AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ. ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ […]

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ
ಸಾಧು ಶ್ರೀನಾಥ್​
|

Updated on: Apr 27, 2020 | 12:04 PM

Share

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ.

ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ ಬಿದ್ದಿದ್ದಾರೆ. ಯಾರೋ ಕೊಟ್ಟಿದ ಊಟ ತಿಂದು ಹೊಟ್ಟೆ ಗಟ್ಟಿ ಮಡ್ಕೊಳ್ತಿದ್ರು ಆದ್ರೆ, ಕೈಯೆತ್ತಿ ಕೊಡುತ್ತಿದ್ದ ಮನಸುಗಳು ಮನೆಯಲ್ಲಿ ಕೂತಿದ್ದಾ ಅನ್ನಕ್ಕೂ ಕತ್ತರಿ ಬಿತ್ತು. ಆದರೆ ಈಗ ಇಂತವರ ನೆರವಿಗೆ ಒಂದು ತಂಡ ಮುಂದಾಗಿದೆ.

ಬೀದಿಗೆ ಬಿದ್ದ ಜೀವಗಳಿಗೆ ಯುವಕರ ತಂಡ ಸಹಾಯ ಹಸ್ತ! ಲಾಕ್​​ಡೌನ್ ಆದ ನಂತರ ಕಳೆದೊಂದು ತಿಂಗಳಿಂದ 47ಕ್ಕೂ ಹೆಚ್ಚು ನಿರಾಶ್ರಿತರಿಗೆ ಚಿಕ್ಕಮಗಳೂರು ಜಿಲ್ಲೆಯ ಎಐಟಿ ವೃತ್ತದಲ್ಲಿರೋ ನಿರಾಶ್ರಿತ ಕೇಂದ್ರದಲ್ಲಿ ಬದಕನ್ನ ಕಟ್ಟಿಕೊಡಲಾಗಿದೆ. ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಹಿರಿಯ ಜೀವಗಳನ್ನ ಯುವಕರ ತಂಡ ಕೈ ಹಿಡಿದು ಮೇಲೆತ್ತಿದೆ. ಪ್ರತಿಯೊಬ್ಬರಿಗೂ ಕೆಲಸ ನೀಡಲಾಗಿದ್ದು ನಿರಾಶ್ರಿತರ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಅವರವರ ಕಾಲಮೇಲೆ ನಿಲ್ಲುವಂತೆ ಮಾಡಿದ್ದಾರೆ.

ಈ ನಿರಾಶ್ರಿತ ಕೇಂದ್ರದಲ್ಲಿದ್ದ 50 ಜನರ ಪೈಕಿ ಇಬ್ಬರು ಬುದ್ಧಿಮಾಂಧ್ಯರು ನಾಪತ್ತೆಯಾಗಿದ್ದಾರೆ. ಒಬ್ಬರು ಅನಾರೋಗ್ಯಿದಿಂದ ಆಸ್ಪತ್ರೆ ಸೇರಿದ್ದಾರೆ. ಈಗ ಇಲ್ಲಿರೋ 47 ಜನರಿಗೆ ಗಾರೆ ಕೆಲಸ, ಎಲೆಕ್ಟ್ರಿಕ್ ಕೆಲಸ, ವಾದ್ಯ ನುಡಿಸೋರು, ಫ್ಲಂಬರ್, ಟೈಲರ್, ಚಿಪ್ಸ್ ಮಾಡೋರು ಸೇರಿ ನುರಿತ ಕೆಲಸಗಾರರಿದ್ದಾರೆ.

ದೈಹಿಕವಾಗಿ ಸದೃಢವಾಗಿಯೂ ಇದ್ದಾರೆ. ಹೀಗಾಗಿ ಯುವಕರ ಸಹಾಹಸ್ತ ತಂಡ ನಿರ್ಗತಿಕರಿಗೆ ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಮತ್ತೆ ಬೀದಿಗೆ ಬಂದು ಭಿಕ್ಷೆ ಬೇಡುವುದು ಕಂಡು ಬಂದರೆ ಜೈಲಿಗೆ ಹಾಕ್ತಾರೆಂದು ತಿಳುವಳಿಕೆ ನೀಡಿದ್ದಾರೆ.

ಒಟ್ಟಾರೆ, ಇಷ್ಟು ದಿನ ಬೇರೆಯವರನ್ನೇ ನಂಬಿಕೊಂಡು ಕೈಚಾಚುತ್ತಿದ್ದ ಜೀವಗಳು ಖುಷಿಯಾಗಿವೆ. ಲಾಕ್​ಡೌನ್​ ಅನ್ನೋ ಲಾಕಪ್​​ನಲ್ಲಿ ಸಿಲುಕ್ಕಿದ್ದೋರು ತಮ್ಮದೇ ಕೆಲಸ ಮಾಡುತ್ತಾ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಕಣ್ಣೀರಲ್ಲಿ ಕೈತೊಳೆಯುತ್ತಿರದ್ದೋರಿಗೆ ನೆರವಾದ ಯುವಕ ತಂಡಕ್ಕೊಂದು ಹ್ಯಾಟ್ಸ್ ಆಫ್ https://www.facebook.com/Tv9Kannada/videos/675422006556184/

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ