ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು

ಒಂದು ಕೆ.ಜಿ. ದಪ್ಪ ಮಣಸಿನಕಾಯಿ 5 ರೂಪಾಯಿಗೆ ಬಿಕರಿಯಾಗುತ್ತಿರುವ ಹಿನ್ನೆಲೆ ಬೇಸತ್ತು ಬೆಳೆ‌ ನಾಶ ಮಾಡಿರುವುದಾಗಿ ರೈತ ಅಂಬರೀಶ್ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಅವರು ಆಗ್ರಹಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು
ಸೂಕ್ತ ಬೆಲೆ ಸಿಗದ ಹಿನ್ನೆಲೆ ದಪ್ಪ ಮಣಸಿನಕಾಯಿ ಬೆಳೆ ನಾಶ
ಸಾಧು ಶ್ರೀನಾಥ್​

Updated on: Apr 27, 2021 | 10:36 AM

ಕೋಲಾರ: ಸೂಕ್ತ ಬೆಲೆ ಸಿಗದ ಹಿನ್ನೆಲೆ ಉರಟಿ ಅಗ್ರಹಾರದಲ್ಲಿ ದಪ್ಪ ಮಣಸಿನಕಾಯಿ ಕ್ಯಾಪ್ಸಿಕಂ (capsicum)  ಬೆಳೆಯನ್ನು ರೈತರು ನಾಶ ಮಾಡಿದ್ದಾರೆ. ಕೋಲಾರ ತಾಲೂಕಿನ ಉರಟಿ ಅಗ್ರಹಾರ ಗ್ರಾಮದ ಅಂಬರೀಶ್ ಎಂಬುವರಿಗೆ ಸೇರಿದ ಕ್ಯಾಪ್ಸಿಕಂ ಬೆಳೆ ಇದಾಗಿದೆ.

ಮಹಾಮಾರಿ‌ ಕೊರೊನಾ ಆತಂಕದಿಂದ ಲಾಕ್ ಡೌನ್ ಹಿನ್ನೆಲೆ ಬೆಲೆ ಕಳೆದುಕೊಂಡ ಕ್ಯಾಪ್ಸಿಕಂ ಬೆಳೆಯನ್ನು ರೈತರು ದಪ್ಪ ಮಣಸಿನಕಾಯಿ ಗಿಡಗಳನ್ನು ಕಿತ್ತುಹಾಕಿದ್ದಾರೆ.  ರೈತ ಅಂಬರೀಶ್ ಸುಮಾರು‌ ಒಂದೂವರೆ ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದರು.

ರೈತ ಅಂಬರೀಶ್ ಸುಮಾರು‌ ಒಂದೂವರೆ ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದರು

ಒಂದು ಕೆ.ಜಿ. ದಪ್ಪ ಮಣಸಿನಕಾಯಿ 5 ರೂಪಾಯಿಗೆ ಬಿಕರಿಯಾಗುತ್ತಿರುವ ಹಿನ್ನೆಲೆ ಬೇಸತ್ತು ಬೆಳೆ‌ ನಾಶ ಮಾಡಿರುವುದಾಗಿ ರೈತ ಅಂಬರೀಶ್ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ: 
Horoscope – ದಿನ ಭವಿಷ್ಯ; ಮಿಥುನ ರಾಶಿಯವರಿಗೆ ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ

(covid curfew loss urati agrahara farmer in kolar taluk destroys capsicum crop)

Published On - 10:33 am, Tue, 27 April 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us