Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ, ಚಾಮರಾಜನಗರ ಜಿಲ್ಲಾಡಳಿತದ ಲೆಕ್ಕಾಚಾರ ಏನು?

ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ, ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ.

ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ, ಚಾಮರಾಜನಗರ ಜಿಲ್ಲಾಡಳಿತದ ಲೆಕ್ಕಾಚಾರ ಏನು?
ರಸ್ತೆ ಅಗಲೀಕರಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಇನ್ನೂ ಸಿಗದ ಪರಿಹಾರ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​

Updated on: Dec 02, 2023 | 8:35 PM

ಅವ್ರೆಲ್ಲಾ ರಸ್ತೆ ಅಗಲೀಕರಣಕ್ಕಾಗಿ (road widening) ತಮ್ಮ ನಿವೇಶ ಹಾಗೂ ಜಾಗವನ್ನ (land, site) ಬಿಟ್ಟು ಕೊಟ್ಟಿದ್ರು. 2016 ರಲ್ಲಿ ಚಾಮರಾಜನಗರ ನಗರ ಸಭೆ ರಸ್ತೆ ಅಗಲೀಕರಣ ಸಹ ಮಾಡಿತ್ತು. ನಿವೇಶನ ಕಳೆದು ಕೊಂಡವರಿಗೆ ಸೂಕ್ತ ಪರಿಹಾರ (Compensation) ನೀಡಿದ್ದ ಜಿಲ್ಲಾಡಳಿತ 7 ವರ್ಷ ಕಳೆದ್ರು ಇನ್ನು ಒಂದೇ ಒಂದು ಬಿಡಿಗಾಸನ್ನ ಸಹ ನೀಡಿಲ್ಲ. ಇದರಿಂದ ಬೇಸತ್ತ ಸಂತ್ರಸ್ಥರು ಜಿಲ್ಲಾಡಳಿತ ವಿರುದ್ದ (chamarajanagar) ಕೆಂಡ ಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಣ್ಣಾಡಿಸಿದ ಕಡೆಯಲ್ಲಾ ಕಾಂಕ್ರೀಟ್ ರಸ್ತೆ ಸುಸಜ್ಜಿತ ರಸ್ತೆಯ ಪಕ್ಕದಲ್ಲಿ ಇರುವ ಅರ್ಧಂಬರ್ಧ ಕೆಡವಿದ ಕಟ್ಟಡಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರದಲ್ಲಿ.

2016ರಲ್ಲಿ ರಸ್ತೆ ಅಗಲೀಕರಣ ನಡೆಸುವ ಸಲುವಾಗಿ ನಗರಸಭೆ ರಸ್ತೆಯ ಅಕ್ಕಪಕ್ಕ ಇದ್ದ ನಿವೇಶನಗಳನ್ನ ಒತ್ತುವರಿ ಮಾಡಿ ಒಡೆದು ಹಾಕಿತ್ತು. ಹೀಗೆ ರಸ್ತೆ ಅಗಲೀಕರಣ ಸಮಯದಲ್ಲಿ ನಿವೇಶನಗಳನ್ನ ಕಳೆದುಕೊಂಡವರಿಗೆ ನಗರ ಸಭೆ ಒಂದು ಅಶ್ವಾನಸೆ ನೀಡಿತ್ತು. ಬೇರೆಡೆ ನಿವೇಶ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ನಗರಸಭೆ ನೀಡಿದ ಭರವಸೆ ಬೆನ್ನಲ್ಲೆ ನಿವೇಶನ ಕಳೆದು ಕೊಂಡವರು ಪರಿಹಾರದ ಭರವಸೆಯೊಂದಿಗೆ ಸುಮ್ಮನಾಗಿದ್ರು. ಆದ್ರೆ 7 ವರ್ಷ ಕಳೆದ್ರು ನಗರಸಭೆ ಇನ್ನು ಪರಿಹಾರ ನೀಡದ ಕಾರಣ ಈಗ ಸಂತ್ರಸ್ಥರು ನಗರಸಭೆ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.

Also Read: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಅವ್ಯವಹಾರ: ಸಿಬಿಐ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಇನ್ನು ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ, ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ನಿವೇಶನವನ್ನ ಕಳೆದು ಕೊಂಡವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾಗಿ ಇನ್ನೂ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂಬುದು ನಗರಸಭೆಯ ವಾದ.

ಒಟ್ಟಾರೆ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟು ನಗರಸಭೆ ಡೆಮಾಲಿಷನ್ ಕಾರ್ಯ ಮಾಡಿದೆ. ಹೀಗೆ 7 ವರ್ಷಗಳ ಹಿಂದೆ ಡೆಮಾಲಿಷನ್ ಕಾರ್ಯ ಮಾಡಿದರೂ ಇನ್ನು ಸೂಕ್ತ ಪರಿಹಾರ ನೀಡದೆ ತಡ ಮಾಡುತ್ತಿರುವ ನಗರಸಭೆ ವಿರುದ್ದ ಸಂತ್ರಸ್ತರು ಹಿಡಿ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ನಗರಸಭೆ ನಿವೇಶನ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿದರೆ ಒಳಿತು ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ನಗರಸಭೆ ವಿರುದ್ದ ಸಂತ್ರಸ್ತರು ಉಗ್ರ ಹೋರಾಟದ ಎಚ್ಚರಿಕೆಯನ್ನ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ