17 ವರ್ಷ ಹಿಂದೆ ಸೈಕಲ್ ಕದ್ದು ಪರಾರಿಯಾಗಿದ್ದ ರಾಮಕುಮಾರ ಪತ್ತೆ

ರಾಯಚೂರು: ಸೈಕಲ್ ಕದ್ದು ತಲೆಮರೆಸಿಕೊಂಡಿದ್ದ ಕಳ್ಳ 17 ವರ್ಷದ ನಂತರ ಪತ್ತೆಯಾಗಿದ್ದಾನೆ. ನಗರದಲ್ಲಿ 2005ರಲ್ಲಿ ರಾಮಕುಮಾರ ಸೈಕಲ್ ಕದ್ದಿದ್ದ.‌ ಅರಸಿಕೆರೆ ತಾಂಡಾ ನಿವಾಸಿ ರಾಮಕುಮಾರ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಕೊನೆಗೂ ಸದರ ಬಜಾರ್ ಠಾಣೆ ಪೊಲೀಸರು ಆರೋಪಿ ರಾಮಕುಮಾರನನ್ನ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ‌ ಸೆಕ್ಷನ್ 379 ರಡಿ ಕೇಸ್ ದಾಖಲಾಗಿತ್ತು.

17 ವರ್ಷ ಹಿಂದೆ ಸೈಕಲ್ ಕದ್ದು ಪರಾರಿಯಾಗಿದ್ದ ರಾಮಕುಮಾರ ಪತ್ತೆ

Updated on: Dec 21, 2019 | 12:21 PM

ರಾಯಚೂರು: ಸೈಕಲ್ ಕದ್ದು ತಲೆಮರೆಸಿಕೊಂಡಿದ್ದ ಕಳ್ಳ 17 ವರ್ಷದ ನಂತರ ಪತ್ತೆಯಾಗಿದ್ದಾನೆ. ನಗರದಲ್ಲಿ 2005ರಲ್ಲಿ ರಾಮಕುಮಾರ ಸೈಕಲ್ ಕದ್ದಿದ್ದ.‌

ಅರಸಿಕೆರೆ ತಾಂಡಾ ನಿವಾಸಿ ರಾಮಕುಮಾರ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಕೊನೆಗೂ ಸದರ ಬಜಾರ್ ಠಾಣೆ ಪೊಲೀಸರು ಆರೋಪಿ ರಾಮಕುಮಾರನನ್ನ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ‌ ಸೆಕ್ಷನ್ 379 ರಡಿ ಕೇಸ್ ದಾಖಲಾಗಿತ್ತು.

Published On - 12:01 pm, Sat, 21 December 19