AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

​​ಶಿರಚ್ಛೇದ ಮಾಡಿದ ರೀತಿಯಲ್ಲಿ ಹಸುವಿನ ಕರು ಪತ್ತೆ: ಚಿರತೆ ದಾಳಿಯೋ? ದುಷ್ಕೃತ್ಯವೋ?

​​ಶಿರಚ್ಛೇದ ಮಾಡಿದ ರೀತಿಯಲ್ಲಿ ಹಸುವಿನ ಕರು ಪತ್ತೆ: ಚಿರತೆ ದಾಳಿಯೋ? ದುಷ್ಕೃತ್ಯವೋ?

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಪ್ರಸನ್ನ ಹೆಗಡೆ|

Updated on:Dec 01, 2025 | 3:43 PM

Share

ಗದಗ ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಹಸು ಕರುವಿನ ಮೃತದೇಹ ಪತ್ತೆಯಾಗಿದೆ. ಶಿರಚ್ಛೇದ ಮಾಡಿರುವ ರೀತಿಯಲ್ಲಿ ಕರು ಪತ್ತೆಯಾಗಿದ್ದು, ಘಟನೆ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿರತೆ ದಾಳಿಯಿಂದ ಹಸು ಮೃತಪಟ್ಟಿದೆಯೋ? ಅಥವಾ ದುಷ್ಟರು ನಡೆಸಿರುವ ಅಟ್ಟಹಾಸವೋ? ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.

ಗದಗ, ಡಿಸೆಂಬರ್ 01: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ​​ಶಿರಚ್ಛೇದ ಮಾಡಿದ ರೀತಿಯಲ್ಲಿ ಹಸುವಿನ ಕರು ಪತ್ತೆಯಾಗಿದೆ. ಘಟನೆ ಬೆನ್ನಲ್ಲೇ ಇದು ಚಿರತೆ ದಾಳಿಯಾಗಿರಬಹುದು ಎಂದು ಅಂದಾಜಿಲಾಗಿತ್ತು. ಆದರೆ, ಹಸುವಿನ ಕರು ತಲೆ ಕಡಿದು ಚೀಲದಲ್ಲಿ ತುಂಬಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಎಸಿದಿರುವ ಬಗ್ಗೆಯೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಕರುವಿನ ಮೃತದೇಹ ಪತ್ತೆಯಾಗಿದ್ದು, ಘಟನೆಗೆ ಕಾರಣ ಏನೆಂದು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 01, 2025 03:41 PM