AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ. ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ […]

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ
ಸಾಧು ಶ್ರೀನಾಥ್​
|

Updated on: Apr 27, 2020 | 12:04 PM

Share

ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್​ಡೌನ್​ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ.

ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ ಬಿದ್ದಿದ್ದಾರೆ. ಯಾರೋ ಕೊಟ್ಟಿದ ಊಟ ತಿಂದು ಹೊಟ್ಟೆ ಗಟ್ಟಿ ಮಡ್ಕೊಳ್ತಿದ್ರು ಆದ್ರೆ, ಕೈಯೆತ್ತಿ ಕೊಡುತ್ತಿದ್ದ ಮನಸುಗಳು ಮನೆಯಲ್ಲಿ ಕೂತಿದ್ದಾ ಅನ್ನಕ್ಕೂ ಕತ್ತರಿ ಬಿತ್ತು. ಆದರೆ ಈಗ ಇಂತವರ ನೆರವಿಗೆ ಒಂದು ತಂಡ ಮುಂದಾಗಿದೆ.

ಬೀದಿಗೆ ಬಿದ್ದ ಜೀವಗಳಿಗೆ ಯುವಕರ ತಂಡ ಸಹಾಯ ಹಸ್ತ! ಲಾಕ್​​ಡೌನ್ ಆದ ನಂತರ ಕಳೆದೊಂದು ತಿಂಗಳಿಂದ 47ಕ್ಕೂ ಹೆಚ್ಚು ನಿರಾಶ್ರಿತರಿಗೆ ಚಿಕ್ಕಮಗಳೂರು ಜಿಲ್ಲೆಯ ಎಐಟಿ ವೃತ್ತದಲ್ಲಿರೋ ನಿರಾಶ್ರಿತ ಕೇಂದ್ರದಲ್ಲಿ ಬದಕನ್ನ ಕಟ್ಟಿಕೊಡಲಾಗಿದೆ. ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಹಿರಿಯ ಜೀವಗಳನ್ನ ಯುವಕರ ತಂಡ ಕೈ ಹಿಡಿದು ಮೇಲೆತ್ತಿದೆ. ಪ್ರತಿಯೊಬ್ಬರಿಗೂ ಕೆಲಸ ನೀಡಲಾಗಿದ್ದು ನಿರಾಶ್ರಿತರ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಅವರವರ ಕಾಲಮೇಲೆ ನಿಲ್ಲುವಂತೆ ಮಾಡಿದ್ದಾರೆ.

ಈ ನಿರಾಶ್ರಿತ ಕೇಂದ್ರದಲ್ಲಿದ್ದ 50 ಜನರ ಪೈಕಿ ಇಬ್ಬರು ಬುದ್ಧಿಮಾಂಧ್ಯರು ನಾಪತ್ತೆಯಾಗಿದ್ದಾರೆ. ಒಬ್ಬರು ಅನಾರೋಗ್ಯಿದಿಂದ ಆಸ್ಪತ್ರೆ ಸೇರಿದ್ದಾರೆ. ಈಗ ಇಲ್ಲಿರೋ 47 ಜನರಿಗೆ ಗಾರೆ ಕೆಲಸ, ಎಲೆಕ್ಟ್ರಿಕ್ ಕೆಲಸ, ವಾದ್ಯ ನುಡಿಸೋರು, ಫ್ಲಂಬರ್, ಟೈಲರ್, ಚಿಪ್ಸ್ ಮಾಡೋರು ಸೇರಿ ನುರಿತ ಕೆಲಸಗಾರರಿದ್ದಾರೆ.

ದೈಹಿಕವಾಗಿ ಸದೃಢವಾಗಿಯೂ ಇದ್ದಾರೆ. ಹೀಗಾಗಿ ಯುವಕರ ಸಹಾಹಸ್ತ ತಂಡ ನಿರ್ಗತಿಕರಿಗೆ ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಮತ್ತೆ ಬೀದಿಗೆ ಬಂದು ಭಿಕ್ಷೆ ಬೇಡುವುದು ಕಂಡು ಬಂದರೆ ಜೈಲಿಗೆ ಹಾಕ್ತಾರೆಂದು ತಿಳುವಳಿಕೆ ನೀಡಿದ್ದಾರೆ.

ಒಟ್ಟಾರೆ, ಇಷ್ಟು ದಿನ ಬೇರೆಯವರನ್ನೇ ನಂಬಿಕೊಂಡು ಕೈಚಾಚುತ್ತಿದ್ದ ಜೀವಗಳು ಖುಷಿಯಾಗಿವೆ. ಲಾಕ್​ಡೌನ್​ ಅನ್ನೋ ಲಾಕಪ್​​ನಲ್ಲಿ ಸಿಲುಕ್ಕಿದ್ದೋರು ತಮ್ಮದೇ ಕೆಲಸ ಮಾಡುತ್ತಾ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಕಣ್ಣೀರಲ್ಲಿ ಕೈತೊಳೆಯುತ್ತಿರದ್ದೋರಿಗೆ ನೆರವಾದ ಯುವಕ ತಂಡಕ್ಕೊಂದು ಹ್ಯಾಟ್ಸ್ ಆಫ್ https://www.facebook.com/Tv9Kannada/videos/675422006556184/

Follow Us
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?