ಚಿಕ್ಕಬಳ್ಳಾಪುರ: ಬಯಲು ಬರ್ಹಿದೆಸೆಗೆ ಹೋಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗಾಗಿ ಹುಡುಕಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 8:02 PM

ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಯಲು ಬರ್ಹಿದೆಸೆಗೆಂದು ಮಹಿಳೆಯೊಬ್ಬರು ಮನೆಯಿಂದ ಆಚೆ ಹೋಗಿದ್ದರು. ಅದನ್ನು ಗಮನಿಸಿದ ಗ್ರಾಮದ ವ್ಯಕ್ತಿಯೋರ್ವ ಮಾನವೀಯತೆಯಿಲ್ಲದೆ ಮೃಗದಂತೆ ವರ್ತಿಸಿ ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ಬಯಲು ಬರ್ಹಿದೆಸೆಗೆ ಹೋಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗಾಗಿ ಹುಡುಕಾಟ
ಪ್ರಾತಿನಿಧಿಕ ಚಿತ್ರ
Follow us on

ಚಿಕ್ಕಬಳ್ಳಾಪುರ, ಸೆ.03: ಬಯಲು ಬರ್ಹಿದೆಸೆಗೆಂದು ಮಹಿಳೆಯೊಬ್ಬರು ಮನೆಯಿಂದ ಆಚೆ ಹೋಗಿದ್ದರು. ಅದನ್ನು ಗಮನಿಸಿದ ಗ್ರಾಮದ ವ್ಯಕ್ತಿಯೋರ್ವ ಮಾನವೀಯತೆಯಿಲ್ಲದೆ ಮೃಗದಂತೆ ವರ್ತಿಸಿ ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಚಿಕ್ಕಬಳ್ಳಾಫುರ (Chikkaballapur) ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 32 ವರ್ಷದ ಗೃಹಿಣಿ ಸಂಜೆ 5ಗಂಟೆ ಸಮಯದಲ್ಲಿ ಊರಾಚೆ ಇರುವ ರಸ್ತೆ ಬದಿ ಬಯಲು ಬರ್ಹಿದೆಶೆಗೆ ಹೋಗಿದ್ದಳು. ಆಗ ಪರಿಚಿತ ವ್ಯಕ್ತಿ ಮಹಿಳೆಯನ್ನು ನೋಡಿದ್ದೇ ತಡ ಕಿಚಕನಂತೆ ಮಹಿಳೆಯ ಸೀರೆಯನ್ನು ಎಳೆದಾಡಿ ಆಕೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾನೆ.

ಪೊಲೀಸರಿಗೆ ದೂರು ನೀಡಿದ ನೊಂದ ಮಹಿಳೆ

ಇನ್ನು ಈ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ರೂ ಆಕೆಯನ್ನು ಗಟ್ಟಿಯಾಗಿ ಹಿಡಿದು ಎಳೆದಾಡಿ ವಿಕೃತಿ ಮೆರೆದು ಮಾನಭಂಗ ಮಾಡಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ದಾರಿಹೋಕರು ಬರುತ್ತಿರುವುದನ್ನು ಗಮನಿಸಿದ ಪರಿಚಿತ ವ್ಯಕ್ತಿ, ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 341, 354(ಬಿ) 504, 506 ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:Tumakuru News: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 10 ವರ್ಷ ಜೈಲು, 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ಮೇಕೆ ಮೇಲೆ ಅತ್ಯಾಚಾರ ನಡೆಸಿದ ಆರೋಪ; ಠಾಣೆಗೆ ದೂರು

ರಾಮನಗರ: ಮನುಷ್ಯನ ವಿಕೃತಿ ಮೀತಿಮಿರಿದೆ. ಹೌದು, ಮೇಕೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜಮೀರ್ ಖಾನ್ ಎಂಬುವವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಈ ಘಟನೆ ಚನ್ನಪಟ್ಟಣದ ಇಂದಿರಾ ಕಾಟೇಜ್‌ನಲ್ಲಿ ನಡೆದಿದ್ದು, ರೋಹಿದ್ (25) ಎಂಬಾತ ಮೇಕೆ‌ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಇತ ಪ್ರತಿದಿನ ಬಂದು ಮೇಕೆ ಕೊಂಡೊಯ್ಯುತ್ತಿದ್ದನಂತೆ. ಹೀಗೆ ರೋಹಿದ್ ಹಿಂಬಾಲಿಸಿ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಜೊತೆಗೆ ಮೇಕೆ ಮೇಲೆ ಅತ್ಯಾಚಾರ ಮಾಡುವ ವಿಡಿಯೋ ಕೂಡ ಜಮೀರ್ ಸೆರೆ ಹಿಡಿದಿದ್ದು, ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ