತರು ಉಗ್ರ ಹೋರಾಟದ ಎಚ್ಚರಿಕೆಯನ್ನ ನೀಡಿದ್ದಾರೆ.

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ