
ಬೆಳಗಾವಿ: ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದಕ್ಕೆ ಬೆಳಗಾವಿಯ ಸ್ಥಳೀಯ ಮರಾಠ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪಗೆ ಸನ್ಮಾನ ಮಾಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬೆಳಗಾವಿಗೆ ತೆರಳಿದ್ದ ಯಡಿಯೂರಪ್ಪಗೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಸನ್ಮಾನ ನಡೆದಿದೆ. ಮರಾಠ ಮುಖಂಡರು ಶಾಲು ಹೊದಿಸಿ, ಛತ್ರಪತಿ ಶಿವಾಜಿ ಮೂರ್ತಿ ನೀಡಿ ಸನ್ಮಾನಿಸಿದ್ದಾರೆ.
ಬಂದ್ ನಡೆದ ಬೆನ್ನಲ್ಲೇ ಈ ಸನ್ಮಾನ
ಇಂದು ಮರಾಠ ಅಭಿವೃದ್ಧಿ ನಿಗಮ ರಚಿಸಿದ್ದಕ್ಕಾಗಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಹಲವೆಡೆ ಹೋರಾಟ ನಡೆಸಿದ್ದವು. ಈ ನಡುವೆ ಸಿಎಂ ಮರಾಠ ಮುಖಂಡರ ಸನ್ಮಾನ ಸ್ವೀಕರಿಸಿದ್ದು, ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ತೋರಿದೆ.
ಕರ್ನಾಟಕ ಬಂದ್ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ
Published On - 6:40 pm, Sat, 5 December 20