AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ. ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ […]

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ
ಸಾಧು ಶ್ರೀನಾಥ್​
|

Updated on: Apr 27, 2020 | 12:04 PM

Share

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ.

ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ ಬಿದ್ದಿದ್ದಾರೆ. ಯಾರೋ ಕೊಟ್ಟಿದ ಊಟ ತಿಂದು ಹೊಟ್ಟೆ ಗಟ್ಟಿ ಮಡ್ಕೊಳ್ತಿದ್ರು ಆದ್ರೆ, ಕೈಯೆತ್ತಿ ಕೊಡುತ್ತಿದ್ದ ಮನಸುಗಳು ಮನೆಯಲ್ಲಿ ಕೂತಿದ್ದಾ ಅನ್ನಕ್ಕೂ ಕತ್ತರಿ ಬಿತ್ತು. ಆದರೆ ಈಗ ಇಂತವರ ನೆರವಿಗೆ ಒಂದು ತಂಡ ಮುಂದಾಗಿದೆ.

ಬೀದಿಗೆ ಬಿದ್ದ ಜೀವಗಳಿಗೆ ಯುವಕರ ತಂಡ ಸಹಾಯ ಹಸ್ತ! ಲಾಕ್​​ಡೌನ್ ಆದ ನಂತರ ಕಳೆದೊಂದು ತಿಂಗಳಿಂದ 47ಕ್ಕೂ ಹೆಚ್ಚು ನಿರಾಶ್ರಿತರಿಗೆ ಚಿಕ್ಕಮಗಳೂರು ಜಿಲ್ಲೆಯ ಎಐಟಿ ವೃತ್ತದಲ್ಲಿರೋ ನಿರಾಶ್ರಿತ ಕೇಂದ್ರದಲ್ಲಿ ಬದಕನ್ನ ಕಟ್ಟಿಕೊಡಲಾಗಿದೆ. ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಹಿರಿಯ ಜೀವಗಳನ್ನ ಯುವಕರ ತಂಡ ಕೈ ಹಿಡಿದು ಮೇಲೆತ್ತಿದೆ. ಪ್ರತಿಯೊಬ್ಬರಿಗೂ ಕೆಲಸ ನೀಡಲಾಗಿದ್ದು ನಿರಾಶ್ರಿತರ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಅವರವರ ಕಾಲಮೇಲೆ ನಿಲ್ಲುವಂತೆ ಮಾಡಿದ್ದಾರೆ.

ಈ ನಿರಾಶ್ರಿತ ಕೇಂದ್ರದಲ್ಲಿದ್ದ 50 ಜನರ ಪೈಕಿ ಇಬ್ಬರು ಬುದ್ಧಿಮಾಂಧ್ಯರು ನಾಪತ್ತೆಯಾಗಿದ್ದಾರೆ. ಒಬ್ಬರು ಅನಾರೋಗ್ಯಿದಿಂದ ಆಸ್ಪತ್ರೆ ಸೇರಿದ್ದಾರೆ. ಈಗ ಇಲ್ಲಿರೋ 47 ಜನರಿಗೆ ಗಾರೆ ಕೆಲಸ, ಎಲೆಕ್ಟ್ರಿಕ್ ಕೆಲಸ, ವಾದ್ಯ ನುಡಿಸೋರು, ಫ್ಲಂಬರ್, ಟೈಲರ್, ಚಿಪ್ಸ್ ಮಾಡೋರು ಸೇರಿ ನುರಿತ ಕೆಲಸಗಾರರಿದ್ದಾರೆ.

ದೈಹಿಕವಾಗಿ ಸದೃಢವಾಗಿಯೂ ಇದ್ದಾರೆ. ಹೀಗಾಗಿ ಯುವಕರ ಸಹಾಹಸ್ತ ತಂಡ ನಿರ್ಗತಿಕರಿಗೆ ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಮತ್ತೆ ಬೀದಿಗೆ ಬಂದು ಭಿಕ್ಷೆ ಬೇಡುವುದು ಕಂಡು ಬಂದರೆ ಜೈಲಿಗೆ ಹಾಕ್ತಾರೆಂದು ತಿಳುವಳಿಕೆ ನೀಡಿದ್ದಾರೆ.

ಒಟ್ಟಾರೆ, ಇಷ್ಟು ದಿನ ಬೇರೆಯವರನ್ನೇ ನಂಬಿಕೊಂಡು ಕೈಚಾಚುತ್ತಿದ್ದ ಜೀವಗಳು ಖುಷಿಯಾಗಿವೆ. ಲಾಕ್​ಡೌನ್​ ಅನ್ನೋ ಲಾಕಪ್​​ನಲ್ಲಿ ಸಿಲುಕ್ಕಿದ್ದೋರು ತಮ್ಮದೇ ಕೆಲಸ ಮಾಡುತ್ತಾ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಕಣ್ಣೀರಲ್ಲಿ ಕೈತೊಳೆಯುತ್ತಿರದ್ದೋರಿಗೆ ನೆರವಾದ ಯುವಕ ತಂಡಕ್ಕೊಂದು ಹ್ಯಾಟ್ಸ್ ಆಫ್ https://www.facebook.com/Tv9Kannada/videos/675422006556184/

Follow Us
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ