AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ. ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ […]

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ
ಸಾಧು ಶ್ರೀನಾಥ್​
|

Updated on: Apr 27, 2020 | 12:04 PM

Share

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ.

ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ ಬಿದ್ದಿದ್ದಾರೆ. ಯಾರೋ ಕೊಟ್ಟಿದ ಊಟ ತಿಂದು ಹೊಟ್ಟೆ ಗಟ್ಟಿ ಮಡ್ಕೊಳ್ತಿದ್ರು ಆದ್ರೆ, ಕೈಯೆತ್ತಿ ಕೊಡುತ್ತಿದ್ದ ಮನಸುಗಳು ಮನೆಯಲ್ಲಿ ಕೂತಿದ್ದಾ ಅನ್ನಕ್ಕೂ ಕತ್ತರಿ ಬಿತ್ತು. ಆದರೆ ಈಗ ಇಂತವರ ನೆರವಿಗೆ ಒಂದು ತಂಡ ಮುಂದಾಗಿದೆ.

ಬೀದಿಗೆ ಬಿದ್ದ ಜೀವಗಳಿಗೆ ಯುವಕರ ತಂಡ ಸಹಾಯ ಹಸ್ತ! ಲಾಕ್​​ಡೌನ್ ಆದ ನಂತರ ಕಳೆದೊಂದು ತಿಂಗಳಿಂದ 47ಕ್ಕೂ ಹೆಚ್ಚು ನಿರಾಶ್ರಿತರಿಗೆ ಚಿಕ್ಕಮಗಳೂರು ಜಿಲ್ಲೆಯ ಎಐಟಿ ವೃತ್ತದಲ್ಲಿರೋ ನಿರಾಶ್ರಿತ ಕೇಂದ್ರದಲ್ಲಿ ಬದಕನ್ನ ಕಟ್ಟಿಕೊಡಲಾಗಿದೆ. ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಹಿರಿಯ ಜೀವಗಳನ್ನ ಯುವಕರ ತಂಡ ಕೈ ಹಿಡಿದು ಮೇಲೆತ್ತಿದೆ. ಪ್ರತಿಯೊಬ್ಬರಿಗೂ ಕೆಲಸ ನೀಡಲಾಗಿದ್ದು ನಿರಾಶ್ರಿತರ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಅವರವರ ಕಾಲಮೇಲೆ ನಿಲ್ಲುವಂತೆ ಮಾಡಿದ್ದಾರೆ.

ಈ ನಿರಾಶ್ರಿತ ಕೇಂದ್ರದಲ್ಲಿದ್ದ 50 ಜನರ ಪೈಕಿ ಇಬ್ಬರು ಬುದ್ಧಿಮಾಂಧ್ಯರು ನಾಪತ್ತೆಯಾಗಿದ್ದಾರೆ. ಒಬ್ಬರು ಅನಾರೋಗ್ಯಿದಿಂದ ಆಸ್ಪತ್ರೆ ಸೇರಿದ್ದಾರೆ. ಈಗ ಇಲ್ಲಿರೋ 47 ಜನರಿಗೆ ಗಾರೆ ಕೆಲಸ, ಎಲೆಕ್ಟ್ರಿಕ್ ಕೆಲಸ, ವಾದ್ಯ ನುಡಿಸೋರು, ಫ್ಲಂಬರ್, ಟೈಲರ್, ಚಿಪ್ಸ್ ಮಾಡೋರು ಸೇರಿ ನುರಿತ ಕೆಲಸಗಾರರಿದ್ದಾರೆ.

ದೈಹಿಕವಾಗಿ ಸದೃಢವಾಗಿಯೂ ಇದ್ದಾರೆ. ಹೀಗಾಗಿ ಯುವಕರ ಸಹಾಹಸ್ತ ತಂಡ ನಿರ್ಗತಿಕರಿಗೆ ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಮತ್ತೆ ಬೀದಿಗೆ ಬಂದು ಭಿಕ್ಷೆ ಬೇಡುವುದು ಕಂಡು ಬಂದರೆ ಜೈಲಿಗೆ ಹಾಕ್ತಾರೆಂದು ತಿಳುವಳಿಕೆ ನೀಡಿದ್ದಾರೆ.

ಒಟ್ಟಾರೆ, ಇಷ್ಟು ದಿನ ಬೇರೆಯವರನ್ನೇ ನಂಬಿಕೊಂಡು ಕೈಚಾಚುತ್ತಿದ್ದ ಜೀವಗಳು ಖುಷಿಯಾಗಿವೆ. ಲಾಕ್​ಡೌನ್​ ಅನ್ನೋ ಲಾಕಪ್​​ನಲ್ಲಿ ಸಿಲುಕ್ಕಿದ್ದೋರು ತಮ್ಮದೇ ಕೆಲಸ ಮಾಡುತ್ತಾ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಕಣ್ಣೀರಲ್ಲಿ ಕೈತೊಳೆಯುತ್ತಿರದ್ದೋರಿಗೆ ನೆರವಾದ ಯುವಕ ತಂಡಕ್ಕೊಂದು ಹ್ಯಾಟ್ಸ್ ಆಫ್ https://www.facebook.com/Tv9Kannada/videos/675422006556184/

Follow Us
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!
ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು
ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು
ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ಒಂದು ವಾರದೊಳಗೆ ಈ ಕೆಲಸ ಮಾಡಿ!
ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ಒಂದು ವಾರದೊಳಗೆ ಈ ಕೆಲಸ ಮಾಡಿ!
ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!
ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!
ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ!
ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ!
‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!