17 ವರ್ಷ ಹಿಂದೆ ಸೈಕಲ್ ಕದ್ದು ಪರಾರಿಯಾಗಿದ್ದ ರಾಮಕುಮಾರ ಪತ್ತೆ

ರಾಯಚೂರು: ಸೈಕಲ್ ಕದ್ದು ತಲೆಮರೆಸಿಕೊಂಡಿದ್ದ ಕಳ್ಳ 17 ವರ್ಷದ ನಂತರ ಪತ್ತೆಯಾಗಿದ್ದಾನೆ. ನಗರದಲ್ಲಿ 2005ರಲ್ಲಿ ರಾಮಕುಮಾರ ಸೈಕಲ್ ಕದ್ದಿದ್ದ.‌ ಅರಸಿಕೆರೆ ತಾಂಡಾ ನಿವಾಸಿ ರಾಮಕುಮಾರ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಕೊನೆಗೂ ಸದರ ಬಜಾರ್ ಠಾಣೆ ಪೊಲೀಸರು ಆರೋಪಿ ರಾಮಕುಮಾರನನ್ನ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ‌ ಸೆಕ್ಷನ್ 379 ರಡಿ ಕೇಸ್ ದಾಖಲಾಗಿತ್ತು.

17 ವರ್ಷ ಹಿಂದೆ ಸೈಕಲ್ ಕದ್ದು ಪರಾರಿಯಾಗಿದ್ದ ರಾಮಕುಮಾರ ಪತ್ತೆ
ಸಾಧು ಶ್ರೀನಾಥ್​

Updated on: Dec 21, 2019 | 12:21 PM

ರಾಯಚೂರು: ಸೈಕಲ್ ಕದ್ದು ತಲೆಮರೆಸಿಕೊಂಡಿದ್ದ ಕಳ್ಳ 17 ವರ್ಷದ ನಂತರ ಪತ್ತೆಯಾಗಿದ್ದಾನೆ. ನಗರದಲ್ಲಿ 2005ರಲ್ಲಿ ರಾಮಕುಮಾರ ಸೈಕಲ್ ಕದ್ದಿದ್ದ.‌

ಅರಸಿಕೆರೆ ತಾಂಡಾ ನಿವಾಸಿ ರಾಮಕುಮಾರ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಕೊನೆಗೂ ಸದರ ಬಜಾರ್ ಠಾಣೆ ಪೊಲೀಸರು ಆರೋಪಿ ರಾಮಕುಮಾರನನ್ನ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ‌ ಸೆಕ್ಷನ್ 379 ರಡಿ ಕೇಸ್ ದಾಖಲಾಗಿತ್ತು.

Published On - 12:01 pm, Sat, 21 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us