ಯಾವ ಕ್ಷೇತ್ರಗಳು ಕಾರ್ಯಗತವಾಗಲಿವೆ? ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್​ಡೌನ್ 2.0 ಜಾರಿಯಲ್ಲಿರುವಾಗ ಸೋಮವಾರದಿಂದ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ. ಯಾವ ಕ್ಷೇತ್ರಗಳು ಕಾರ್ಯಗತವಾಗಬಹುದು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಖ್ಯಾಂಶಗಳು ಹೀಗಿವೆ: ತರಾತುರಿಯ ಲಾಕ್‌ಡೌನ್‌ ಸಡಿಲಿಕೆ ಎಲ್ಲಾ ಜಿಲ್ಲೆಗೂ ಅನ್ವಯಿಸಲ್ಲ..! ನಿರ್ಬಂಧ ಸಡಿಲಿಕೆಯಾದ್ರೂ 8 ಜಿಲ್ಲೆಯ ಜನ ಮನೆಯಲ್ಲೇ ಇರಬೇಕು ಕಂಟೇನ್‌ಮೆಂಟ್‌ ಜೋನ್‌ನಲ್ಲಿರೋರಿಗೆ ಈ ವಿನಾಯಿತಿ ಸಿಗಲ್ಲ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್‌ ಕಲಬುರಗಿ, ಬಾಗಲಕೋಟೆ, ಧಾರವಾಡದಲ್ಲಿ ಲಾಕ್‌ಡೌನ್‌ ಮುಂದುವರಿಕೆ ಬೆಂಗಳೂರಿನಲ್ಲಿ 30 ವಾರ್ಡ್‌ಗಳು […]

ಯಾವ ಕ್ಷೇತ್ರಗಳು ಕಾರ್ಯಗತವಾಗಲಿವೆ? ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ
ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: Apr 18, 2020 | 4:58 PM

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್​ಡೌನ್ 2.0 ಜಾರಿಯಲ್ಲಿರುವಾಗ ಸೋಮವಾರದಿಂದ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ. ಯಾವ ಕ್ಷೇತ್ರಗಳು ಕಾರ್ಯಗತವಾಗಬಹುದು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಖ್ಯಾಂಶಗಳು ಹೀಗಿವೆ:

ತರಾತುರಿಯ ಲಾಕ್‌ಡೌನ್‌ ಸಡಿಲಿಕೆ ಎಲ್ಲಾ ಜಿಲ್ಲೆಗೂ ಅನ್ವಯಿಸಲ್ಲ..!

ನಿರ್ಬಂಧ ಸಡಿಲಿಕೆಯಾದ್ರೂ 8 ಜಿಲ್ಲೆಯ ಜನ ಮನೆಯಲ್ಲೇ ಇರಬೇಕು

ಕಂಟೇನ್‌ಮೆಂಟ್‌ ಜೋನ್‌ನಲ್ಲಿರೋರಿಗೆ ಈ ವಿನಾಯಿತಿ ಸಿಗಲ್ಲ

ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್‌

ಕಲಬುರಗಿ, ಬಾಗಲಕೋಟೆ, ಧಾರವಾಡದಲ್ಲಿ ಲಾಕ್‌ಡೌನ್‌ ಮುಂದುವರಿಕೆ

ಬೆಂಗಳೂರಿನಲ್ಲಿ 30 ವಾರ್ಡ್‌ಗಳು ಕಂಟೇನ್ಮೆಂಟ್‌ ಜೋನ್‌ಗಳಾಗಿ ಫಿಕ್ಸ್ ಆಗಿವೆ ಬೆಂಗಳೂರಿನಲ್ಲಿ ಒಟ್ಟು ೩೨ ಕಂಟೇನ್ಮೆಂಟ್ ರಚಿಸಲಾಗಿದೆ

ಉಳಿದ ಎಂಟು ಜಿಲ್ಲೆಗಳ ಹಾಟ್‌ಸ್ಪಾಟ್ ಗಳು ಮುಂದುವರಿಯುತ್ತದೆ

ಮದ್ಯ ಮಾರಾಟ ಮೇ ೩ರ ನಂತರ ಯೋಚಿಸುತ್ತೇವೆ

ಕಟ್ಟಡ ಕಾರ್ಮಿಕರಿಗೆ ಅವಕಾಶ ನೀಡಲಾಗುತ್ತದೆ

ಕಂಟೇನ್ಮೆಂಟ್‌ ಜೋನ್‌ಗಳಾಗಿ ಫಿಕ್ಸ್ ಆಗಿರುವ ವಾರ್ಡ್‌ಗಳಿಗೆ ವಿನಾಯಿತಿ ಇಲ್ಲ

ಲಾಕ್‌ಡೌನ್‌ ರೂಲ್ಸ್‌ನಲ್ಲಿ ಈ 30 ವಾರ್ಡ್‌ಗಳಿಗೆ ಯಾವುದೇ ವಿನಾಯಿತಿ ಇಲ್ಲ

ಕೇಂದ್ರ ಸರ್ಕಾರ ಜಿಲ್ಲೆಗಳನ್ನ 3 ಭಾಗಗಳಾಗಿ ವಿಂಗಡಿಸಿದೆ

ರೆಡ್‌ ಜೋನ್‌ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿ

ರೆಡ್‌ ಜೋನ್‌ ಜಿಲ್ಲೆಗಳಲ್ಲಿ ಹೆಚ್ಚಿನ ಪಾಸಿಟಿವ್ ಕೇಸ್‌ ಪತ್ತೆ

ರೆಡ್‌ ಜೋನ್‌ ಜಿಲ್ಲೆಗಳಲ್ಲಿ 14 ದಿನ ಹೊಸ ಕೇಸ್‌ ಪತ್ತೆಯಾಗಬಾರದು

ಹೊಸ ಕೇಸ್‌ ಪತ್ತೆಯಾಗದಿದ್ರೆ ಕಂಟೇನ್ಮೆಂಟ್‌ ಕಾರ್ಯತಂತ್ರ ಯಶಸ್ವಿ

ಬಳಿಕ 14 ದಿನಗಳ ಕಾಲ ಹೊಸ ಪಾಸಿಟಿವ್‌ ಪ್ರಕರಣ ಪತ್ತೆಯಾಗಬಾರದು.

28 ದಿನ ಹೊಸ ಕೇಸ್‌ ಪತ್ತೆಯಾಗದಿದ್ರೆ ಯೆಲ್ಲೋ ಜೋನ್‌ಗೆ ಸೇರ್ಪಡೆ

ಇದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿ

ರೆಡ್‌ ಜೋನ್‌ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವಂತಿಲ್ಲ

ಮೋದಿ ಕೂಡ ತಮ್ಮ ಭಾಷಣದಲ್ಲಿ ಇದನ್ನೇ ಸ್ಪಷ್ಟವಾಗಿ ಹೇಳಿದ್ದಾರೆ

Published On - 4:52 pm, Sat, 18 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us