ಧಾರವಾಡ-ಬೆಂಗಳೂರು ಒಂದೇ ಭಾರತ್ ರೈಲಿಗೆ ಕಲ್ಲೇಟು: ಇಬ್ಬರು ಬಾಲಕರು ಪೊಲೀಸ್ ವಶಕ್ಕೆ

| Updated By: ರಮೇಶ್ ಬಿ. ಜವಳಗೇರಾ

Updated on: Jul 05, 2023 | 10:31 AM

ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಧಾರವಾಡ-ಬೆಂಗಳೂರು ಒಂದೇ ಭಾರತ್ ರೈಲಿಗೆ ಕಲ್ಲೇಟು: ಇಬ್ಬರು ಬಾಲಕರು ಪೊಲೀಸ್ ವಶಕ್ಕೆ
ಗ್ಲಾಸ್ ಬಿರುಕು (ಎಡಚಿತ್ರ) ವಂದೇ ಭಾರತ್​ ರೈಲು (ಬಲಚಿತ್ರ)
Follow us on

ದಾವಣಗೆರೆ: ನೂತನ ಧಾರವಾಡ-ಬೆಂಗಳೂರು(Bengaluru) ಒಂದೇ ಭಾರತ್  ಎಕ್ಸ್​ಪ್ರೆಸ್​ ರೈಲಿಗೆ((Vande Bharat Express Train) )ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮಕ್ಕಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆಯ (Davanagere) ಎಸ್​ಎಸ್​ ನಗರ, ಹಾಗೂ ಭಾಷಾ ನಗರದ 12 ವರ್ಷದ ಇಬ್ಬರು ಬಾಲಕರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಸದ್ಯ ಇಬ್ಬರು ಬಾಲಕರನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇಡಲಾಗಿದೆ.’

ಇದನ್ನೂ ಓದಿ: Vande Bharat Express: ದಾವಣಗೆರೆಯಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲಿಗೆ ಕಲ್ಲು

ಕಳೆದ ಶನಿವಾರ ಅಂದರೆ (ಜುಲೈ 01) ಮಧ್ಯಾಹ್ನ 3-30ಕ್ಕೆ ಧಾರವಾಡದಿಂದ ದಾವಣಗೆರೆಗೆ ಸಂಚರಿಸುತ್ತಿದ್ದ ವೇಳೆ ರೈಲಿಗೆ ಕಲ್ಲು ಎಸೆಯಲಾಗಿತ್ತು ಪರಿಣಾಮ ರೈಲಿನ ಕಿಟಕಿ ಗಾಜಿಗೆ ಹಾನಿಯಾಗಿಯತ್ತು. ಅದೃಷ್ಟವಶಾತ್ ಯಾವುದೇ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿರಲಿಲ್ಲ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 27ರಂದು ದೇಶಾದ್ಯಂತ ಒಟ್ಟು 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಒಂದೇ ಸಮಯದಲ್ಲಿ ಹಸಿರು ನಿಶಾನೆ ತೋರಿದ್ದರು. ಇದರಲ್ಲಿ ಧಾರವಾಡ-ಬೆಂಗಳೂರು ರೈಲು ಸಹ ಒಂದಾಗಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ