AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangalore: ಯುಪಿ ಸಿಎಂ ಯೋಗಿ ಆದಿತ್ಯನಾಥ್ ತುರ್ತು ಗಮನಕ್ಕೆ, 2000 ವರ್ಷದ ಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ ಎದುರಾಗಿದೆ ಧಾರ್ಮಿಕ ಸಂಘರ್ಷ!

UP CM Yogi Adityanath: ಕರಾವಳಿಯಲ್ಲಿನ ಜೋಗಿ ಸಮುದಾಯದ ಮಂದಿ ಹಣವನ್ನೆಲ್ಲಾ ಒಟ್ಟು ಮಾಡಿ ದೇವಳದಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಸದ್ಯ ಯೋಗಿ ಆಧಿತ್ಯನಾಥರ ಗುರುಗಳು ಸೇರಿದಂತೆ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದ ಕಾಳಭೈರವ ದೇವರ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು, ಮಠದಲ್ಲಿ ನಮಗೂ ಅವಕಾಶ ನೀಡಬೇಕು ಎಂಬುದು ಶಿಷ್ಯ ವರ್ಗದ ಆಗ್ರಹವಾಗಿದೆ.

ಸಾಧು ಶ್ರೀನಾಥ್​
|

Updated on:Apr 08, 2023 | 1:33 PM

Share

ಅದು ನಾಥ ಪಂಥಕ್ಕೆ ಸೇರಿದ್ದ ಅತೀ ಪುರಾತನವಾದ ಮಠ. ರಾಜನ ಹೆಸರಿನಲ್ಲಿ ಪೀಠಾಧಿಪತಿಯನ್ನು ಸಂಭೋಧಿಸುವ ಈ ಮಠದಲ್ಲಿ ಇದೀಗ ಮಠಾಧೀಶರು ಹಾಗು ಶಿಷ್ಯ ವರ್ಗದ ನಡುವೆ ಧಾರ್ಮಿಕ ಸಂಘರ್ಷ ಏರ್ಪಟ್ಟಿದೆ. ಎರಡು ಸಾವಿರ ವರ್ಷಕ್ಕೂ ಹಿಂದಿನ ದೇವರ ವಿಗ್ರಹವನ್ನು ತೆಗೆದು, ನೂತನ ಮೂರ್ತಿ ಪ್ರತಿಷ್ಠೆ ಮಾಡಿರುವುದು, ಶಿಷ್ಯ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಈ ಸಂಘರ್ಷಕ್ಕೆ ಕಾರಣವಾಗಿದೆ. ಹಾಗಾದ್ರೆ ಆ ಮಠ ಯಾವುದು, ಏನಿದು ಸಂಘರ್ಷ ಎಂಬ ಡಿಟೇಲ್ಡ್ ಸ್ಟೋರಿ ಇಲ್ಲಿದೆ ನೋಡಿ. ಹೌದು.. ಮಂಗಳೂರಿನ ಕದ್ರಿ ಶ್ರೀ ಜೋಗಿ ಮಠ (Mangalore Kadri Jogi Mutt) ದಕ್ಷಿಣ ಭಾರತದಲ್ಲಿರುವ ನಾಥ ಪಂಥದ ಪ್ರಮುಖ ಕೇಂದ್ರ. ನಾಥ ಪಂಥದ ಅನುಯಾಯಿಗಳಾಗಿರುವ ಕರಾವಳಿ ಭಾಗದ ಜೋಗಿ ಸಮುದಾಯದ ಮಂದಿ ಈ ಮಠದ ಶಿಷ್ಯರಾಗಿ ಈ ಹಿಂದಿನಿಂದಲೂ ಗುರುತಿಸಿಕೊಂಡು ಬಂದಿದ್ದಾರೆ. ಆದ್ರೆ ಇದೀಗ ಈ ಜೋಗಿ ಸಮುದಾಯಕ್ಕೂ (Jogi Community) ಈ ಮಠದ ಪೀಠಾಧೀಶರಿಗೂ ಸಂಘರ್ಷ ಏರ್ಪಟ್ಟಿದೆ.

ಫೆಬ್ರವರಿ ತಿಂಗಳಲ್ಲಿ ನಡೆದ ಕಾಳಭೈರವ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭ ಮಠದ ಪೀಠಾಧಿಪತಿ ಎರಡು ಸಾವಿರ ವರ್ಷಗಳ ಹಿಂದಿನ ಕಾಲಭೈರವ ದೇವರ ವಿಗ್ರಹ ತೆಗೆದು ಹೊಸದಾದ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಈ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ. 2016ರಲ್ಲಿ ನೇಮಕಗೊಂಡ ಪೀಠಾಧಿಪತಿ ರಾಜಸ್ಥಾನ ಮೂಲದ ನಿರ್ಮಲಾನಾಥಜೀ ಶಿಷ್ಯ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಆರೋಪಿಸಿದೆ.

ಕದ್ರಿ ಜೋಗಿ ಮಠ ನಾಥ ಪಂಥದ ಮೂಲ ಪೀಠವಾಗಿರುವ ಉತ್ತರಪ್ರದೇಶದ ಗೋರಖ್‌ಪುರ ಮಠದ ಅಧೀನದಲ್ಲಿ ಬರುತ್ತೆ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಈ ಕದ್ರಿ ಯೋಗೀಶ್ವರ ಮಠ ಮಠಾಧೀಶರ ಆಯ್ಕೆ ಮಾಡುವುದೇ ಈ ಗೋರಖ್‌ಪುರ ಮಠದ ಮಠಾಧೀಶ. ಪ್ರಸ್ತುತ ಗೋರಖ್‌ಪುರ ಮಠದ ಮಠಾಧೀಶರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ 2016ರಲ್ಲಿ ಈ ಮಠದ ಮಹಾರಾಜ್‌ನ ಆಯ್ಕೆ ಮಾಡಿದ್ದರು.

ಹೀಗಾಗಿ ಈ ಸಂಘರ್ಷದ ಬಗ್ಗೆ ಶಿಷ್ಯ ವರ್ಗ ಮೂಲ ಪೀಠದ ಗಮನಕ್ಕೆ ತರುವ ಕೆಲಸ ಮಾಡಿದೆ. ಇದರ ಜೊತೆ ಮಠಕ್ಕೂ ಜೋಗಿ ಸಮಾಜಕ್ಕೂ ಇರುವ ಸಂಬಂಧದ ಬಗ್ಗೆ ದಾಖಲಾತಿಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದೆ. ಸದ್ಯ ಈಗ ಇರುವ ಮಠಾಧೀಶ ರಾಜಸ್ಥಾನ ಮೂಲದವರಾದರಿಂದ ಮಂಗಳೂರಿನಲ್ಲಿ ವ್ಯಾಪಾರ ನಡೆಸುವ ರಾಜಸ್ಥಾನದ ಮಾರ್‌ವಾಡಿಗಳು ಹಣಬಲದ ಮೂಲಕ ಪೂರ್ತಿ ಮಠವನ್ನು ತಮ್ಮ ಪಾರುಪತ್ಯಕ್ಕೆ ವಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೋಗಿ ಸಮುದಾಯದ ಮಂದಿ ಆರೋಪಿಸಿದ್ದಾರೆ.

ಕರಾವಳಿಯಲ್ಲಿನ ಜೋಗಿ ಸಮುದಾಯದ ಮಂದಿ ಹಣವನ್ನೆಲ್ಲಾ ಒಟ್ಟು ಮಾಡಿ ದೇವಳದಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಆದ್ರೆ ಇದೀಗ ಇದಕ್ಕೂ ಅಡ್ಡಿಪಡಿಸುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಯೋಗಿ ಆಧಿತ್ಯನಾಥರ (UP CM Yogi Adityanath) ಗುರುಗಳು ಸೇರಿದಂತೆ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದ ಕಾಳಭೈರವ ದೇವರ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು, ಮಠದಲ್ಲಿ ನಮಗೂ ಅವಕಾಶ ನೀಡಬೇಕು ಎಂಬುದು ಶಿಷ್ಯ ವರ್ಗದ ಆಗ್ರಹವಾಗಿದೆ.

ವರದಿ: ಅಶೋಕ್ ಪೂಜಾರಿ, ಟಿವಿ 9, ಮಂಗಳೂರು

Published On - 1:12 pm, Sat, 8 April 23

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್